ರಾಘವೇಂದ್ರ ರಾಜ್ ಕುಮಾರ್
ರಾಘವೇಂದ್ರ ರಾಜ್ ಕುಮಾರ್

ಯಾವುದೇ ಸಿನಿಮಾದ ನಿಜವಾದ ನಾಯಕ ಎಂದರೆ 'ಶಕ್ತಿಶಾಲಿ ಕಥೆ': ನಟ ರಾಘವೇಂದ್ರ ರಾಜ್‌ಕುಮಾರ್

13 ಚಿತ್ರದಲ್ಲಿ ನಟಿ ಶ್ರುತಿ ಮತ್ತು ನಟ ಪ್ರಮೋದ್ ಶೆಟ್ಟಿ ಜೊತೆಗೆ ನಟ ರಾಘವೇಂದ್ರ ರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದಾರೆ. ಈ ಕುರಿತು ಮಾತನಾಡುವ ಅವರು, 13 ಅನ್ನು ಅರ್ಥಪೂರ್ಣ ಆಧ್ಯಾತ್ಮಿಕ ಮತ್ತು ಸಮುದಾಯಕ್ಕೆ ಸಂದೇಶ ನೀಡುವ ಚಿತ್ರ ಎಂದು ಕರೆದಿದ್ದಾರೆ. 
Published on

'13' ಅನ್ನು ಸಾಮಾನ್ಯವಾಗಿ ಚಲನಚಿತ್ರಕ್ಕೆ ಅಶುಭ ಶೀರ್ಷಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಬೆರಳೆಣಿಕೆಯಷ್ಟು ನಿರ್ದೇಶಕರು ಈ ಸಂಖ್ಯೆಯನ್ನು ಸುತ್ತುವರೆದಿರುವ ರಹಸ್ಯವನ್ನು ಸ್ವೀಕರಿಸಿದ್ದಾರೆ. ಈಪೈಕಿ ನಿರ್ದೇಶಕ ಕೆ ನರೇಂದ್ರ ಬಾಬು ಕೂಡ ಒಬ್ಬರು. ಅವರು 13ನೇ ಸಂಖ್ಯೆಯನ್ನು ಕೇಂದ್ರವಾಗಿಟ್ಟುಕೊಂಡೇ ಸಿನಿಮಾ ಮಾಡಿದ್ದಾರೆ. '13' ಎಂಬ ಶೀರ್ಷಿಕೆಯ ಚಿತ್ರವು ಈ ವಾರ ತೆರೆಗೆ ಬರಲಿದೆ.

ಚಿತ್ರದಲ್ಲಿ ನಟಿ ಶ್ರುತಿ ಮತ್ತು ನಟ ಪ್ರಮೋದ್ ಶೆಟ್ಟಿ ಜೊತೆಗೆ ನಟ ರಾಘವೇಂದ್ರ ರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದಾರೆ. ಈ ಕುರಿತು ಮಾತನಾಡುವ ಅವರು, 13 ಅನ್ನು ಅರ್ಥಪೂರ್ಣ ಆಧ್ಯಾತ್ಮಿಕ ಮತ್ತು ಸಮುದಾಯಕ್ಕೆ ಸಂದೇಶ ನೀಡುವ ಚಿತ್ರ ಎಂದು ಕರೆದಿದ್ದಾರೆ. 'ಇದು ನಮ್ಮ ಜೀವನದಲ್ಲಿ ಸಂಖ್ಯೆಗಳು ವಹಿಸುವ ಪ್ರಮುಖ ಪಾತ್ರವನ್ನು ಆಳವಾಗಿ ಪರಿಶೀಲಿಸುತ್ತದೆ. 'ಸಂಖ್ಯೆ 13ರ ಛಾಯೆಯನ್ನು ಹೇಗೆ ಜಯಿಸಬಹುದು?' ಎಂಬ ಜಿಜ್ಞಾಸೆಯ ಪ್ರಶ್ನೆಯನ್ನು ಅನ್ವೇಷಿಸುತ್ತದೆ. ಸಿನಿಮಾ ಈ ಸವಾಲನ್ನು ಚಿತ್ರಿಸುತ್ತದೆ. ನಕಾರಾತ್ಮಕತೆಯನ್ನು ಧನಾತ್ಮಕವಾಗಿ ಪರಿವರ್ತಿಸುತ್ತದೆ' ಎಂದು ಅವರು ಹೇಳುತ್ತಾರೆ.

