ಸೂರಿ ನಿರ್ದೇಶನದ 'ಕಾಗೆ ಬಂಗಾರ' ಚಿತ್ರದಿಂದ ವಿರಾಟ್ ಔಟ್; ನಟ ಯುವ ರಾಜ್‌ಕುಮಾರ್ ನಾಯಕ!

PRK ಪ್ರೊಡಕ್ಷನ್ಸ್ (ಅಶ್ವಿನಿ ಪುನೀತ್ ರಾಜ್‌ಕುಮಾರ್), ಜಯಣ್ಣ ಮತ್ತು ಭೋಗೇಂದ್ರ ಅವರ ಜಯಣ್ಣ ಫಿಲ್ಮ್ಸ್ ಮತ್ತು KRG ಸ್ಟುಡಿಯೋಸ್ (ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್) ನಿರ್ಮಾಣ ಸಂಸ್ಥೆಗಳು ಕಾಗೆ ಬಂಗಾರ ಚಿತ್ರಕ್ಕಾಗಿ ಒಂದಾಗಿವೆ.
ರಿಥನ್ಯಾ ವಿಜಯ್ - ಯುವ ರಾಜ್‌ಕುಮಾರ್
ರಿಥನ್ಯಾ ವಿಜಯ್ - ಯುವ ರಾಜ್‌ಕುಮಾರ್
Updated on

ಕೆಂಡಸಂಪಿಗೆ ಚಿತ್ರ ತೆರೆಕಂಡ ದಿನಗಳಿಂದಲೂ ನಿರ್ದೇಶಕ ಸೂರಿ ಅವರ 'ಕಾಗೆ ಬಂಗಾರ' ಚಿತ್ರ ವ್ಯಾಪಕ ನಿರೀಕ್ಷೆ ಮೂಡಿಸಿದೆ. ಆದರೆ, ಚಿತ್ರ ಅಲ್ಲೇ ನಿಂತುಹೋಗಿತ್ತು. ಬಳಿಕ ಸೂರಿ ಚಿತ್ರ ನಿರ್ದೇಶಿಸುತ್ತಿದ್ದಾರೆ ಎಂಬ ಸುದ್ದಿಯು ಮತ್ತೆ ಅಭಿಮಾನಿಗಳಲ್ಲಿ ಉತ್ಸಾಹ ಹುಟ್ಟುಹಾಕಿತ್ತು. ಇದೀಗ ಕಾಗೆ ಬಂಗಾರ ಚಿತ್ರ ಮತ್ತೊಮ್ಮೆ ಸುದ್ದಿಯಾಗುತ್ತಿದೆ. ಆರಂಭದಲ್ಲಿ ಚಿತ್ರದ ನಾಯಕನಾಗಿ ವಿರಾಟ್ ಆಯ್ಕೆಯಾಗಿದ್ದರು. ಆದರೆ, ಇದೀಗ ವಿರಾಟ್ ಬದಲಿಗೆ ಯುವ ರಾಜ್‌ಕುಮಾರ್ ಚಿತ್ರದಲ್ಲಿ ನಾಯಕನಾಗಿ ನಟಿಸಲಿದ್ದಾರೆ.

ಕಾಗೆ ಬಂಗಾರ ಚಿತ್ರವು ಕೆಂಡಸಂಪಿಗೆ ಮತ್ತು ಪಾಪ್‌ಕಾರ್ನ್ ಮಂಕಿ ಟೈಗರ್‌ ತುದಿಗಳನ್ನು ಒಟ್ಟಿಗೆ ತರಲಿದೆ. ಸಿನಿಮಾ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿದ ಸೂರಿ, "ಮೊದಲು ನಾನು ವಿರಾಟ್‌ಗೆ ಕ್ಷಮೆ ಕೇಳಲು ಬಯಸುತ್ತೇನೆ. ಅವರು ಈ ಯೋಜನೆಯ ಭಾಗವಾಗಲು ಆಸೆಯನ್ನು ಹೊಂದಿದ್ದರು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. ಅವರ ಕೊನೆಯ ಚಿತ್ರವನ್ನು ವೀಕ್ಷಿಸಿದ ನಂತರ ಮತ್ತು ರಾಯಲ್ ಪ್ರಚಾರದ ಸಮಯದಲ್ಲಿ ಅವರ ಸಂದರ್ಶನಗಳನ್ನು ನೋಡಿದ ನಂತರ ನಾನು ಅವರೊಂದಿಗೆ ಮಾತನಾಡಿದೆ. ನಾನು ಭವಿಷ್ಯದಲ್ಲಿ ಅವರೊಂದಿಗೆ ಚಿತ್ರ ಮಾಡುತ್ತೇನೆ' ಎಂದರು.

