ಸ್ಯಾಂಡಲ್ ವುಡ್ ಗೆ 'ನೆನಪಿರಲಿ' ಪ್ರೇಮ್ ಪುತ್ರಿ ಅಮೃತಾ ಎಂಟ್ರಿ; ಡಾಲಿ ಧನಂಜಯ ನಿರ್ಮಾಣದ 'ಟಗರು ಪಲ್ಯ' ಚಿತ್ರಕ್ಕೆ ನಾಯಕಿ!

ಡಾಲಿ ಧನಂಜಯ ನಿರ್ಮಾಣದ ಮೂರನೇ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ನಾಗಭೂಷಣ್ ಮತ್ತು ಅಮೃತಾ ಪ್ರೇಮ್
ನಾಗಭೂಷಣ್ ಮತ್ತು ಅಮೃತಾ ಪ್ರೇಮ್

ಡಾಲಿ ಧನಂಜಯ ನಿರ್ಮಾಣದ ಮೂರನೇ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ನಟ ನಾಗಭೂಷಣ್​ ಅವರು ‘ಟಗರು ಪಲ್ಯ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಡಾಲಿ ಧನಂಜಯ್​ ಬಂಡವಾಳ ಹೂಡುತ್ತಿರುವ ಈ ಚಿತ್ರಕ್ಕೆ ಉಮೇಶ್​ ಕೆ. ಕೃಪ ನಿರ್ದೇಶನ ಮಾಡುತ್ತಿದ್ದಾರೆ. ಅಮೃತಾ ಪ್ರೇಮ್​ ಅವರ ಹೊಸ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಲಾಗಿದೆ. ಈ ಪೋಸ್ಟರ್​ನಲ್ಲಿ ಹಳ್ಳಿ ಹುಡುಗಿಯ ಗೆಟಪ್​ನಲ್ಲಿ ಅಮೃತಾ ಪ್ರೇಮ್​ ಕಾಣಿಸಿಕೊಂಡಿದ್ದಾರೆ.

ಅಮೃತಾಗೆ ಹಲವು ರೀಲ್ಸ್ ಮಾಡುತ್ತಿದ್ದರು. ಈ ವಿಡಿಯೋವನ್ನು ತಂದೆ ಪ್ರೇಮ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದರು. ಇದನ್ನು ನೋಡಿದ ಧನಂಜಯ್ ತಾವು ನಿರ್ಮಾಣ ಮಾಡುತ್ತಿರುವ ಸಿನಿಮಾಜದಲ್ಲಿ ನನ್ನ ಮಗಳಿಗೆ ಪಾತ್ರ ನೀಡುತ್ತಿರುವುದಾಗಿ ತಿಳಿಸಿದರು. ನಾನು ಕಥೆ ಹೇಳಿದೆ, ಕಥೆ ತುಂಬಾ ನೈಜವಾಗಿದೆ. ಅಮೃತಾಳನ್ನು ಲಾಂಚ್ ಮಾಡಲು ಇದು ಒಳ್ಳೆ ಸಿನಿಮಾ ಎಂದು ನಾನು ನಿರ್ಧರಿಸಿದೆ. ಉತ್ತಮ ಬ್ಯಾನರ್ ಕೂಡ ಇದಾಗಿದೆ ಎಂದು ಪ್ರೇಮ್ ತಿಳಿಸಿದ್ದಾರೆ.

ಟಗರು ಪಲ್ಯ ಗ್ರಾಮೀಣ ಭಾಗದ ವಿಷಯವಾಗಿದ್ದು, ಕಾರ್ಯಕ್ರಮದ ಸುತ್ತ ಸುತ್ತುತ್ತದೆ, ದೇವಸ್ಥಾನದ ಆವರಣದಲ್ಲಿ ಅಡುಗೆ ಮಾಡಿ ದೇವರಿಗೆ ಅರ್ಪಿಸುವ ಗ್ರಾಮಸ್ಥರು. ಚಿತ್ರದಲ್ಲಿ ಗ್ರಾಮೀಣ ಜೀವನ, ಸಂಪ್ರದಾಯಗಳು ಹಾಗೂ ಹಳ್ಳಿಗಳಲ್ಲಿ ಬೇರೂರಿರುವ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ನಿರ್ದೇಶಕ ಉಮೇಶ್ ಕೆ ಕೃಪ ತಿಳಿಸಿದ್ದಾರೆ.

ಪ್ರೇಮ್ ಮಗಳನ್ನು ನಾಯಕಿಯಾಗಿ ಮಾಡುವ ಬಗ್ಗೆ ಮಾತನಾಡಿರುವ ನಿರ್ದೇಶಕ ಉಮೇಶ್, ಪ್ರೆಶ್ ಫೇಸ್ ಹುಡುಕುತ್ತಿರುವುದಾಗಿ ಹೇಳಿದ್ದು, ಅಮೃತಾ ಅವರು ಫಿಟ್ ಆಗಿದ್ದಾರೆ. "ಅವರು ನಾಗಭೂಷಣ ಅವರ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಾರೆ.   ಚಿತ್ರದಲ್ಲಿ ಪ್ರಬಲ ಪಾತ್ರವನ್ನು ಹೊಂದಿದ್ದಾರೆ , ಅವರಿಗೆ ತುಂಬಾ ಅವಕಾಶ ನೀಡಲಾಗಿದೆ ಎಂದಿದ್ದಾರೆ.

ಟಗರು ಪಲ್ಯದಲ್ಲಿ ನಾಗಭೂಷಣ ಮತ್ತು ಅಮೃತಾ ಅವರಲ್ಲದೆ ತಾರಾ, ರಂಗಾಯಣ ರಘು ಮತ್ತು ಶರತ್ ಲೋಹಿತಾಶ್ವ ಕೂಡ ನಟಿಸಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡುತ್ತಿದ್ದು, ಟಗರು ಪಾಳ್ಯದ ಛಾಯಾಗ್ರಹಣ ಎಸ್ ಕೆ ರಾವ್ ಅವರದ್ದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com