social_icon

'ಗದಾಯುದ್ಧ' ಮೂಲಕ ಕನ್ನಡ ಚಿತ್ರರಂಗಕ್ಕೆ ಕ್ರಿಕೆಟಿಗ ಸುಮಿತ್ ಪದಾರ್ಪಣೆ

ಬೆನ್ನುಮೂಳೆಯ ಗಾಯವು ಕರ್ನಾಟಕ ಪ್ಲೇಯಿಂಗ್ ಲೀಗ್‌ನಲ್ಲಿ ಆಡಿದ ಉತ್ಸಾಹಿ ಕ್ರಿಕೆಟಿಗ ಸುಮಿತ್‌ಗೆ ಕ್ರಿಕೆಟ್‌ಗೆ ವಿದಾಯ ಹೇಳಲು ಬಹುದೊಡ್ಡ ಕಾರಣವಾಯಿತು. ಇದುವೇ ಅವರ ಜೀವನದಲ್ಲಿ ಒಂದು ಮಹತ್ವದ ತಿರುವಿಗೆ ಕಾರಣವಾಯಿತು. ಆದರೆ, ಪಟ್ಟುಬಿಡದ ಅವರು ತನ್ನ ಸಿನಿಮಾದ ಉತ್ಸಾಹವನ್ನು ಸ್ವೀಕರಿಸಲು ಮುಂದಾದರು.

Published: 06th June 2023 11:28 AM  |   Last Updated: 06th June 2023 07:39 PM   |  A+A-


Gadayuddha Film Poster

ಗದಾಯುದ್ಧ ಸಿನಿಮಾದ ಪೋಸ್ಟರ್

Posted By : Ramyashree GN
Source : Express News Service

ಬೆನ್ನುಮೂಳೆಯ ಗಾಯವು ಕರ್ನಾಟಕ ಪ್ಲೇಯಿಂಗ್ ಲೀಗ್‌ನಲ್ಲಿ ಆಡಿದ ಉತ್ಸಾಹಿ ಕ್ರಿಕೆಟಿಗ ಸುಮಿತ್‌ಗೆ ಕ್ರಿಕೆಟ್‌ಗೆ ವಿದಾಯ ಹೇಳಲು ಬಹುದೊಡ್ಡ ಕಾರಣವಾಯಿತು. ಇದುವೇ ಅವರ ಜೀವನದಲ್ಲಿ ಒಂದು ಮಹತ್ವದ ತಿರುವಿಗೆ ಕಾರಣವಾಯಿತು. ಆದರೆ, ಪಟ್ಟುಬಿಡದ ಅವರು ತನ್ನ ಸಿನಿಮಾದ ಉತ್ಸಾಹವನ್ನು ಸ್ವೀಕರಿಸಲು ಮುಂದಾದರು.

ಬೆಳಗಾವಿಯ ಮೂಲದವರಾದ ಸುಮಿತ್ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸುಮಿತ್ ಮುಂಬರುವ ಚಿತ್ರ 'ಗದಾಯುದ್ಧ'ದಲ್ಲಿ ನಟಿಸಿದ್ದು, ಈ ಚಿತ್ರ ಜೂನ್ 9ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. 

ಗದಾಯುದ್ಧ ಚಿತ್ರದ ಪೋಸ್ಟರ್

ಸಿನಿಮಾರಂಗದಲ್ಲಿ ತಮ್ಮ ಪ್ರಯಾಣದ ಬಗ್ಗೆ ಮಾತನಾಡುವ ಸುಮಿತ್, 'ನನ್ನ ಗಾಯದ ನಂತರ, ನಾನು ಕ್ರಿಕೆಟ್ ಬಿಟ್ಟು ನನ್ನ ಗಮನವನ್ನು ಸಿನಿಮಾದತ್ತ ಬದಲಾಯಿಸಬೇಕಾಯಿತು. ನಾನು ನಿರ್ದೇಶನ ಮತ್ತು ಛಾಯಾಗ್ರಹಣದ ಜಗತ್ತಿನಲ್ಲಿ ತೊಡಗಿಸಿಕೊಂಡೆ. ವಿವಿಧ ನಿರ್ಮಾಣ ಸಂಸ್ಥೆಗಳಿಗೆ ಭೇಟಿ ನೀಡಿದಾಗ ನಾನು ನಿರ್ದೇಶಕ ಶ್ರೀವತ್ಸ ರಾವ್ (ಮೃಗಶಿರ) ಅವರನ್ನು ಕಂಡೆ. ಅವರ ಒಂದು ಕಥೆ ನನ್ನ ಗಮನ ಸೆಳೆಯಿತು ಮತ್ತು ನಾವು ಈ ಯೋಜನೆಯಲ್ಲಿ ಕೆಲಸ ಮಾಡಿದ್ದೇವೆ' ಎಂದು ಚಿತ್ರದಲ್ಲಿ ಭೀಮನ ಪಾತ್ರವನ್ನು ನಿರ್ವಹಿಸಿರುವ ಅವರು ತಮ್ಮ ಉತ್ಸುಕತೆಯನ್ನು ವ್ಯಕ್ತಪಡಿಸುತ್ತಾರೆ.

