ನೆಗೆಟಿವ್ ಕಮೆಂಟ್ ಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ನನ್ನ ಅಭಿಪ್ರಾಯ ಭಯವಿಲ್ಲದೆ ಮುಂದುವರೆಯುತ್ತದೆ: ನಟ ಜಗ್ಗೇಶ್ 

ನವರಸನಾಯಕ ಜಗ್ಗೇಶ್ ಚಿತ್ರರಂಗಕ್ಕೆ ಬಂದು 40 ವರ್ಷಗಳಾದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಮಾಧ್ಯಮ ಪ್ರತಿನಿಧಿಗಳನ್ನು ಕರೆದು ತಮ್ಮ ಸಿನಿಪಯಣದ ಆರಂಭದ ದಿನಗಳು, ನಂತರ ಚಿತ್ರರಂಗದಲ್ಲಿ ಬೆಳೆದದ್ದು, ಸಹಾಯ, ಸಹಕಾರ ನೀಡಿದ ಕಲಾವಿದರು, ವೈಯಕ್ತಿಕ ಜೀವನ ಹೀಗೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದರು.
ನಟ ಜಗ್ಗೇಶ್
ನಟ ಜಗ್ಗೇಶ್
Updated on

ನವರಸನಾಯಕ ಜಗ್ಗೇಶ್ ಚಿತ್ರರಂಗಕ್ಕೆ ಬಂದು 40 ವರ್ಷಗಳಾದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಮಾಧ್ಯಮ ಪ್ರತಿನಿಧಿಗಳನ್ನು ಕರೆದು ತಮ್ಮ ಸಿನಿಪಯಣದ ಆರಂಭದ ದಿನಗಳು, ನಂತರ ಚಿತ್ರರಂಗದಲ್ಲಿ ಬೆಳೆದದ್ದು, ಸಹಾಯ, ಸಹಕಾರ ನೀಡಿದ ಕಲಾವಿದರು, ವೈಯಕ್ತಿಕ ಜೀವನ ಹೀಗೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದರು.

ಪ್ಯಾನ್ ಇಂಡಿಯಾ ಸಿನೆಮಾ ಕನ್ನಡ ಚಿತ್ರರಂಗಕ್ಕೆ, ಇಲ್ಲಿನ ಕಲಾವಿದರ ಬೆಳವಣಿಗೆಗೆ ಒಳ್ಳೆಯದಲ್ಲ ಎಂದು ಜಗ್ಗೇಶ್ ಹೇಳಿದ್ದರು. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ತರಹೇವಾರಿ ಪ್ರತಿಕ್ರಿಯೆಗಳು ಬಂದಿದ್ದವು. ಅದರಲ್ಲಿ ಸಾಕಷ್ಟು ನೆಗೆಟಿವ್ ಕಮೆಂಟ್ ಗಳು ಬಂದಿದ್ದವು. ಇದಕ್ಕೆ ಟ್ವೀಟ್ ಮೂಲಕ ಉತ್ತರಿಸಿರುವ ಜಗ್ಗೇಶ್, ನನ್ನ ನೇರಮಾತುಗಳನ್ನು ಹಿಂದಿನಿಂದಲೂ ಹಲವರು ವಿರೋಧಿಸಿಕೊಂಡು ಬಂದಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಸುಮ್ಮಸುಮ್ಮನೆ ಕಮೆಂಟ್ ಮಾಡುತ್ತಾ ಹೋಗುತ್ತಾರೆ. ಅಂತೂ ನಾನು ಜನರ ಬಾಯಲ್ಲಿ, ಮನದಲ್ಲಿ ಮಾತನಾಡಿಕೊಳ್ಳುವಂತವನಾದೆನಲ್ಲಾ, ಒಂದು ದಿನದ ಮಟ್ಟಿಗಾದರೂ ಬಳಕೆಯಾದೆನಲ್ಲಾ ಅದೇ ಸಂತೋಷ ಎಂದಿದ್ದಾರೆ.

ನನ್ನ ಬಗ್ಗೆ ಬಂದಿರುವ ನೆಗೆಟಿವ್ ಮಾತುಗಳಿಂದ ನಾನು ಕುಗ್ಗುವುದಿಲ್ಲ. ಅವರು ಅವರ ಅಭಿಪ್ರಾಯಗಳನ್ನು ಹೇಳಿಕೊಂಡಿದ್ದಾರೆ. ನಾನು ನನ್ನ ಅಭಿಪ್ರಾಯವನ್ನು ಭಯವಿಲ್ಲದೆ ಮುಂದುವರಿಸುತ್ತೇನೆ, ಸೋಷಿಯಲ್ ಮೀಡಿಯಾ, ಟಿವಿ ಹುಟ್ಟೋಕ್ ಮುಂಚೆ ಬಂದವನು ನಾನು, ಈಗ ಸಿನಿಮಾನಟ ಆಗುತ್ತಿದ್ದಂತೆ ಮೀಡಿಯಾ ನಿರ್ವಹಣೆ ತಂಡ ಎಂದು ಇಟ್ಟುಕೊಳ್ಳುತ್ತಾರೆ, ಅವರವರ ಬಗ್ಗೆ ಅವರೇ ಬರೆದುಕೊಳ್ಳುತ್ತಾರೆ, ಯುವಜನತೆ ಅದನ್ನೇ ನಂಬುತ್ತಾರೆ, ಅದರಲ್ಲೇ ಜೀವಿಸುತ್ತಾರೆ, ಒಳಗಿರುವ ನಮಗೆ ಗೊತ್ತು, ಹೊರಗಿರುವ ಅಮಾಯಕರಿಗೆ ಇದು ಗೊತ್ತಾಗುವುದಿಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com