ಜಟ್ಟ ಖ್ಯಾತಿಯ ಗಿರಿರಾಜ್ ನಿರ್ದೇಶನದ ಹೊಸ ಸೈಕಲಾಜಿಕಲ್ ಥ್ರಿಲ್ಲರ್‌ನಲ್ಲಿ ನಟಿ ರಾಗಿಣಿ ದ್ವಿವೇದಿ!

ಜಟ್ಟ ಮತ್ತು ಮೈತ್ರಿಯಂತಹ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಬಿಎಂ ಗಿರಿರಾಜ್ ಸದ್ಯ ಗುರುದೇಶಪಾಂಡೆಯವರ ಜಿ ಸಿನಿಮಾಸ್ ಮೂಲಕ 'ರಾಮರಸ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಮಧ್ಯೆ, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಈಗಾಗಲೇ ತಮ್ಮ ಮುಂದಿನ ಯೋಜನೆಗೆ ಸಜ್ಜಾಗುತ್ತಿದ್ದಾರೆ.
ಜಟ್ಟ ಖ್ಯಾತಿಯ ಗಿರಿರಾಜ್ ನಿರ್ದೇಶನದ ಹೊಸ ಸೈಕಲಾಜಿಕಲ್ ಥ್ರಿಲ್ಲರ್‌ನಲ್ಲಿ ನಟಿ ರಾಗಿಣಿ ದ್ವಿವೇದಿ!
Updated on

ಜಟ್ಟ ಮತ್ತು ಮೈತ್ರಿಯಂತಹ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಬಿಎಂ ಗಿರಿರಾಜ್ ಸದ್ಯ ಗುರುದೇಶಪಾಂಡೆಯವರ ಜಿ ಸಿನಿಮಾಸ್ ಮೂಲಕ 'ರಾಮರಸ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಮಧ್ಯೆ, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಈಗಾಗಲೇ ತಮ್ಮ ಮುಂದಿನ ಯೋಜನೆಗೆ ಸಜ್ಜಾಗುತ್ತಿದ್ದಾರೆ.

ಸೈಕಲಾಜಿಕಲ್ ಥ್ರಿಲ್ಲರ್ ಆಗಿರುವ ಈ ಚಿತ್ರಕ್ಕೆ ರಾಗಿಣಿ ದ್ವಿವೇದಿ ನಾಯಕಿಯಾಗಿದ್ದಾರೆ ಎಂದು ಭಾನುವಾರ ಚಿತ್ರತಂಡ ಘೋಷಿಸಿದೆ. ಮೇ 24 ರಂದು ನಟಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ತಾರಾಗಣ, ಕಥಾವಸ್ತು ಮತ್ತು ಫಸ್ಟ್ ಲುಕ್ ಪೋಸ್ಟರ್‌ಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದಿದೆ. ರಾಮಕೃಷ್ಣ ನಿಗಡೆ ಹೊಂಬಣ್ಣ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಗಿರೀಶ್ ಗೌಡ ಅವರ ಮೇಲ್ವಿಚಾರಣೆ ನಡೆಸಲಿದ್ದಾರೆ.

ಜಟ್ಟ ಖ್ಯಾತಿಯ ಗಿರಿರಾಜ್ ನಿರ್ದೇಶನದ ಹೊಸ ಸೈಕಲಾಜಿಕಲ್ ಥ್ರಿಲ್ಲರ್‌ನಲ್ಲಿ ನಟಿ ರಾಗಿಣಿ ದ್ವಿವೇದಿ!
ಮೋಹನ್ ಲಾಲ್ ಅಭಿನಯದ 'ವೃಷಭ' ತಂಡಕ್ಕೆ ರಾಗಿಣಿ ದ್ವಿವೇದಿ ಸೇರ್ಪಡೆ

ರಾಗಿಣಿ ದ್ವಿವೇದಿ ಅವರು ಚಿತ್ರದ ಭಾಗವಾಗಿರುವ ಕುರಿತು ಚಿತ್ರತಂಡ ಘೋಷಿಸಿದ್ದರೂ, ಇನ್ನುಳಿದ ತಾರಾಗಣವನ್ನು ಅಂತಿಮಗೊಳಿಸಿಲ್ಲ. ಈಮಧ್ಯೆ, ಈ ಹಿಂದೆ ಗಿರಿರಾಜ್ ಅವರೊಂದಿಗೆ ಕಾರ್ಪೊರೇಟ್ ಮತ್ತು ಕಮರ್ಷಿಯಲ್ ಜಾಹೀರಾತುಗಳಲ್ಲಿ ಕೆಲಸ ಮಾಡಿದ್ದ ರಂಗಸ್ವಾಮಿ ಈ ಯೋಜನೆಗೆ ಛಾಯಾಗ್ರಾಹಕರಾಗಿ ಪದಾರ್ಪಣೆ ಮಾಡಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com