ತೂತು ಮಡಿಕೆ (2022) ಚಿತ್ರದ ನಿರ್ದೇಶಕ ಚಂದ್ರ ಕೀರ್ತಿ ತಮ್ಮ ಮುಂದಿನ ಯೋಜನೆಗಾಗಿ ತಯಾರಿ ನಡೆಸುತ್ತಿದ್ದಾರೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೆವು. ಚಿತ್ರಕ್ಕೆ ಹುಲಿಯಾ ಎಂದು ಹೆಸರಿಡಲಾಗಿದೆ ಎಂದು ಚಿತ್ರತಂಡ ಘೋಷಿಸಿದೆ ಮತ್ತು ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
ಕುತೂಹಲಕಾರಿಯಾಗಿ, ಇದೇ ಶೀರ್ಷಿಕೆಯಲ್ಲಿ 1996ರಲ್ಲಿ ಹಿರಿಯ ನಟ ದೇವರಾಜ್ ನಟನೆಯ ಸಿನಿಮಾ ತೆರೆಕಂಡಿತ್ತು. ಚಂದ್ರ ಕೀರ್ತಿ ಅವರು ಸಿಲಿಕಾನ್ ಸಿಟಿ, ಕಿಸ್, ಮೂಕವಿಸ್ಮಿತ ಮತ್ತು ಬೆಂಕಿಯಂತಹ ಚಿತ್ರಗಳಲ್ಲಿನ ಪ್ರಮುಖ ಪಾತ್ರಗಳಿಗಾಗಿ ಖ್ಯಾತಿಯನ್ನು ಗಳಿಸಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ನಂತರ ಅವರು ತೂತು ಮಡಿಕೆ ಸಿನಿಮಾ ಮೂಲಕ ಚೊಚ್ಚಲ ನಿರ್ದೇಶನಕ್ಕಿಳಿದಿದ್ದರು. ನಿರ್ದೇಶನವಷ್ಟೇ ಅಲ್ಲದೆ, ಅವರು ಚಿತ್ರದಲ್ಲಿ ನಾಯಕನಾಗಿಯೂ ನಟಿಸಿದರು.
ಹುಲಿಯಾ ಸಿನಿಮಾ ಮೂಲಕ ಮತ್ತೇ ನಿರ್ದೇಶನಕ್ಕಿಳಿದಿರುವ ಚಂದ್ರ ಕೀರ್ತಿ, ಲವ್-ಆಕ್ಷನ್ ಎಂಟರ್ಟೈನರ್ ಅನ್ನು ಮಾಡುವ ನಿರೀಕ್ಷೆಯಿದೆ. ನಿರ್ದೇಶನದ ಜೊತೆಗೆ ಚಂದ್ರ ಕೀರ್ತಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ನಟ ದೈಹಿಕ ರೂಪಾಂತರಕ್ಕೆ ಒಳಗಾಗಿರುವುದನ್ನು ತೋರಿಸುತ್ತದೆ. ಈ ಚಿತ್ರಕ್ಕೆ ತೂತು ಮಡಿಕೆ ನಿರ್ಮಿಸಿದ ಮಧುಸೂದನ್ ರಾವ್ ಮತ್ತು ವಸಂತ ವಲ್ಲಭ ಬೆಂಬಲ ನೀಡಲಿದ್ದಾರೆ.
ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದು, ಸ್ವಾಮಿನಾಥನ್ ಅವರ ಛಾಯಾಗ್ರಹಣವಿದೆ. ತಾರಾಗಣ ಮತ್ತು ಸಿಬ್ಬಂದಿಯ ಹೆಚ್ಚಿನ ವಿವರಗಳು ಶೀಘ್ರದಲ್ಲೇ ಬಹಿರಂಗಗೊಳ್ಳುವ
Advertisement