ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಮಿಳು ನಟ ವಿಜಯ್ ಸೇತುಪತಿ ಮೇಲೆ ಹಲ್ಲೆ ಯತ್ನ..!

ಬೆಂಗಳೂರಿನಲ್ಲಿ ಖ್ಯಾತ ತಮಿಳುನಟ ವಿಜಯ್ ಸೇತುಪತಿ ಮೇಲೆ ಹಲ್ಲೆ ಯತ್ನ ನಡೆದಿದೆ.
ನಟ ವಿಜಯ್ ಸೇತುಪತಿ ಮೇಲೆ ಹಲ್ಲೆ
ನಟ ವಿಜಯ್ ಸೇತುಪತಿ ಮೇಲೆ ಹಲ್ಲೆ

ಬೆಂಗಳೂರು: ಬೆಂಗಳೂರಿನಲ್ಲಿ ಖ್ಯಾತ ತಮಿಳುನಟ ವಿಜಯ್ ಸೇತುಪತಿ ಮೇಲೆ ಹಲ್ಲೆ ಯತ್ನ ನಡೆದಿದೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಪಾನಮತ್ತ ವ್ಯಕ್ತಿಯೋರ್ವ ಕುಡಿದ ಅಮಲಿನಲ್ಲಿ ನಟ ಮತ್ತು ಅವರ ಆಪ್ತರೊಂದಿಗೆ ನಿಲ್ದಾಣದ ಆವರಣದಲ್ಲೇ ಕಿರಿಕ್ ಮಾಡಿಕೊಂಡಿದ್ದಾರೆ. ಪರಸ್ಪರ ವಾಗ್ವಾದ ನಡೆದಿದ್ದು ಈ ವೇಳೆ ಪಾನಮತ್ತ ವ್ಯಕ್ತಿ ನಟ ಮತ್ತು ಅವರ ಆಪ್ತರ ಮೇಲೆ ಹಲ್ಲೆ ಮಾಡಿದ್ದಾನೆ.

ಇದಕ್ಕೂ ಮುನ್ನ ವಿಮಾನದಲ್ಲಿ ನಟ ವಿಜಯ್ ಸೇತುಪತಿಯವರ ಪಿಎ ಜೊತೆಗೂ ಸಹ ಪ್ರಯಾಣಿಕನೊಬ್ಬ ಜಗಳ ಮಾಡಿದ್ದನು. ಗಾಂಧಿ ಮತ್ತು ಸಹ-ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆಯಿತು. ಜಗಳ ಮಾಡಿದ ವ್ಯಕ್ತಿಯನ್ನು ಜಾನ್ಸನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಹಲ್ಲೆ ಪ್ರಕರಣ ಸಂಬಂಧ ನಟ ವಿಜಯ್ ಸೇತುಪತಿಯಾಗಲಿ ಅವರ ಆಪ್ತರಾಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು, 'ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ದಾಳಿಯನ್ನು ವಿಫಲಗೊಳಿಸಿದರು ಮತ್ತು ಇಬ್ಬರೂ ಕ್ಷಮೆಯಾಚನೆ ಪತ್ರಗಳನ್ನು ಸಲ್ಲಿಸಿದ ನಂತರ ಎಚ್ಚರಿಕೆಯ ನಂತರ ಇಬ್ಬರನ್ನೂ ಬಿಡಲಾಯಿತು' ಎಂದು ತಿಳಿಸಿದ್ದಾರೆ.

ವಿಮಾನವು ಮಧ್ಯರಾತ್ರಿಯ ಸುಮಾರಿಗೆ ಇಳಿದ ನಂತರ, ನಟರು ಹೊರನಡೆಯುತ್ತಿದ್ದರು. ಆಗಮನ ವಿಭಾಗದಲ್ಲಿ, ಅಮಲೇರಿದ ಸ್ಥಿತಿಯಲ್ಲಿದ್ದ ಜಾನ್ಸನ್ ಮಹಾಗಾಂಧಿಯನ್ನು ಒದೆಯಲು ಪ್ರಯತ್ನಿಸಿದರು. ಆದರೆ ಅವರ ಸ್ನೇಹಿತರೊಬ್ಬರು ಅವರನ್ನು ಪಕ್ಕಕ್ಕೆ ತಳ್ಳಿದರು. ಸ್ಥಳದಲ್ಲಿದ್ದ ಸಿಐಎಸ್‌ಎಫ್ ಸಿಬ್ಬಂದಿ ಮಧ್ಯ ಪ್ರವೇಶಿಸಿ ಜಾನ್ಸನ್‌ನನ್ನು ವಶಕ್ಕೆ ಪಡೆದಿದ್ದಾರೆ. ವಿಜಯ್ ಸೇತುಪತಿ ಸೇರಿದಂತೆ ಎರಡೂ ಕಡೆಯವರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಕರೆತರಲಾಯಿತು. ಗಾಂಧಿ ಮತ್ತು ಜಾನ್ಸನ್ ಇಬ್ಬರೂ ಯಾವುದೇ ದೂರು ದಾಖಲಿಸದಿರಲು ನಿರ್ಧರಿಸಿದರು. ಇಬ್ಬರಿಂದಲೂ ಕ್ಷಮಾಪಣೆ ಪತ್ರಗಳನ್ನು ತೆಗೆದುಕೊಳ್ಳಲಾಗಿದ್ದು, ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಬಳಿಕ ಬಿಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯ್ ಸೇತುಪತಿ, ಮಹಾಗಾಂಧಿ ಮತ್ತು ಇತರರು ಮಂಗಳವಾರ ಸಂಜೆ ಚೆನ್ನೈನಿಂದ ಬೆಂಗಳೂರಿಗೆ ತೆರಳಿದ್ದರು ಎಂದು ತಿಳಿದುಬಂದಿದೆ.  ಮಾಸ್ಟರ್ ಚೆಫ್ ತಮಿಳು ಚಿತ್ರೀಕರಣಕ್ಕಾಗಿ ವಿಜಯ್ ಸೇತುಪತಿ ಬೆಂಗಳೂರಿಗೆ ಬಂದಿದ್ದರು ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com