ರಾಧಿಕಾ ಕುಮಾರಸ್ವಾಮಿ ಸದ್ಯಕ್ಕೆ 'ಭೈರಾದೇವಿ' ಮತ್ತು 'ಅಜಾಗ್ರತ'ಎಂಬ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದು, ಅವು ನಿರ್ಮಾಣದ ವಿವಿಧ ಹಂತಗಳಲ್ಲಿವೆ. ನಟಿಯ ಇತ್ತೀಚಿನ ಹುಟ್ಟುಹಬ್ಬದ ಸಂದರ್ಭದಲ್ಲಿ, ಎರಡೂ ಚಿತ್ರತಂಡಗಳು ಭೈರಾದೇವಿ ಸಿನಿಮಾದ ಟೀಸರ್ ಬಿಡುಗಡೆ ಮಾಡಿದೆ ಮತ್ತು ಅಜಾಗ್ರತ ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
ರಾಧಿಕಾ ಈ ಸಿನಿಮಾಗಳ ಅನನ್ಯತೆ ಮತ್ತು ಅವುಗಳಿಗಾಗಿ ಮಾಡಿದ ಕಠಿಣ ಪರಿಶ್ರಮದ ಬಗ್ಗೆ ಮಾತನಾಡಿದ್ದಾರೆ. ವಿಶೇಷವಾಗಿ ಭೈರಾದೇವಿಯಲ್ಲಿ ಅಘೋರಿಯಾಗಿ ತಮ್ಮ ಪಾತ್ರದ ಕುರಿತು ಹೇಳಿದರು. 'ಆರಂಭದಲ್ಲಿ, ನಾನು ಚಿತ್ರದ ಪ್ರಮುಖ ಸ್ಥಳವಾದ ಸ್ಮಶಾನದ ಬಗ್ಗೆ ಹೆದರುತ್ತಿದ್ದೆ. ಆದರೆ, ಪಾತ್ರಕ್ಕೆ ಜೀವ ತುಂಬಲು ಸಹಾಯ ಮಾಡಿದ್ದಕ್ಕಾಗಿ ನಾನು ನಿರ್ದೇಶಕರಿಗೆ ಧನ್ಯವಾದ ಹೇಳಬೇಕು' ಎಂದು ಅವರು ಹೇಳಿದರು.
ಭೈರಾದೇವಿಯಲ್ಲಿ, ನಟಿ ರಾಧಿಕಾ ಅವರು ಅಘೋರಿ ಮಹಿಳೆಯಾಗಿ ನಟಿಸಿದ್ದಾರೆ. ಇದು ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ನೋಡಿರದ ಪರಿಕಲ್ಪನೆಯಾಗಿದೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆದಿರುವ ಶ್ರೀಜೈ ನಿರ್ದೇಶನದ ಈ ಚಿತ್ರದಲ್ಲಿ ರಮೇಶ್ ಅರವಿಂದ್ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ.
ಇನ್ನುಳಿದಂತೆ ಭೈರಾದೇವಿಯಲ್ಲಿ ರಂಗಾಯಣ ರಘು, ರವಿಶಂಕರ್, ಸ್ಕಂದ ಅಶೋಕ್, ಅನು ಮುಖರ್ಜಿ, ಮಾಳವಿಕಾ ಅವಿನಾಶ್ ಮತ್ತು ಸುಚೇಂದ್ರ ಪ್ರಸಾದ್ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.
ಎಂ ಶಶಿಧರ್ ನಿರ್ದೇಶನದ ಶ್ರೇಯಸ್ ತಲ್ಪಾಡೆ ಕೂಡ ನಟಿಸಿರುವ ಅಜಾಗ್ರತ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ರಾಧಿಕಾ ಬಹಿರಂಗಪಡಿಸಿದ್ದಾರೆ.
Advertisement