
ಕನ್ನಡದ ಬಿಗ್ ಬಾಸ್ ಸೀಸನ್ 12 ಶುರುವಾಗಿ ಎರಡು ವಾರ ಕಳೆದಿದ್ದು, ಈ ವಾರದ ಕಿಚ್ಚನ ಪಂಚಾಯಿತಿ ತೀವ್ರ ಕುತೂಹಲ ಕೆರಳಿಸಿದೆ. ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಹಂಚಿಕೊಂಡಿದೆ. ಇದರಲ್ಲಿ ವೇದಿಕೆಗೆ ಬರುತ್ತಿದ್ದಂತೆಯೇ ಕಿಚ್ಚ ಸುದೀಪ್, ಕಾಕ್ರೋಚ್ ಸುಧಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಕಾಕ್ರೋಚ್ ಸುಧಿಗೆ ನಾವು ಕೊಟ್ಟ ಟಾಸ್ಕ್ ಹೇಗಿತ್ತು ಎಂದು ಸಹ ಸ್ಪರ್ಧಿಗಳನ್ನು ಸುದೀಪ್ ಕೇಳಿದ್ದಾರೆ. ಆಗ ಜಾಹ್ನವಿ ಕ್ರೌಯ, ಅಟ್ಟಹಾಸ ಕೇವಲ ಮೇಕಪ್ ಗಷ್ಟೇ ಸೀಮಿತವಾಗಿತ್ತು ಎಂದಿದ್ದಾರೆ. ಬಳಿಕ ರಾಶಿಕಾ, ಅಸುರ ಎನ್ನುವುದಕ್ಕಿಂತ ಜೋಕರ್ ತರ ಆಡಿದ್ದಾರೆ ಎಂದು ಹೇಳಿದ್ದಾರೆ.
ಮನೆಯವರ ಮಾತನ್ನು ಕೇಳಿ ಆಕ್ರೋಶಗೊಂಡ ಸುಧಿ, ಅವರ ಕಾಲಿಗೆ ಬಿದ್ದಿಲ್ಲ ಅಷ್ಟೇ. ಇನ್ನು ಹೇಗೆ ಬದುಕಬೇಕು. ಇವರುಗಳ ಜೊತೆಗೆ ಇರೋದಕ್ಕೆ ಆಗೋದಿಲ್ಲ ಅಣ್ಣ ಎಂದಿದ್ದಾರೆ.
ಆಗ ಸುದೀಪ್, ಶೋ ಗಂಭೀರತೆ ನಿಮಗೆ ಅರ್ಥ ಆಗುತ್ತಿಲ್ಲ ಎಂದರೆ ಮರ್ಯಾದೆಯಿಂದ ಈಗಲೇ ಕಳುಹಿಸಿ ಕೊಡ್ತೀನಿ ಅಂತಾ ಹೇಳುತ್ತಾ ಬಾಗಿಲನ್ನು ಓಪನ್ ಮಾಡಿ ಎಂದಿದ್ದಾರೆ. ಹೀಗಾಗಿ ಇಂದಿನ ಕಿಚ್ಚನ ಪಂಚಾಯಿತಿಯಲ್ಲಿ ಏನಾಗುತ್ತದೆ ಎಂಬುದು ವೀಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.
Advertisement