'ಆರ' ಥ್ರಿಲ್ಲರ್ ಆಧ್ಯಾತ್ಮಿಕ ಸಿನಿಮಾ: ನಿರ್ದೇಶಕ ಅಶ್ವಿನ್ ವಿಜಯಮೂರ್ತಿ

ಅಶ್ವಿನ್ ವಿಜಯಮೂರ್ತಿ ಅವರು ಆರ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸಿನಿಮಾವನ್ನು ಮುಗ್ಧ ವ್ಯಕ್ತಿಯ ಜೀವನದಲ್ಲಿ ದೇವರ ಸುಂದರವಾದ ಮತ್ತು ದೈವಿಕ ಹಸ್ತಕ್ಷೇಪ ಎಂದು ವಿವರಿಸುತ್ತಾರೆ. ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ ಚಿತ್ರದ ನಿರ್ದೇಶಕರು ಆರವನ್ನು ಆಧ್ಯಾತ್ಮಿಕ ಥ್ರಿಲ್ಲರ್ ಎಂದು ಕರೆಯುತ್ತಾರೆ.
ಆರ ಕನ್ನಡ ಸಿನಿಮಾ ಪೋಸ್ಟರ್
ಆರ ಕನ್ನಡ ಸಿನಿಮಾ ಪೋಸ್ಟರ್

ಅಶ್ವಿನ್ ವಿಜಯಮೂರ್ತಿ ಅವರು ಆರ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸಿನಿಮಾವನ್ನು ಮುಗ್ಧ ವ್ಯಕ್ತಿಯ ಜೀವನದಲ್ಲಿ ದೇವರ ಸುಂದರವಾದ ಮತ್ತು ದೈವಿಕ ಹಸ್ತಕ್ಷೇಪ ಎಂದು ವಿವರಿಸುತ್ತಾರೆ. ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ ಚಿತ್ರದ ನಿರ್ದೇಶಕರು ಆರವನ್ನು ಆಧ್ಯಾತ್ಮಿಕ ಥ್ರಿಲ್ಲರ್ ಎಂದು ಕರೆಯುತ್ತಾರೆ.

ಅಶ್ವಿನ್ ನಿರ್ದೇಶನದ ಈ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ ರೋಹಿತ್ ಅವರೇ ನಾಯಕನಾಗಿ ನಟಿಸಿದ್ದಾರೆ. 'ಈ ಸಿನಿಮಾವು ತನ್ನ ಜೀವನದಲ್ಲಿ ಅತೃಪ್ತರಾಗಿರುವ ಮತ್ತು ಇತರ ಆಯಾಮಗಳನ್ನು ಅನ್ವೇಷಿಸಲು ಬಯಸುವ ಯುವ ಮುಗ್ಧ ಅರ್ಚಕನ ಪ್ರಯಾಣವನ್ನು ಒಳಗೊಂಡಿದೆ. ಆದರೆ, ಆತ ಸವಾಲಿನ ಸಂದರ್ಭಗಳಲ್ಲಿ ಸಿಲುಕಿಕೊಳ್ಳುತ್ತಾನೆ ಮತ್ತು ದೈವಿಕ ಉದ್ದೇಶವನ್ನು ಪೂರೈಸಲು ವಿಶ್ವವು ಅವನಿಗೆ ಹಣ, ಸ್ವಭಾವ ಮತ್ತು ಶಕ್ತಿಯೊಂದಿಗೆ ಪಾಠವನ್ನು ಕಲಿಸುತ್ತದೆ' ಎಂದು ಅಶ್ವಿನ್ ಹಂಚಿಕೊಂಡಿದ್ದಾರೆ.

ದೀಪಿಕಾ ಆರಾಧ್ಯ

ಆರ ಸಿನಿಮಾಗೆ ಗಿರೀಶ್ ಹೋತೂರ್ ಅವರ ಸಂಗೀತ ಮತ್ತು ಶ್ರೀ ಹರಿ ಅವರ ಛಾಯಾಗ್ರಹಣವಿದೆ. ನಾಯಕಿಯಾಗಿ ದೀಪಿಕಾ ಆರಾಧ್ಯ ನಟಿಸುತ್ತಿದ್ದು, ಈ ಚಿತ್ರದಲ್ಲಿ ಅನನ್ ನಿನಾದಂ, ಸತ್ಯ ರಾಜ್, ನಿಖಿಲ್, ಸೋನಿಯಾ ಕೃಷ್ಣಮೂರ್ತಿ ಶ್ರೀಪಾದ್, ಚಕ್ರಪಾಹಿ, ಲೋಕೇಶ್, ಪ್ರತೀಕ್ ಮುಂತಾದವರಿದ್ದಾರೆ.

ಚಿತ್ರದ ಸಂಭಾಷಣೆಗಳು ಉಡುಪಿ ಆಡುಭಾಷೆ ಮತ್ತು ಸ್ವಲ್ಪ ಕನ್ನಡವನ್ನು ಹೊಂದಿವೆ. ಉಡುಪಿ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳುವ ನಿರ್ದೇಶಕರು, ಮೇ ತಿಂಗಳಿನಲ್ಲಿ ಬಿಡುಗಡೆ ಮಾಡುವ ಗುರಿ ಹೊಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com