ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಪ್ರಭಾಸ್ ನಟನೆಯ ಆದಿ ಪುರುಷ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಗಾಳಿ ಸುದ್ದಿ ನಿಜವಾಗುತ್ತಿದೆ.
ರಾಮಾಯಣದ ಕಥಾ ವಸ್ತುವನ್ನಿರಿಸಿಕೊಂಡು ಆದಿ ಪುರುಷ್ ಸಿನಿಮಾ ತಯಾರಿಸುತ್ತಿದ್ದು, ಚಿತ್ರ ತಂಡ ವಿಭೀಷಣನ ಪಾತ್ರಕ್ಕಾಗಿ ನಟ ಸುದೀಪ್ ಅವರ ಬಳಿ ಚರ್ಚಿಸಿದೆ ಎಂದು ಹೇಳಲಾಗಿದೆ.
ನಿರ್ದೇಶಕರ ಕಡೆಯಿಂದ ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ, ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸುದೀಪ್, ಆದಿ ಪುರುಷ್ ಚಿತ್ರತಂಡ ನನ್ನ ಮ್ಯಾನೇಜರ್ ಅವರನ್ನು ಭೇಟಿ ಮಾಡಿದೆ, ನಾನು ಇನ್ನೂ ಅವರನ್ನು ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ.
ಅವರ ಜೊತೆ ಚರ್ಚಿಸಿ ಸಿನಿಮಾದಲ್ಲಿ ನಟಿಸುವ ಬಗ್ಗೆ ಖಚಿತಪಡಿಸುವುದಾಗಿ ಸುದೀಪ್ ಹೇಳಿದ್ದಾರೆ. ಮುಂಬರುವ ಶಂಕರ್ ಮತ್ತು ರಾಮ್ ಚರಣ್ ಮುಂದಿನ ಸಿನಿಮಾದಲ್ಲಿ ಸುದೀಪ್ ಅವರನ್ನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾದ ಕೆಲವೇ ದಿನಗಳಲ್ಲಿ ಈ ಸುದ್ದಿ ಬಂದಿದೆ.
ಈ ಹಿಂದೆ ಸಲ್ಮಾನ್ ಖಾನ್ ನಟನೆಯ ದಬಾಂಗ್ 3 ಸಿನಿಮಾದಲ್ಲಿ ಸುದೀಪ್ ಕಾಣಿಸಿಕೊಂಡಿದ್ದರು. ಸದ್ಯ ಕೋಟಿಗೊಬ್ಬ 3 ಮತ್ತು ವಿಕ್ರಾಂತ್ ರೋಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದಿ ಪುರುಷ್ ಸಿನಿಮಾದಲ್ಲಿ ಸೈಫ್ ಅಲಿ ಖಾನ್, ಕೃತಿ ಸನೋನ್ ಮತ್ತು ಸನ್ನಿ ಸಿಂಗ್ ನಟಿಸಿದ್ದಾರೆ.
Advertisement