'ಭಾರತೀಯ ಚಿತ್ರರಂಗ ಇಂತಹ ಚಿತ್ರವನ್ನು ಎಂದಿಗೂ ಕಂಡಿಲ್ಲ': ರಿಷಭ್ ಶೆಟ್ಟಿ ಕೆಲಸಕ್ಕೆ ಸಂದೀಪ್ ರೆಡ್ಡಿ ವಂಗಾ ಮೆಚ್ಚುಗೆ

ಬಿ ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆಗೆ ವಂಗಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಿನಿಮಾ ಅನುಭವಕ್ಕೆ ಮತ್ತೊಂದು ಮೆರುಗನ್ನು ಸೇರಿಸಿದ್ದಾರೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಿಷಭ್ ಶೆಟ್ಟಿ, 'ಧನ್ಯವಾದಗಳು ಸಹೋದರ' ಎಂದಿದ್ದಾರೆ.
Kantara: Chapter 1- Sandeep Reddy Vanga
ಕಾಂತಾರ ಪೋಸ್ಟರ್ - ಸಂದೀಪ್ ರೆಡ್ಡಿ ವಂಗಾ
Updated on

ಮುಂಬೈ: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ: ಚಾಪ್ಟರ್ 1' ಚಿತ್ರವನ್ನು ಶ್ಲಾಘಿಸಿರುವ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ಇದೊಂದು 'ನಿಜವಾದ ಮಾಸ್ಟರ್‌ಪೀಸ್' ಮತ್ತು ಅಭೂತಪೂರ್ವ ಸಿನಿಮೀಯ ಅನುಭವ ಎಂದು ಬಣ್ಣಿಸಿದ್ದಾರೆ.

'ಕಾಂತಾರ: ಚಾಪ್ಟರ್ 1' ಚಿತ್ರವು ನೆನ್ನೆ ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದಾದ ಸ್ವಲ್ಪ ಸಮಯದ ನಂತರ, ಅರ್ಜುನ್ ರೆಡ್ಡಿ, ಅನಿಮಲ್ ಖ್ಯಾತಿಯ ವಂಗಾ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

'ಕಾಂತಾರ: ಚಾಪ್ಟರ್ 1' ನಿಜವಾದ ಮಾಸ್ಟರ್‌ಪೀಸ್. ಭಾರತೀಯ ಚಿತ್ರರಂಗವು ಈ ಹಿಂದೆ ಇಂತಹದ್ದನ್ನು ನೋಡಿರಲಿಲ್ಲ. ಇದು ಸಿನಿಮೀಯ ಗುಡುಗು, ಕಚ್ಚಾ, ದೈವಿಕ ಮತ್ತು ಅಲುಗಾಡಿಸಲು ಆಗದಂತಹ ಚಿತ್ರ. ರಿಷಬ್ ಶೆಟ್ಟಿ ನಿಜವಾದ ಏಕವ್ಯಕ್ತಿ ಪ್ರದರ್ಶನವನ್ನು ನೀಡುತ್ತಾರೆ. ಇದನ್ನು ಏಕಾಂಗಿಯಾಗಿ ಮಾಡಿದ್ದಾರೆ ಮತ್ತು ನಿರ್ವಹಿಸಿದ್ದಾರೆ' ಎಂದು ವಂಗಾ ಬರೆದಿದ್ದಾರೆ.

ಬಿ ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆಗೆ ವಂಗಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಿನಿಮಾ ಅನುಭವಕ್ಕೆ ಮತ್ತೊಂದು ಮೆರುಗನ್ನು ಸೇರಿಸಿದ್ದಾರೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಿಷಭ್ ಶೆಟ್ಟಿ, 'ಧನ್ಯವಾದಗಳು ಸಹೋದರ' ಎಂದಿದ್ದಾರೆ.

Kantara: Chapter 1- Sandeep Reddy Vanga
Box Office Collection: ಕೆಜಿಎಫ್ 2 ಗಿಂತ ಸ್ವಲ್ಪ ಹಿಂದುಳಿದ Kantara Chapter 1; ರಿಷಭ್ ಶೆಟ್ಟಿ ನಟನೆಯ ಚಿತ್ರ ಗಳಿಸಿದ್ದೆಷ್ಟು?