'ಕಾಗೆ ಬಂಗಾರ ಚಿತ್ರದ ಪಾತ್ರಕ್ಕೆ ಯುವ ರಾಜ್‌ಕುಮಾರ್ ಸೂಕ್ತವಾಗಿದ್ದಾರೆ. ಯುವ ಅವರ ನಟನೆಯಲ್ಲಿ ಜವಾಬ್ದಾರಿ ಇದೆ. ನಾನು ಅವರನ್ನು ವ್ಯಕ್ತಿಯಾಗಿ ಬದಲಾಯಿಸಲು ಸಾಧ್ಯವಿಲ್ಲ, ಆದರೆ ನಾನು ಅವರನ್ನು ಕಾಗೆ ಬಂಗಾರ ಚಿತ್ರದ ಪಾತ್ರಕ್ಕೆ ತಕ್ಕಂತೆ ರೂಪಿಸಬಲ್ಲೆ' ಎಂದು ಸೂರಿ ಹೇಳುತ್ತಾರೆ. 'ನಾನು ದೊಡ್ಮನೆ ಕುಟುಂಬದ ಪ್ರತಿಯೊಬ್ಬ ನಟರೊಂದಿಗೆ ಕೆಲಸ ಮಾಡುವುದನ್ನು ಆನಂದಿಸುತ್ತೇನೆ. ನಾವು ಯುವ ರಾಜ್‌ಕುಮಾರ್ ಅವರೊಂದಿಗೆ ಮತ್ತೊಂದು ಯೋಜನೆಯಲ್ಲಿ ಕೆಲಸ ಮಾಡಬೇಕಾಗಿತ್ತು. ಆದರೆ, ಅದು ಹೊಂದಿಕೆಯಾಗಲಿಲ್ಲ. ಈಗ, ನಾವು ಅಂತಿಮವಾಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ' ಎಂದ ಅವರು ವಿನಯ್ ರಾಜ್‌ಕುಮಾರ್ ಅವರೊಂದಿಗೆ ಕೆಲಸ ಮಾಡುವುದನ್ನು ಬಹಿರಂಗಪಡಿಸಿದರು.

PRK ಪ್ರೊಡಕ್ಷನ್ಸ್ (ಅಶ್ವಿನಿ ಪುನೀತ್ ರಾಜ್‌ಕುಮಾರ್), ಜಯಣ್ಣ ಮತ್ತು ಭೋಗೇಂದ್ರ ಅವರ ಜಯಣ್ಣ ಫಿಲ್ಮ್ಸ್ ಮತ್ತು KRG ಸ್ಟುಡಿಯೋಸ್ (ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್) ನಿರ್ಮಾಣ ಸಂಸ್ಥೆಗಳು ಕಾಗೆ ಬಂಗಾರ ಚಿತ್ರಕ್ಕಾಗಿ ಒಂದಾಗಿವೆ. ಕಾಗೆ ಬಂಗಾರ ಚಿತ್ರದ ಮೂಲಕ ನಟ ದುನಿಯಾ ವಿಜಯ್ ಅವರ ಮಗಳು ರಿಥನ್ಯಾ ವಿಜಯ್ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ರಿಥನ್ಯಾ ವಿಜಯ್ - ಯುವ ರಾಜ್‌ಕುಮಾರ್
ವಿರಾಟ್ ನಟನೆಯ ಕಾಗೆ ಬಂಗಾರ ಚಿತ್ರಕ್ಕೆ ನಿರ್ದೇಶಕ ಸೂರಿ ಆ್ಯಕ್ಷನ್ ಕಟ್; ನಾಯಕಿಯಾಗಿ ದುನಿಯಾ ವಿಜಯ್ ಪುತ್ರಿ ಎಂಟ್ರಿ

ಚಿತ್ರಕ್ಕೆ ಸುರೇಂದ್ರನಾಥ್ ಕಥೆ ಬರೆದಿದ್ದು, ಅಮ್ರಿ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ಚರಣ್ ರಾಜ್ ಅವರು ಸಂಗೀತ ಸಂಯೋಜಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಮತ್ತು ಶೇಖರ್ ಛಾಯಾಗ್ರಹಣವನ್ನು ನಿಭಾಯಿಸಲಿದ್ದಾರೆ.

ಕೆಂಡಸಂಪಿಗೆ ಮತ್ತು ಪಾಪ್‌ಕಾರ್ನ್ ಮಂಕಿ ಟೈಗರ್‌ನ ಪಾತ್ರಗಳು ಕಾಗೆ ಬಂಗಾರದಲ್ಲಿ ಕಾಣಿಸಿಕೊಳ್ಳುತ್ತವೆ. ವಿಭಿನ್ನ ಪ್ರಪಂಚಗಳನ್ನು ಒಂದುಗೂಡಿಸುತ್ತದೆ. 'ಕಾಗೆ ಬಂಗಾರ ಎಂಬ ಶೀರ್ಷಿಕೆಯು ಜನರನ್ನು ರೋಮಾಂಚನಗೊಳಿಸಿದೆ ಮತ್ತು ಈ ಯೋಜನೆಯು ದೊಡ್ಡದಾಗುತ್ತಿದೆ' ಎನ್ನುತ್ತಾರೆ ಸೂರಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com