social_icon

ಇದು ಸಾಮಾನ್ಯ ವಿಲನ್ ಪಾತ್ರವಲ್ಲ, ಸಾಕಷ್ಟು ಆಳವನ್ನು ಹೊಂದಿದೆ: ಗುರುದೇವ ಹೊಯ್ಸಳ ಚಿತ್ರದಲ್ಲಿ ನವೀನ್ ಶಂಕರ್

ಒಬ್ಬ ನಟನು ವೈವಿಧ್ಯಮಯ ಪಾತ್ರಗಳನ್ನು ಪ್ರಯೋಗಿಸಲು ಆಗಾಗ್ಗೆ ಆಗುವುದಿಲ್ಲ ಮತ್ತು ನವೀನ್‌ಗೆ ಗುರುದೇವ ಹೊಯ್ಸಳ ಚಿತ್ರದಲ್ಲಿ ಅಂತಹ ಒಂದು ಅವಕಾಶ ಸಿಕ್ಕಿದೆ. ತನ್ನ ಮೊದಲ ಚಿತ್ರ ಗುಳ್ಟುನಲ್ಲಿನ ಅಭಿನಯಕ್ಕಾಗಿ ಗಮನಸೆಳೆದ ನಟ, ಇದೀಗ ಗುರುದೇವ ಹೊಯ್ಸಳ ಚಿತ್ರದಲ್ಲಿ ಅವರು ಮೊದಲ ಬಾರಿಗೆ ನೆಗೆಟಿವ್ ರೋಲ್‌ ಅನ್ನು ನಿರ್ವಹಿಸಿದ್ದಾರೆ.

Published: 25th March 2023 12:51 PM  |   Last Updated: 25th March 2023 03:30 PM   |  A+A-


Naveen Shankar

ನಟ ನವೀನ್ ಶಂಕರ್

Posted By : Ramyashree GN
Source : Express News Service

ಒಬ್ಬ ನಟನು ವೈವಿಧ್ಯಮಯ ಪಾತ್ರಗಳನ್ನು ಪ್ರಯೋಗಿಸಲು ಆಗಾಗ್ಗೆ ಆಗುವುದಿಲ್ಲ ಮತ್ತು ನವೀನ್‌ಗೆ ಗುರುದೇವ ಹೊಯ್ಸಳ ಚಿತ್ರದಲ್ಲಿ ಅಂತಹ ಒಂದು ಅವಕಾಶ ಸಿಕ್ಕಿದೆ. ತನ್ನ ಮೊದಲ ಚಿತ್ರ ಗುಳ್ಟುನಲ್ಲಿನ ಅಭಿನಯಕ್ಕಾಗಿ ಗಮನಸೆಳೆದ ನಟ, ಧರಣಿ ಮಂಡಲ ಮಧ್ಯದೊಳಗೆ ಮತ್ತು ಇತ್ತೀಚಿನ ಹೊಂದಿಸಿ ಬರೆಯಿರಿ ಮುಂತಾದ ಮಲ್ಟಿ-ಸ್ಟಾರರ್‌ಗಳ ಭಾಗವಾಗಿ ಕಾಣಿಸಿಕೊಂಡರು. ಇದೀಗ ಗುರುದೇವ ಹೊಯ್ಸಳ ಚಿತ್ರದಲ್ಲಿ ಅವರು ಮೊದಲ ಬಾರಿಗೆ ನೆಗೆಟಿವ್ ರೋಲ್‌ ಅನ್ನು ನಿರ್ವಹಿಸಿದ್ದಾರೆ.

'ಇಂಡಸ್ಟ್ರಿಯಲ್ಲಿ ನಾಯಕನಾಗಿ ಗುರುತಿಸಿಕೊಳ್ಳುತ್ತಿರುವ ನವೀನ್ ಈ ಪಾತ್ರವನ್ನು ಒಪ್ಪಿಕೊಳ್ಳಲು ಏನು ಪ್ರಭಾವ ಬೀರಿತು?' 

'ನನಗೆ ಯಾವಾಗಲೂ ನಕಾರಾತ್ಮಕ ಪಾತ್ರಗಳಲ್ಲಿ ನಟಿಸಲು ಆಸಕ್ತಿ ಇತ್ತು. ಆದರೆ, ನನ್ನ ವೃತ್ತಿಜೀವನದಲ್ಲಿ ಇಷ್ಟು ಬೇಗ ಅದು ನನಸಾಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ನಟ ಧನಂಜಯ್ ಮತ್ತು ಪ್ರೊಡಕ್ಷನ್ ಹೌಸ್ ಕೆಆರ್‌ಜಿ ಸ್ಟುಡಿಯೋಸ್ ನನಗೆ ಈ ಪಾತ್ರವನ್ನು ನಿರ್ವಹಿಸಲು ಆತ್ಮವಿಶ್ವಾಸವನ್ನು ನೀಡಿತು' ಎನ್ನುತ್ತಾರೆ.

ಇದು ಸಾಮಾನ್ಯ ವಿಲನ್ ಪಾತ್ರವಲ್ಲ ಮತ್ತು ಇದು ಸಾಕಷ್ಟು ಆಳವನ್ನು ಹೊಂದಿದೆ. ನನಗೆ ಕಥೆ ಹೇಳಲಾಯಿತು ಮತ್ತು ನಿರ್ದೇಶಕ ವಿಜಯ್ ಎನ್ ಅವರು ವಿಶೇಷವಾಗಿ ಖಳನಾಯಕನಿಗೆ ಸ್ಕೆಚ್ ಮಾಡಿದ ಪಾತ್ರವು ಸಾಮಾನ್ಯವಲ್ಲ ಎಂಬುದನ್ನು ನಾನು ಅರ್ಥಮಾಡಿಕೊಂಡಾಗ, ನಾನು ಈ ಸಿನಿಮಾದ ಭಾಗವಾಗಲು ನೆರವಾಯಿತು. ಮಾರ್ಚ್ 30 ರಂದು ಚಿತ್ರ ಬಿಡುಗಡೆಯಾಗಲಿದ್ದು, ತಮ್ಮ ಪಾತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳುವ ಆತಂಕವನ್ನು ವ್ಯಕ್ತಪಡಿಸಿದರು. ತಾನು ಪ್ರತಿ ಪಾತ್ರವನ್ನು ನಾಯಕನ ಪಾತ್ರದಂತೆಯೇ ಪರಿಗಣಿಸುವುದಾಗಿ ಹೇಳಿದರು.

ಇದನ್ನೂ ಓದಿ: ಡಾಲಿ ಧನಂಜಯ ಅಭಿನಯದ 'ಗುರುದೇವ್ ಹೊಯ್ಸಳ' ಚಿತ್ರದ ಟ್ರೈಲರ್ ಬಿಡುಗಡೆ

'ಪ್ರೇಕ್ಷಕರು ಮಾತ್ರ ಪಾತ್ರಗಳನ್ನು ಒಳ್ಳೆಯದು ಅಥವಾ ಕೆಟ್ಟದು ಎಂದು ಪ್ರತ್ಯೇಕಿಸುತ್ತಾರೆ. ಆದರೆ, ನನಗೆ ಇದು ಕೇವಲ ಒಂದು ಪಾತ್ರವಾಗಿದೆ' ಎನ್ನುತ್ತಾರೆ ಪಾತ್ರಕ್ಕಾಗಿ ದೈಹಿಕ ರೂಪಾಂತರ ಹೊಂದಿರುವ ನವೀನ್. 'ನಿರ್ದಿಷ್ಟವಾಗಿ ಹೇಳುವುದಾದರೆ, ಖಳನಾಯಕನನ್ನು ಮಾಡೆಲ್ ಆಗಿ ಕಾಣಬೇಕೆಂದು ನಿರ್ದೇಶಕರು ಬಯಸುವುದಿಲ್ಲ. ಆದರೆ, ಉತ್ತಮವಾಗಿ ನಟಿಸುವ ಮತ್ತು ಪಾತ್ರದ ಆಳವನ್ನು ಚೆನ್ನಾಗಿ ಸಾಗಿಸುವ ವ್ಯಕ್ತಿ ಬೇಕಿತ್ತು' ಎನ್ನುತ್ತಾರೆ.

ಹೊಯ್ಸಳ ಕಮರ್ಷಿಯಲ್ ಎಂಟರ್‌ಟೈನರ್ ಆಗಿ ಮೂಡಿಬಂದಿದ್ದರೂ, ಖಳನಾಯಕನ ಪಾತ್ರಕ್ಕೆ ಸುಂದರವಾದ ಪ್ರಾಮುಖ್ಯತೆ ಇದೆ. ಧನಂಜಯ್ ನಿರ್ವಹಿಸಿದ ಗುರುದೇವ ಒಂದು ಬಲವಾದ ಪಾತ್ರ ಮತ್ತು ಕೂಲ್ ಆಗಿರುವ ಮತ್ತು ಪ್ರಾಣಿ ಪ್ರೀತಿಯನ್ನು ಹೊಂದಿರುವ ನನ್ನ ಪಾತ್ರ ಬಾಲಿ ಕೂಡ ಅದಕ್ಕೆ ಸರಿಸಮಾನವಾಗಿದೆ. ಪ್ರತಿ ಪಾತ್ರಕ್ಕೂ ರೂಪಾಂತರವು ನಟನಿಗೆ ಅಗತ್ಯವಾಗಿರುತ್ತದೆ. ನಾನು ಇದನ್ನು ಆಗಾಗ್ಗೆ ಮಾಡುತ್ತಿದ್ದೇನೆ ಎಂದು ನನಗೆ ಖುಷಿಯಾಗಿದೆ. ಚಿತ್ರದಲ್ಲಿ ಧನಂಜಯ್ ಜೊತೆಗಿನ ಮುಖಾಮುಖಿಯ ಬಗ್ಗೆ ಉತ್ಸುಕನಾಗಿದ್ದೇನೆ ಎಂದು ನವೀನ್ ಹೇಳುತ್ತಾರೆ.

ಇದನ್ನೂ ಓದಿ: ಧನಂಜಯ್ ನಟನೆಯ ಹೊಯ್ಸಳ ಈಗ 'ಗುರುದೇವ ಹೊಯ್ಸಳ', ಪೊಲೀಸ್ ಇಲಾಖೆಗೆ ಸಿನಿಮಾ ಅರ್ಪಣೆ

ವಿಲನ್ ಪಾತ್ರಕ್ಕೆ ಧನಂಜಯ್ ಅವರಿಂದ ಸ್ಫೂರ್ತಿ ಪಡೆದಿದ್ದೀರಾ? 

'ನಾನು ಹಾಗೆ ಯೋಚಿಸುವುದಿಲ್ಲ. ಒಬ್ಬ ನಟನಿಗೆ ಕೆಲಸ ಮಾಡುವುದು ಇನ್ನೊಬ್ಬ ನಟನಿಗೆ ಕೆಲಸ ಮಾಡದಿರಬಹುದು ಎಂದು ನಾನು ನಂಬುತ್ತೇನೆ. ನಾನು ಯಾವಾಗಲೂ ಕಂಟೆಂಟ್ ಅದ್ಭುತವಾಗಿರುವ ಚಲನಚಿತ್ರಗಳ ಭಾಗವಾಗಲು ಗಮನಹರಿಸಿದ್ದೇನೆ ಮತ್ತು ನನಗೆ ಅದು ಪ್ರಭಾವಶಾಲಿ ಪಾತ್ರವನ್ನು ನೀಡುತ್ತದೆ ಎನ್ನುವ ನವೀನ್, ಟಗರು ಚಿತ್ರದಲ್ಲಿ ವಿಲನ್ ಪಾತ್ರವನ್ನು ಮಾಡುವ ಮೂಲಕ ಧನಂಜಯ್‌ ಅವರು ಡಾಲಿ ಎಂಬ ಖ್ಯಾತಿಯನ್ನು ಪಡೆದರು. ಈ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದ್ದರಿಂದ ತೀವ್ರತೆಯನ್ನು ಕಾಯ್ದುಕೊಳ್ಳಬೇಕಾಗಿತ್ತು ಎನ್ನುತ್ತಾರೆ.

ಬಾಲಿ ವಿಲನ್ ಆಗಿದ್ದರೂ, ಜನರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುತ್ತಾನೆ. ನವೀನ್ ಅವರ ಮುಂದಿನ ಚಿತ್ರ ಕ್ಷೇತ್ರಪತಿ ಬಿಡುಗಡೆಗೆ ಸಿದ್ಧವಾಗುತ್ತಿದೆ. 'ಕ್ಷೇತ್ರಪತಿ ಟೀಸರ್ ಅನ್ನು ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಅನುಭವಿಸುತ್ತಾರೆ ಎಂದು ನನಗೆ ಖುಷಿಯಾಗಿದೆ. ಗುರುದೇವ ಹೊಯ್ಸಳ ಚಿತ್ರದೊಂದಿಗೆ ಅದನ್ನು ಬಿಡುಗಡೆ ಮಾಡಲಾಗುವುದು' ಎಂದು ಹೇಳುತ್ತಾರೆ ನವೀನ್.


Stay up to date on all the latest ಸಿನಿಮಾ ಸುದ್ದಿ news
Poll
New parliament building

ಹೊಸ ಸಂಸತ್ ಕಟ್ಟಡದ ಉದ್ಘಾಟನೆಯನ್ನು ಬಹಿಷ್ಕರಿಸುವ ಹಲವಾರು ವಿರೋಧ ಪಕ್ಷಗಳ ನಿರ್ಧಾರವು ಸಮರ್ಥನೀಯವೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp