ಕಾಂತಾರ ಪ್ರೀಕ್ವೆಲ್‌ನಲ್ಲಿ ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ನಟಿ ರುಕ್ಮಿಣಿ ವಸಂತ್?

ನಟ-ನಿರ್ದೇಶಕ ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಮೂಲಕ ಖ್ಯಾತಿ ಗಳಿಸಿದವರು. ಇದೀಗ ಬಹು ನಿರೀಕ್ಷಿತ ಪ್ರಿಕ್ವೆಲ್ ಕಾಂತಾರ- ಅಧ್ಯಾಯ 1 ರೊಂದಿಗೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರದ ಚಿತ್ರೀಕರಣವನ್ನು ಸದ್ದಿಲ್ಲದೆ ಪ್ರಾರಂಭಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, ಚಿತ್ರತಂಡ ನಟಿ ರುಕ್ಮಿಣಿ ವಸಂತ್ ಅವರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗಿದೆ.
ನಟಿ ರುಕ್ಮಿಣಿ ವಸಂತ್ - ಕಾಂತಾರ- ಅಧ್ಯಾಯ 1ರ ಪೋಸ್ಟರ್
ನಟಿ ರುಕ್ಮಿಣಿ ವಸಂತ್ - ಕಾಂತಾರ- ಅಧ್ಯಾಯ 1ರ ಪೋಸ್ಟರ್

ನಟ-ನಿರ್ದೇಶಕ ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಮೂಲಕ ಖ್ಯಾತಿ ಗಳಿಸಿದವರು. ಇದೀಗ ಬಹು ನಿರೀಕ್ಷಿತ ಪ್ರಿಕ್ವೆಲ್ ಕಾಂತಾರ-ಅಧ್ಯಾಯ 1 ರೊಂದಿಗೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರದ ಚಿತ್ರೀಕರಣವನ್ನು ಸದ್ದಿಲ್ಲದೆ ಪ್ರಾರಂಭಿಸಿದೆ. ಚಿತ್ರದ ತಾರಾಗಣಕ್ಕೆ ಸಂಬಂಧಿಸಿದಂತೆ ಯಾವುದೇ ವಿವರಗಳನ್ನು ಚಿತ್ರತಂಡ ಬಿಚ್ಚಿಡದಿದ್ದರೂ, ರಿಷಬ್ ಶೆಟ್ಟಿ ನಾಯಕನಾಗಿ ತಮ್ಮ ಪಾತ್ರವನ್ನು ಪುನರಾವರ್ತಿಸುತ್ತಾರೆ ಮತ್ತು ಮೂಲ ಕಾಂತಾರದಿಂದ ಕೆಲವು ಪರಿಚಿತ ಮುಖಗಳನ್ನು ಹೊರತುಪಡಿಸಿ, ನಾಯಕಿ ಸೇರಿದಂತೆ ಕೆಲವು ಪಾತ್ರಗಳು ಬದಲಾವಣೆಯಾಗಲಿವೆ ಎನ್ನಲಾಗಿದೆ.

ಚಿತ್ರದ ಸಂಭಾವ್ಯ ಪಾತ್ರವರ್ಗದ ಬಗ್ಗೆ ಊಹಾಪೋಹಗಳು ವ್ಯಾಪಕವಾಗಿದ್ದರೂ, ಇತ್ತೀಚಿನ ವರದಿಗಳ ಪ್ರಕಾರ, ಚಿತ್ರತಂಡ ನಟಿ ರುಕ್ಮಿಣಿ ವಸಂತ್ ಅವರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗಿದೆ.

ಹೇಮಂತ್ ಎಂ ರಾವ್ ನಿರ್ದೇಶನದ ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಸೈಡ್ ಬಿಗಳಲ್ಲಿನ ತಮ್ಮ ಅದ್ವಿತೀಯ ನಟನೆಯಿಂದ ಹೆಸರಾದ ರುಕ್ಮಿಣಿ ವಸಂತ್ ಅವರು ಕನ್ನಡ ಚಿತ್ರರಂಗ ಸೇರಿದಂತೆ ಇತರ ಭಾಷೆಗಳಲ್ಲಿಯೂ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಕಾಂತಾರ ಪ್ರೀಕ್ವೆಲ್‌ನಲ್ಲಿನ ಪಾತ್ರಕ್ಕಾಗಿ ರುಕ್ಮಿಣಿ ಅವರು ಸ್ಕ್ರೀನ್ ಟೆಸ್ಟ್‌ಗೆ ಒಳಗಾಗಿದ್ದು, ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳು ಸೂಚಿಸಿವೆ.

ನಟಿ ರುಕ್ಮಿಣಿ ವಸಂತ್ - ಕಾಂತಾರ- ಅಧ್ಯಾಯ 1ರ ಪೋಸ್ಟರ್
ಇದು ಬರಿ ಬೆಳಕಲ್ಲ, ದರ್ಶನ: ‘ಕಾಂತಾರ’ ಪ್ರೀಕ್ವೆಲ್ ಫಸ್ಟ್ ಲುಕ್ ರಿಲೀಸ್ ಬಗ್ಗೆ ರಿಷಬ್ ಶೆಟ್ಟಿ ಮಾಹಿತಿ!

ಈಮಧ್ಯೆ, ಹಲವು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿರುವ ರುಕ್ಮಿಣಿ ಸದ್ಯ ಶ್ರೀಮುರಳಿ ಅಭಿನಯದ ಬಘೀರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ನರ್ತನ್ ನಿರ್ದೇಶನದ ಬೈರತಿ ರಣಗಲ್ ಚಿತ್ರದಲ್ಲಿಯೂ ನಟ ಶಿವರಾಜ್‌ಕುಮಾರ್ ಜೊತೆಗೆ ನಟಿಸಿದ್ದಾರೆ. ಅರುಮುಗಕುಮಾರ್ ಅವರ ನಿರ್ದೇಶನದ, ವಿಜಯ್ ಸೇತುಪತಿ ನಟನೆಯ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇದಲ್ಲದೆ, ಎಆರ್ ಮುರುಗದಾಸ್ ನಿರ್ದೇಶನದ ದೊಡ್ಡ ಯೋಜನೆಯೊಂದರ ಭಾಗವಾಗಿದ್ದಾರೆ. ಚಿತ್ರದಲ್ಲಿ ಶಿವಕಾರ್ತಿಕೇಯನ್ ಅವರೊಂದಿಗೆ ತೆರೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ.

ಕಾಂತರ- ಅಧ್ಯಾಯ 1ರಲ್ಲಿ ನಟಿ ರುಕ್ಮಿಣಿ ವಸಂತ್ ನಟಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ನಟಿಯೊಂದಿಗೆ ಮಾತುಕತೆಗಳು ಪ್ರಗತಿಯಲ್ಲಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಶೀಘ್ರದಲ್ಲೇ ಚಿತ್ರತಂಡ ಅಧಿಕೃತ ಘೋಷಣೆ ಮಾಡಲಿದೆ ಎನ್ನಲಾಗಿದೆ.

ನಟಿ ರುಕ್ಮಿಣಿ ವಸಂತ್ - ಕಾಂತಾರ- ಅಧ್ಯಾಯ 1ರ ಪೋಸ್ಟರ್
'ಭೈರತಿ ರಣಗಲ್' ನನ್ನ ವೃತ್ತಿ ಜೀವನದಲ್ಲಿ ಮಹತ್ವದ ತಿರುವಿನ ಪಾತ್ರ: ರುಕ್ಮಿಣಿ ವಸಂತ್

ಕಾಂತಾರ ಚಿತ್ರದ ಕ್ರಿಯೇಟೀವ್ ತಂಡದಲ್ಲಿ ರಿಷಬ್ ಶೆಟ್ಟಿ ಮತ್ತು ಬರಹಗಾರರಾದ ಅನಿರುದ್ಧ್ ಮಹೇಶ್ ಮತ್ತು ಶನಿಲ್ ಗುರು ಚಿತ್ರಕಥೆಯ ಭಾಗವಾಗಿದ್ದಾರೆ. ಚಿತ್ರಕ್ಕೆ ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com