ಪೃಥ್ವಿ ಅಂಬರ್- ಅಯನ ನಟನೆಯ 'ದೂರದರ್ಶನ' ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್

ಶಿವರಾಜಕುಮಾರ್ ಅವರ ಬೈರಾಗಿ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ನಟ ಪೃಥ್ವಿ ಅಂಬರ್ ಇದೀಗ ತಮ್ಮ ಮುಂದಿನ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ನಟನ ಮುಂದಿನ, 'ದೂರದರ್ಶನ' ಸಿನಿಮಾ ಮಾರ್ಚ್ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಪೃಥ್ವಿ ಅಂಬರ್‌
ಪೃಥ್ವಿ ಅಂಬರ್‌
Updated on

ಶಿವರಾಜಕುಮಾರ್ ಅವರ ಬೈರಾಗಿ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ನಟ ಪೃಥ್ವಿ ಅಂಬರ್ ಇದೀಗ ತಮ್ಮ ಮುಂದಿನ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ನಟನ ಮುಂದಿನ, 'ದೂರದರ್ಶನ' ಸಿನಿಮಾ ಮಾರ್ಚ್ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಯ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಚಿತ್ರತಂಡ ಭಾನುವಾರ ಹೊರಡಿಸಿದೆ.

ಇದೇ ಮೊದಲ ಬಾರಿಗೆ ನಿರ್ದೇಶಕರ ಕ್ಯಾಪ್ ತೊಟ್ಟಿರುವ ನಿರ್ದೇಶಕ ಸುಕೇಶ್ ಶೆಟ್ಟಿ ಅವರೇ ಸ್ವತಃ ಕಥೆಯನ್ನು ಬರೆದಿದ್ದಾರೆ. ಅವರು ಈ ಹಿಂದೆ ತುಳು ಚಲನಚಿತ್ರಗಳಲ್ಲಿ ಮತ್ತು ಕನ್ನಡ ಚಲನಚಿತ್ರ ಟ್ರಂಕ್ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. 1980ರ ದಶಕದಲ್ಲಿ ದೂರದರ್ಶನ ಮಾಡಿದ್ದ ಮೋಡಿಯ ಕುರಿತಾದ ಕಥೆಯನ್ನು ಹೊಂದಿರುವ ಚಿತ್ರವು, 'ಒಂದು ಹಳ್ಳಿಯಲ್ಲಿ ಟಿವಿ ಬಂದ ನಂತರ ಏನೆಲ್ಲಾ ಬದಲಾವಣೆಗಳು ಸಂಭವಿಸುತ್ತವೆ ಮತ್ತು ಇದು ಹಾಸ್ಯ ಆಧಾರಿತ ನಾಟಕವಾಗಿದೆ'.

ಚಿತ್ರದಲ್ಲಿ ಅಯನ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಉಗ್ರಂ ಮಂಜು, ವೀಣಾ ಸುಂದರ್, ಹರಿಣಿ ಶ್ರೀಕಾಂತ್, ಹುಲಿ ಕಾರ್ತಿಕ್, ಸೂರಜ್, ಸೂರ್ಯ ಕುಂದಾಪುರ ಮತ್ತು ದೀಪಕ್ ರೈ ಪಣಾಜೆ ನಟಿಸಿದ್ದಾರೆ. ರಾಜೇಶ್ ಭಟ್ ಅವರ ವಿಎಸ್ ಮೀಡಿಯಾ ಎಂಟರ್‌ಪ್ರೈಸಸ್ ನಿರ್ಮಿಸಿರುವ ದೂರದರ್ಶನ ಚಿತ್ರಕ್ಕೆ ಅರುಣ್ ಸುರೇಶ್ ಛಾಯಾಗ್ರಹಣ, ವಾಸುಕಿ ವೈಭವ್ ಸಂಗೀತ, ಪ್ರದೀಪ್ ರಾವ್ ಸಂಕಲನವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com