
ನಟ ಉಪೇಂದ್ರ ಸದ್ಯ ಹಲವು ರೋಮಾಂಚಕಾರಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸೂಪರ್ಸ್ಟಾರ್ ರಜನಿಕಾಂತ್ ಅವರೊಂದಿಗೆ ತಮಿಳು ಚಿತ್ರ ಕೂಲಿ ಮತ್ತು ರಾಮ್ ಪೋತಿನೇನಿ ಅವರ ಮುಂಬರುವ ಚಿತ್ರ #RAPO22 ಸೇರಿದಂತೆ ಬಹು ಭಾಷೆಗಳಲ್ಲಿ ನಟಿಸಲಿದ್ದಾರೆ. ಇತ್ತ ಕನ್ನಡ ಚಿತ್ರರಂಗದಲ್ಲೂ ಹಲವಾರು ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಉಪೇಂದ್ರ ಅವರು ತಮ್ಮ ಬಹುನಿರೀಕ್ಷಿತ 45 ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಈ ಚಿತ್ರವನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ನಿರ್ದೇಶಿಸಿದ್ದು, ಸೂರಜ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಿಸಲಾಗಿದೆ. ಈ ಸಿನಿಮಾ ಈಗಾಗಲೇ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಅವರ ಬಳಿ ಬುದ್ದಿವಂತ 2 ಸಿನಿಮಾ ಕೂಡ ಇದೆ. ಈ ಸಿನಿಮಾ ನಿರ್ಮಾಣ ಹಂತದಲ್ಲಿದೆ. ಇದರ ಜೊತೆಗೆ, ಶೀಘ್ರದಲ್ಲೇ ನಾಗಣ್ಣ ನಿರ್ದೇಶನದ, ನಿರ್ಮಾಪಕ ಸೂರಪ್ಪ ಬಾಬು ಅವರ ಬೆಂಬಲದೊಂದಿಗೆ ಭಾರ್ಗವ ಸಿನಿಮಾದ ಕೆಲಸ ಆರಂಭಿಸಲಿದ್ದಾರೆ.
ಇದರೊಂದಿಗೆ, ಉಪೇಂದ್ರ ಅವರು ಇನ್ನೂ ಎರಡು ಕನ್ನಡ ಚಿತ್ರಗಳಿಗೆ ಸಹಿ ಹಾಕುವ ಹಂತದಲ್ಲಿದ್ದಾರೆ. 'ನಾನು ಕರ್ವ ಮತ್ತು ಛೂಮಂತರ್ ನಿರ್ದೇಶಕ ನವನೀತ್ ಅವರೊಂದಿಗೆ ರಘು ನಿರ್ಮಿಸುವ ಹೊಸ ಚಿತ್ರದಲ್ಲಿ ಕೆಲಸ ಮಾಡುತ್ತೇನೆ. ಇದು ತುಂಬಾ ಆಸಕ್ತಿದಾಯಕ ವಿಷಯವಾಗಿದೆ ಮತ್ತು ಸದ್ಯ ನಿರ್ಮಾಣ ಹಂತದಲ್ಲಿದೆ' ಎಂದು ಅವರು ಹಂಚಿಕೊಳ್ಳುತ್ತಾರೆ.
ಛೂಮಂತರ್ ನಿರ್ಮಾಪಕ ತರುಣ್ ಶಿವಪ್ಪ ಅವರೊಂದಿಗೆ ಚರ್ಚೆಯಲ್ಲಿದ್ದು, ಶೀಘ್ರದಲ್ಲೇ ಚಿತ್ರವೊಂದರಲ್ಲಿ ಒಟ್ಟಿಗೆ ಕೆಲಸ ಮಾಡಲು ಯೋಜಿಸಿದ್ದೇವೆ' ಎಂದು ಉಪೇಂದ್ರ ಹೇಳುತ್ತಾರೆ.
Advertisement