ಇತ್ತೀಚೆಗೆ ಮಲಯಾಳಂನಲ್ಲಿ ದಿಲೀಪ್ ಅಭಿನಯದ ಬಾಂದ್ರಾ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಕನ್ನಡ ನಟ ಆರ್ಯನ್ ಸಂತೋಷ್, ಹಿರಿಯ ನಟ ಮಮ್ಮುಟ್ಟಿ ಅವರ ಮುಂದಿನ ಚಿತ್ರಕ್ಕಾಗಿ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಈ ಸಂಬಂಧ ಇದುವರೆಗೂ ನಟ ಅರ್ಯನ್ ಸಂತೋಷ್ ಎಲ್ಲಿಯೂ ವಿವರಗಳ ಬಗ್ಗೆ ಮಾಹಿತಿ ನೀಡಿಲ್ಲ. ಬಾಂದ್ರಾದಲ್ಲಿ, ಆರ್ಯನ್ ಸಂಜಯ್ ಭಟ್ ಎಂಬ ಉತ್ತರ ಭಾರತದ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.
ಈ ಚಿತ್ರವು ಮಲಯಾಳಂ ಮತ್ತು ಕನ್ನಡದಲ್ಲಿ ಅವರಿಗೆ ಮತ್ತಷ್ಟು ಹೆಚ್ಚಿನ ಅವಕಾಶಗಳಿಗೆ ಬಾಗಿಲು ತೆರೆಯುತ್ತದೆ ಎಂದು ನಂಬಿದ್ದಾರೆ. ಅವರ ಮುಂದಿನ ಕನ್ನಡ ಪ್ರಾಜೆಕ್ಟ್, ಭವಾನಿ ಫೈಲ್ಸ್ ಸಿನಿಮಾಗೆ ಅವರು ಚಿತ್ರಕಥೆ ಬರೆದಿದ್ದಾರೆ, ಇದನ್ನು ಮಲಯಾಳಂನಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲು ಸಿದ್ಧವಾಗಿದೆ.
Advertisement