ರಿಷಭ್ ಶೆಟ್ಟಿ ಪ್ರತ್ಯೇಕ ಟ್ವೀಟ್‌ನಲ್ಲಿ ಚಿತ್ರದ ಆರಂಭಿಕ ದಿನದಂದು ಪ್ರದರ್ಶನದ ಬಗ್ಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. '2016ರಲ್ಲಿ ಒಂದು ಸಂಜೆ ಟಿಕೆಟ್ ಪಡೆಯಲು ಹೆಣಗಾಡುವುದರಿಂದ ಹಿಡಿದು 2025ರಲ್ಲಿ 5000+ ಹೌಸ್‌ಫುಲ್ ಪ್ರದರ್ಶನಗಳವರೆಗೆ. ಈ ಪ್ರಯಾಣವು ನಿಮ್ಮ ಪ್ರೀತಿ, ಬೆಂಬಲ ಮತ್ತು ದೇವರ ಕೃಪೆಯನ್ನು ಹೊರತುಪಡಿಸಿ ಬೇರೇನೂ ಅಲ್ಲ. ಇದನ್ನು ಸಾಧ್ಯವಾಗಿಸಿದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಎಂದೆಂದಿಗೂ ಕೃತಜ್ಞನಾಗಿದ್ದೇನೆ' ಎಂದು ಅವರು X ನಲ್ಲಿ ಬರೆದಿದ್ದಾರೆ.

ಚಲನಚಿತ್ರ ವಿಶ್ಲೇಷಕ ತರಣ್ ಆದರ್ಶ್ ಅವರ ಪ್ರಕಾರ, 'ಕಾಂತಾರ: ಚಾಪ್ಟರ್ 1' ಪುರಾಣ, ಜಾನಪದ, ಉಸಿರುಕಟ್ಟುವ ದೃಶ್ಯಗಳು ಮತ್ತು ಶಕ್ತಿಯುತ ಕಥೆ ಹೇಳುವಿಕೆಯ ಮಿಶ್ರಣವಾಗಿರುವ ಅದ್ಭುತ ದೃಶ್ಯವನ್ನು ನೀಡಿತು. ಆರಂಭದಿಂದಲೇ, ಕಾಂತಾರ: ಚಾಪ್ಟರ್ 1 ನಿಮ್ಮನ್ನು ಕಚ್ಚಾ, ದೈವಿಕ ಮತ್ತು ಭವ್ಯವಾದ ಜಗತ್ತಿಗೆ ಕರೆದೊಯ್ಯುತ್ತದೆ... ನಿರೂಪಣೆಯು ಪದರ ಪದರವಾಗಿದೆ, ಭಾವನೆಗಳು ಆಳವಾಗಿ ಚಲಿಸುತ್ತವೆ ಮತ್ತು ಆಧ್ಯಾತ್ಮಿಕ ಸಂಪರ್ಕವು ಪ್ರಬಲವಾಗಿದೆ. ರಿಷಭ್ ಶೆಟ್ಟಿ ಮತ್ತೊಮ್ಮೆ ಅವರು ನಮ್ಮ ಕಾಲದ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರು ಎಂದು ಸಾಬೀತುಪಡಿಸುತ್ತಾರೆ... ಕಂಟೆಂಟ್, ಪ್ರಮಾಣ ಮತ್ತು ಭಾವನೆಯ ಮೇಲಿನ ಅವರ ಹಿಡಿತವು ಅಸಾಧಾರಣವಾಗಿದೆ' ಎಂದು ಬರೆದಿದ್ದಾರೆ.

ರಿಷಬ್ ಶೆಟ್ಟಿ ಬರೆದು, ನಿರ್ದೇಶಿಸಿರುವ 'ಕಾಂತಾರ: ಚಾಪ್ಟರ್ 1' ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು, ಬಂಗಾಳಿ ಮತ್ತು ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಅಕ್ಟೋಬರ್ 2ರ ಗುರುವಾರ ಬಿಡುಗಡೆಯಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com