ಮೇ 24ಕ್ಕೆ 'ಎವಿಡೆನ್ಸ್' ರಾಜ್ಯಾದ್ಯಂತ ಬಿಡುಗಡೆ

ರೋಬೋ ಗಣೇಶನ್ (ಜೋಶ್) ಚಿತ್ರದ ನಾಯಕ ನಟನಾಗಿದ್ದು, ಮಾನಸ ಜೋಶಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕಿರಂಗೂರಿನ ಗಯ್ಯಾಳಿಗಳು ಚಿತ್ರದಲ್ಲಿನ ಪಾತ್ರದಿಂದ ಖ್ಯಾತರಾಗಿದ್ದ ಮಾನಸ ''ಎವಿಡೆನ್ಸ್'' ನಲ್ಲಿ ತನಿಖಾಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಮಾನಸ ಜೋಶಿ
ಮಾನಸ ಜೋಶಿ
Updated on

ಉಪೇಂದ್ರ ಅವರ 'ಶ್ ' ಚಿತ್ರದಿಂದ ಹಿಡಿದು ಉಪೇಂದ್ರ 2 ವರೆಗೂ ಅವರ ಜೊತೆಗೆ ಕೆಲಸ ಮಾಡಿದ್ದ ಪ್ರವೀಣ್ ರಾಮಚಂದ್ರ ನಿರ್ದೇಶನದ ಚೊಚ್ಚಲ ಕನ್ನಡ ಚಲನಚಿತ್ರ ''ಎವಿಡೆನ್ಸ್'' ಮೇ 24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ಅವರೇ ಬರೆದಿದ್ದಾರೆ. ಕ್ರೈಮ್, ಥ್ರಿಲ್ಲರ್ ಮತ್ತು ರೋಮ್ಯಾನ್ಸ್ ನಲ್ಲಿ ಸಾಗುವ ತ್ರಿಕೋನ ಪ್ರೇಮಕಥೆ ಇದಾಗಿದೆ.

ಮಾನಸ ಜೋಶಿ
ಚಿತ್ರೀಕರಣ ಪೂರ್ಣಗೊಳಿಸಿದ ‘ಎವಿಡೆನ್ಸ್’: 'ಕಿರಗೂರಿನ ಗಯ್ಯಾಳಿಗಳು' ಖ್ಯಾತಿಯ ಮಾನಸ ನಾಯಕಿ

ರೋಬೋ ಗಣೇಶನ್ (ಜೋಶ್) ಚಿತ್ರದ ನಾಯಕ ನಟನಾಗಿದ್ದು, ಮಾನಸ ಜೋಶಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕಿರಂಗೂರಿನ ಗಯ್ಯಾಳಿಗಳು ಚಿತ್ರದಲ್ಲಿನ ಪಾತ್ರದಿಂದ ಖ್ಯಾತರಾಗಿದ್ದ ಮಾನಸ ''ಎವಿಡೆನ್ಸ್'' ನಲ್ಲಿ ತನಿಖಾಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಆದಿತ್ಯ, ರಚಿತಾ, ಪೂಜಿತಾ ಬೋಬೆ ಗೌಡ್, ಚಮಕ್ ಚಂದ್ರ, ಪವನ್ ಸುರೇಶ್, ಶಶಿಧರ ಕೋಟೆ, ಕಾರ್ತಿಕ್ ವರ್ಣೇಕರ್, ಮನಮೋಹನ್ ರೈ, ರೇಣು ಶಿಕಾರಿ ಮತ್ತು ಆರಾಧ್ಯ ಶಿವಕುಮಾರ್ ಮತ್ತಿತರ ತಾರಾಗಣವಿದೆ, ಪ್ರತಿಯೊಬ್ಬರೂ ನಿರೂಪಣೆಗೆ ಗಣನೀಯವಾಗಿ ಕೊಡುಗೆ ನೀಡಿದ್ದಾರೆ. ಶ್ರೀಧೃತಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಎಂಎನ್ ರವೀಂದ್ರರಾವ್, ಪ್ರಶಾಂತ್ ಸಿಪಿ, ಮತ್ತು ರಮೇಶ್ ಕೆ ಜೊತೆಗೆ ಅರವಿಂದ್ ಅಚ್ಚು ಅವರು ಚಿತ್ರವನ್ನು ನಿರ್ಮಿಸಿದ್ದಾರೆ.

ಸಿಜೆ ಅವರ ಹಿನ್ನೆಲೆ ಸಂಗೀತ ಒದಗಿಸಿದ್ದು, ಆರೋನ್ ಕಾರ್ತಿಕ್ ವೆಂಕಟೇಶ್ ನಾಲ್ಕು ಹಾಡುಗಳನ್ನು ಸಂಯೋಜಿಸಿರುವ ಈ ಚಿತ್ರಕ್ಕೆ ನಾಗೇಂದ್ರ ಪ್ರಸಾದ್, ಪ್ರವೀಣ್ ರಾಮಕೃಷ್ಣ ಮತ್ತು ಕಾರ್ತಿಕ್ ಅವರ ಸಾಹಿತ್ಯವಿದೆ. ರವಿ ಸುವರ್ಣ ಅವರ ಛಾಯಾಗ್ರಹಣವನ್ನು ಹೊಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com