'ಥ್ರಿಲ್ಲರ್' ಚಿತ್ರಕ್ಕಾಗಿ ಮತ್ತೆ ಒಂದಾಗುತ್ತಿರುವ ಕೃಷ್ಣ- ಶಶಾಂಕ್!

'ಕೌಸಲ್ಯ ಸುಪ್ರಜಾ ರಾಮಾ' ಯಶಸ್ವಿ ಚಿತ್ರ ನೀಡಿದ ನಿರ್ದೇಶಕ ಶಶಾಂಕ್ ಮತ್ತು ನಟ ಕೃಷ್ಣ ಮತ್ತೊಮ್ಮೆ ಒಂದಾಗುತ್ತಿದ್ದಾರೆ ಎಂದು ವರದಿಯಾಗಿದೆ. ಹೊಸ ಪ್ರಾಜೆಕ್ಟ್ ಕೆಲಸ ನಡೆಯುತ್ತಿದೆ ಎಂದು ಇತ್ತೀಚಿಗೆ ತಿಳಿದುಬಂದಿದೆ.
ಕೃಷ್ಣ-ಶಶಾಂಕ್
ಕೃಷ್ಣ-ಶಶಾಂಕ್
Updated on

'ಕೌಸಲ್ಯ ಸುಪ್ರಜಾ ರಾಮಾ' ಯಶಸ್ವಿ ಚಿತ್ರ ನೀಡಿದ ನಿರ್ದೇಶಕ ಶಶಾಂಕ್ ಮತ್ತು ನಟ ಕೃಷ್ಣ ಮತ್ತೊಮ್ಮೆ ಒಂದಾಗುತ್ತಿದ್ದಾರೆ ಎಂದು ವರದಿಯಾಗಿದೆ. ಹೊಸ ಪ್ರಾಜೆಕ್ಟ್ ಕೆಲಸ ನಡೆಯುತ್ತಿದೆ ಎಂದು ಇತ್ತೀಚಿಗೆ ತಿಳಿದುಬಂದಿದೆ.

ಕೌಸಲ್ಯ ಸುಪ್ರಜಾ ರಾಮಾ (2023) ಒಂದು ಅಭೂತಪೂರ್ವ ಕೌಟುಂಬಿಕ ಚಿತ್ರವಾಗಿತ್ತು. ನಾಗಭೂಷಣ್ ಜೊತೆಗೆ ಮಿಲನಾ ನಾಗರಾಜ್ ಮತ್ತು ಬೃಂದಾ ಆಚಾರ್ಯ ಅವರು ವಿಶಿಷ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಚಿತ್ರಕ್ಕೆ ಪ್ರೇಕ್ಷಕರಿಗೆ ಮನಸೋತಿದ್ದರು.

ಆದರೆ, ಈ ಬಾರಿ ನಿರ್ದೇಶಕರು ಕೃಷ್ಣ ಅವರಿಗಾಗಿ ಥ್ರಿಲ್ಲಿಂಗ್ ಚಿತ್ರ ಮಾಡಲು ಮುಂದಾಗಿದ್ದಾರೆ. ಪ್ರಸ್ತುತ ಸ್ಕ್ರಿಪ್ಟ್ ರಚಿಸುತ್ತಿರುವ ನಿರ್ದೇಶಕರು ತಮ್ಮ ಮುಂದಿನ ಚಿತ್ರಕ್ಕೆ ಹೊಸದಾಗಿ ತೋರಿಸುವ ಗುರಿ ಹೊಂದಿದ್ದಾರೆ. ಈ ಸುದ್ದಿಯನ್ನು ಶಶಾಂಕ್ ಖಚಿತಪಡಿಸಿದ್ದಾರೆ. ಈ ಬಾರಿ ಥ್ರಿಲ್ಲರ್‌ ಚಿತ್ರಕ್ಕಾಗಿ “ಕೃಷ್ಣ ಮತ್ತು ನಾನು ಮತ್ತೆ ಒಂದಾಗುತ್ತಿದ್ದೇವೆ. ನಿರ್ದೇಶಕನಾಗಿ ನನಗೆ ಮತ್ತು ನಟನಾಗಿ ಕೃಷ್ಣನಿಗೆ ಇದು ಹೊಸ ಪರಿಕಲ್ಪನೆ. ಇದು ನಟನ ಹಿಂದೆಂದೂ ನೋಡಿರದ ಭಾಗವನ್ನು ಅನಾವರಣಗೊಳಿಸುವ ಭರವಸೆ ನೀಡುತ್ತದೆ ಎಂದು ಹೇಳಿದರು.

ಕೃಷ್ಣ-ಶಶಾಂಕ್
ಡಾರ್ಲಿಂಗ್‌ ಕೃಷ್ಣ ನಟನೆಯ 'ಕೌಸಲ್ಯ ಸುಪ್ರಜಾ ರಾಮ' ಎಲ್ಲರ ಜೀವನಕ್ಕೂ ಕನೆಕ್ಟ್ ಆಗುವ ಕಥೆ!

ಈ ಮಧ್ಯೆ , ಕೃಷ್ಣ ಆರ್‌ಸಿ ಸ್ಟುಡಿಯೋಸ್ ನಿರ್ಮಿಸಿರುವ ಫಾದರ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ, ಇದರಲ್ಲಿ ಪ್ರಕಾಶ್ ರಾಜ್ ಮತ್ತು ತೆಲುಗು ನಟ ಸುನೀಲ್ ಸಹ ನಟಿಸಿದ್ದಾರೆ. ಜುಲೈನಲ್ಲಿ ಫಾದರ್ ಚಿತ್ರೀಕರಣವನ್ನು ಪೂರ್ಣಗೊಳಿಸುವ ನಿರೀಕ್ಷೆಯಿದ್ದು, ಶೀಘ್ರದಲ್ಲೇ ಶಶಾಂಕ್ ಅವರ ಚಿತ್ರಕ್ಕೆ ಧುಮುಕಲಿದ್ದಾರೆ, ಆಗಸ್ಟ್‌ನಲ್ಲಿ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com