<strong>13 ಚಿತ್ರದಲ್ಲಿ ಶ್ರುತಿ ಮತ್ತು ನಟ ರಾಘವೇಂದ್ರ ರಾಜ್‌ಕುಮಾರ್</strong>
13 ಚಿತ್ರದಲ್ಲಿ ಶ್ರುತಿ ಮತ್ತು ನಟ ರಾಘವೇಂದ್ರ ರಾಜ್‌ಕುಮಾರ್

ನಂಬರ್ ಗೇಮ್‌ನ ಹೊರತಾಗಿ, ಈ ಚಿತ್ರವು ಕೋಮು ಸೌಹಾರ್ದತೆಯನ್ನು ಎತ್ತಿ ತೋರಿಸುತ್ತದೆ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವರು ಮೋಹನ್ ಕುಮಾರ್ ಎಂಬ ಹಿಂದೂವಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಶ್ರುತಿ ಮುಸ್ಲಿಂ ಮಹಿಳೆ ಸಾಹಿರಾ ಭಾನುವಾಗಿ ನಟಿಸಿದ್ದಾರೆ. 'ನಾವಿಬ್ಬರೂ ನಿರ್ವಹಿಸಿದ ಪಾತ್ರಗಳು ಜಾತಿ ಮತ್ತು ಧರ್ಮದ ಗಡಿಗಳನ್ನು ಮೀರಿ, ಸಾಮರಸ್ಯದ ಅಪ್ಪುಗೆಯಲ್ಲಿ ಒಂದಾಗುತ್ತವೆ. ಚಿತ್ರದ ನಿರೂಪಣೆ ಸಸ್ಪೆನ್ಸ್ ಆಗಿದೆ' ಎಂದು ಅವರು ಹೇಳುತ್ತಾರೆ.

'ಹಲವಾರು ಮೂಢನಂಬಿಕೆಗಳು ಮುಂದುವರಿದಿದ್ದರೂ, ಕೆಲವು ಸಂಖ್ಯೆಗಳು ದುರದೃಷ್ಟಕರ ಎನ್ನುವ ಭಾವವನ್ನು ಹೊಂದಿದ್ದರೂ, ನಾವು ಏನನ್ನಾದರೂ ಎಣಿಸುವಾಗ 13 ಅನ್ನು ಬಿಡುವುದಿಲ್ಲ. ನಾನು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವುದನ್ನು ಆನಂದಿಸುತ್ತಿದ್ದೇನೆ ಮತ್ತು ನಾನು ಚಿತ್ರದ ನಾಯಕನಾಗಿ ನನ್ನನ್ನು ನೋಡುವುದಿಲ್ಲ' ಎಂದು ಪ್ರತಿಪಾದಿಸುತ್ತಾರೆ.

ನನ್ನ ವೃತ್ತಿಜೀವನದ ಹಲವು ವರ್ಷಗಳಲ್ಲಿ, ಪಾತ್ರವೊಂದೇ ಪ್ರೇಕ್ಷಕರನ್ನು ಆಕರ್ಷಿಸುವ ನಿಜವಾದ ಮ್ಯಾಗ್ನೆಟ್ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಚಿತ್ರದ ನಿಜವಾದ ನಾಯಕ ಶಕ್ತಿಯುತ ಕಥೆ ಎಂದು ನಾನು ನಂಬುತ್ತೇನೆ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com