ಗದಾಯುದ್ಧ ಸಿನಿಮಾದಲ್ಲಿ ನಾಯಕನಾಗಿ ನಟಿಸುವಂತೆ ಸುಮಿತ್‌ಗೆ ಸೂಚಿಸಿದ್ದು ದಿವಂಗತ ನಟ ಚಿರಂಜೀವಿ ಸರ್ಜಾ. 'ನಿರ್ದೇಶಕರು ನಾಲ್ಕು ವರ್ಷಗಳ ಹಿಂದೆ ನನ್ನೊಂದಿಗೆ ಕಥೆಯನ್ನು ಹಂಚಿಕೊಂಡಿದ್ದರು. ಪ್ರಮುಖ ಪಾತ್ರಕ್ಕಾಗಿ ಚಿರಂಜೀವಿ ಸರ್ಜಾ ಅವರನ್ನೂ ಸಂಪರ್ಕಿಸಿದ್ದರು. ಚಿರಂಜೀವಿ ಸರ್ಜಾ ಅವರ ಮನೆಗೆ ಭೇಟಿ ನೀಡಿದಾಗ, ಕುಟುಂಬದ ಕಾರ್ಯಕ್ರಮವೊಂದರಲ್ಲಿನ ನನ್ನ ಫೊಟೋ ಸರ್ಜಾ ಅವರ ಗಮನ ಸೆಳೆಯಿತು ಮತ್ತು ಅವರು ಹೀರೋ ಆಗಿ ನಾನು ನಟಿಸುವ ಸಾಮರ್ಥ್ಯವಿದೆ ಎಂದರು. ಇದು ಶ್ರೀವತ್ಸ ರಾವ್ ಅವರು ನನ್ನನ್ನು ಪ್ರಮುಖ ಪಾತ್ರಕ್ಕೆ ಪರಿಗಣಿಸಲು ಪ್ರೇರೇಪಿಸಿತು' ಎಂದು ಸುಮಿತ್ ಹೇಳುತ್ತಾರೆ.

ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಗದಾಯುದ್ಧ, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಪ್ರಚಲಿತದಲ್ಲಿರುವ ಮಾಟಮಂತ್ರ ಮತ್ತು ವಾಮಾಚಾರದ ಕುರಿತಾದ ಕಥೆಯನ್ನು ಹೇಳುತ್ತದೆ. ಮಾಹಿತಿ ಮತ್ತು ಮನರಂಜನೆ ಎರಡನ್ನೂ ತಲುಪಿಸುವ ಗುರಿಯೊಂದಿಗೆ ಶ್ರೀವತ್ಸ ರಾವ್ ಅವರು ಈ ಕಥೆ ತಯಾರಿಗಾಗಿ ಎರಡು ವರ್ಷಗಳನ್ನು ಮೀಸಲಿಟ್ಟರು. ನಿರೂಪಣೆಯು ಪ್ರಾಥಮಿಕವಾಗಿ ಮಹಾರಾಷ್ಟ್ರದಲ್ಲಿ ಅಭ್ಯಾಸ ಮಾಡುವ ಒಂದು ನಿರ್ದಿಷ್ಟ ಮಾಟಮಂತ್ರವಾದ ಬಾನಾಮತಿಯ ಮೇಲೆ ಕೇಂದ್ರೀಕರಿಸುತ್ತದೆ.

ಇದನ್ನೂ ಓದಿ: ವಿಕಲಚೇತನ ಬಾಲಕಿ-ಶ್ವಾನದ ನಡುವಿನ ಹೃದಯಸ್ಪರ್ಶಿ ಕಥೆ ಹೇಳಲಿದೆ 'ಯಾವ ಮೋಹನ ಮುರಳಿ ಕರೆಯಿತು'

ಗದಾಯುದ್ಧವು ವಿಷಯವನ್ನು ವೈಜ್ಞಾನಿಕವಾಗಿ ಸಮೀಪಿಸಿದರೂ, ಇದು ಕಮರ್ಷಿಯಲ್ ಆಕರ್ಷಣೆಯನ್ನು ಸಹ ಹೊಂದಿದೆ. ಪರಾಕಾಷ್ಠೆಯ ದೃಶ್ಯದ ಚಿತ್ರೀಕರಣವು ಕೇವಲ 14 ದಿನಗಳನ್ನು ತೆಗೆದುಕೊಂಡಿತು. ಇದರ ನಿರ್ಮಾಣ ವೆಚ್ಚ 1 ಕೋಟಿ ರೂ. ಆಯಿತು ಎಂದು ಸುಮಿತ್ ಅವರು ಒತ್ತಿಹೇಳುತ್ತಾರೆ.

ಚಿತ್ರವನ್ನು ನಿತಿನ್ ಶಿರಗೂರಕರ್ ನಿರ್ಮಿಸುತ್ತಿದ್ದು, ನಾಯಕಿಯಾಗಿ ಧನ್ಯ ಪಾಟೀಲ್ ನಟಿಸಿದ್ದಾರೆ. ಶರತ್ ಲೋಹಿತಾಶ್ವ, ಅಯ್ಯಪ್ಪ ಶರ್ಮಾ, ಸಾಧು ಕೋಕಿಲ, ಮತ್ತು ಸ್ಪರ್ಶ ರೇಖಾ ಮುಂತಾದ ಹೆಸರಾಂತ ನಟರು ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ ಮತ್ತು ವೈಸ್ ಕಿಂಗ್ ಸಂಗೀತ ಸಂಯೋಜಕರಾಗಿದ್ದಾರೆ.


Stay up to date on all the latest ಸಿನಿಮಾ ಸುದ್ದಿ news
Poll
Khalistani militant Hardeep Singh Nijjar

ಸಿಖ್ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪವನ್ನು ನೀವು ನಂಬುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp