'ಉತ್ತರಕಾಂಡ' ಚಿತ್ರದ ಮೂಲಕ ಬಾಲಿವುಡ್ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ

ಜನಪ್ರಿಯ ಬಾಲಿವುಡ್ ಸಂಗೀತ ನಿರ್ದೇಶಕ ಮತ್ತು ಗಾಯಕ ಅಮಿತ್ ತ್ರಿವೇದಿ ಅವರು ಧನಂಜಯ್ ಮತ್ತು ಶಿವರಾಜ್‌ಕುಮಾರ್ ನಟನೆಯ ಬಹು ನಿರೀಕ್ಷಿತ ಬಹುತಾರಾಗಣದ ಚಿತ್ರ ಉತ್ತರಕಾಂಡದೊಂದಿಗೆ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸಿದ್ದಾರೆ.
ಅಮಿತ್ ತ್ರಿವೇದಿ
ಅಮಿತ್ ತ್ರಿವೇದಿ

ಜನಪ್ರಿಯ ಬಾಲಿವುಡ್ ಸಂಗೀತ ನಿರ್ದೇಶಕ ಮತ್ತು ಗಾಯಕ ಅಮಿತ್ ತ್ರಿವೇದಿ ಅವರು ಧನಂಜಯ್ ಮತ್ತು ಶಿವರಾಜ್‌ಕುಮಾರ್ ನಟನೆಯ ಬಹು ನಿರೀಕ್ಷಿತ ಬಹುತಾರಾಗಣದ ಚಿತ್ರ ಉತ್ತರಕಾಂಡದೊಂದಿಗೆ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸಿದ್ದಾರೆ.

ಅಮಿತ್ ತ್ರಿವೇದಿ ಅವರು ಈಗಾಗಲೇ ಸಂಗೀತ ಸಂಯೋಜಕರಾಗಿ ಬಹು ಭಾಷೆಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ತಮ್ಮ ವಿಶಿಷ್ಟ ಶೈಲಿ ಮತ್ತು ಸ್ವಂತಿಕೆಯಿಂದಾಗಿ ಗಮನ ಸೆಳೆದಿದ್ದಾರೆ. ಕ್ವೀನ್, ವೇಕ್ ಅಪ್ ಸಿದ್, ಲೂಟೇರಾ, ಡಿಯರ್ ಜಿಂದಗಿ ಮತ್ತು ಅಂಧಾದುನ್ ಮತ್ತು ವೆಬ್ ಸೀರೀಸ್ ಜುಬಿಲಿ ಮುಂತಾದ ಚಿತ್ರಗಳಿಗೆ ಸಂಗೀತ ಸಂಯೋಜನೆಗೆ ಹೆಸರುವಾಸಿಯಾದ ಅಮಿತ್, ಅನುರಾಗ್ ಕಶ್ಯಪ್ ಮತ್ತು ಅಮೀರ್ ಖಾನ್ ಸೇರಿದಂತೆ ಮೆಚ್ಚುಗೆ ಪಡೆದ ನಿರ್ಮಾಪಕರೊಂದಿಗೆ ಸಹ ಕೆಲಸ ಮಾಡಿದ್ದಾರೆ.

ಆರಂಭದಲ್ಲಿ, ಚರಣ್ ರಾಜ್ ಅವರು ಉತ್ತರಕಾಂಡ ಚಿತ್ರದ ಪ್ರಚಾರ ಸಾಮಗ್ರಿಗಳಿಗೆ ಸಂಗೀತ ಸಂಯೋಜಿಸಿದರು. ಇದೀಗ, ಅಮಿತ್ ತ್ರಿವೇದಿ ಅವರು ಚಿತ್ರದ ಸಂಪೂರ್ಣ ಧ್ವನಿಪಥವನ್ನು ಸಂಯೋಜಿಸಲಿದ್ದಾರೆ. ಇದು ಚಿತ್ರದ ಬಗೆಗಿನ ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ.

ಉತ್ತರಕಾಂಡ ಸಿನಿಮಾ ತಂಡ
ಉತ್ತರಕಾಂಡ ಸಿನಿಮಾ ತಂಡ

ಉತ್ತರಕಾಂಡ ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋಸ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಜಂಟಿಯಾಗಿ ನಿರ್ಮಿಸಿದ್ದಾರೆ. ರತ್ನನ್ ಪ್ರಪಂಚ (2021) ನಂತರ ರೋಹಿತ್ ಪದಕಿ ಮತ್ತು ಧನಂಜಯ್ ಒಂದಾಗುತ್ತಿದ್ದಾರೆ.

ಅಮಿತ್ ತ್ರಿವೇದಿ
ಟೀಸರ್ ಬಿಡುಗಡೆ: 'ಉತ್ತರಕಾಂಡ' ಸಿನಿಮಾದಲ್ಲಿ 'ಗಬ್ರು ಸತ್ಯ' ಪಾತ್ರಕ್ಕೆ ಜೀವ ತುಂಬಿದ ಧನಂಜಯ್!

'ನಾವು ಉತ್ತರಕಾಂಡ ಚಿತ್ರದ ಮೂಲಕ ಅತ್ಯಂತ ಕಚ್ಚಾ ಮತ್ತು ಹಳ್ಳಿಗಾಡಿನ ಪ್ರಪಂಚವನ್ನು ರಚಿಸಲು ಪ್ರಯತ್ನಿಸುತ್ತಿದ್ದೇವೆ. ಈ ಕಥೆಯು ಭಾರತದ ಅತ್ಯಂತ ಸ್ಥಳೀಯ ಭಾವನೆಯನ್ನು ಹೊಂದಿದೆ ಮತ್ತು ಅಮಿತ್ ತ್ರಿವೇದಿ ಅವರ ಸಂಗೀತವು ಸ್ವತಃ ಕಥೆಯನ್ನು ಹೆಣೆದು ಭಾರತದಾದ್ಯಂತ ತಲುಪುತ್ತದೆ' ಎನ್ನುತ್ತದೆ ಚಿತ್ರತಂಡ.

ಉತ್ತರಕಾಂಡವು ಉತ್ತರ ಕರ್ನಾಟಕದ ಹಿನ್ನೆಲೆಯ ಆಕ್ಷನ್-ಪ್ಯಾಕ್ಡ್ ಡ್ರಾಮಾ ಆಗಿರುತ್ತದೆ. ಟಗರು ಚಿತ್ರದ ಜನಪ್ರಿಯ ಜೋಡಿಯಾದ ಶಿವಣ್ಣ ಮತ್ತು ಧನಂಜಯ್ ಅವರನ್ನು ಮತ್ತೆ ಒಂದುಗೂಡಿಸುವ ಈ ಬಹುಭಾಷಾ ಯೋಜನೆಯು ವಿಜಯಪುರ ಮತ್ತು ಸುತ್ತಮುತ್ತ ಏಪ್ರಿಲ್ 15 ರಂದು ಚಿತ್ರೀಕರಣ ಪ್ರಾರಂಭಿಸಲಿದೆ. ಚಿತ್ರತಂಡ ಸದ್ಯ ನಾಯಕಿ ಮತ್ತು ಇತರ ಪ್ರಮುಖ ಪಾತ್ರವರ್ಗವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ.

ಅಮಿತ್ ತ್ರಿವೇದಿ
ರೋಹಿತ್ ಪದಕಿ ನಿರ್ದೇಶನದ ಸಿನಿಮಾದಲ್ಲಿ ಡಾಲಿ ಧನಂಜಯ್: 'ಉತ್ತರಕಾಂಡ' ಫರ್ಸ್ಟ್ ಲುಕ್ ರಿಲೀಸ್!

ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅಮಿತ್ ತ್ರಿವೇದಿ, 'ಈ ಚಿತ್ರವು ಹೊಂದಿರುವ ವೈಬ್ ಮತ್ತು ಭಾವನೆಯನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ ಮತ್ತು ರೋಹಿತ್ ಎಚ್ ಪದಕಿ ಮತ್ತು ಕೆಆರ್‌ಜಿ ಸ್ಟುಡಿಯೋಸ್ ಕಥೆಯನ್ನು ಹೇಳಲು ಸಿದ್ಧವಾಗಿದೆ. ಈ ಚಿತ್ರಕ್ಕಾಗಿ ನಾನು ಅನ್ವೇಷಿಸಲು ಮತ್ತು ಪ್ರಯೋಗಿಸಲು ಉತ್ಸುಕನಾಗಿದ್ದೇನೆ. ಸ್ಥಳೀಯ ಕಥೆಗಳ ಭಾಗವಾಗಲು ಹೆಚ್ಚು ಉತ್ಸುಕನಾಗಿದ್ದೇನೆ' ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com