'ಮಾತೃಭಾಷೆ ಕನ್ನಡ ಮಾತನಾಡುವವರೂ...': ಕನ್ನಡ್ ಎನ್ನುವ ವರದಿಗಾರರನ್ನು ಸರಿಪಡಿಸಿ ಎಂದವರಿಗೆ ಗುಲ್ಶನ್ ದೇವಯ್ಯ

2022ರಲ್ಲಿ ತೆರೆಕಂಡ ಬ್ಲಾಕ್ ಬಸ್ಟರ್ ಕಾಂತಾರ ಚಿತ್ರದ ಪ್ರೀಕ್ವೆಲ್ ಆಗಿರುವ ಕಾಂತಾರ: ಚಾಪ್ಟರ್ 1ರಲ್ಲಿ ಗುಲ್ಶನ್ ದೇವಯ್ಯ ರಾಜ ಕುಲಶೇಖರ ಪಾತ್ರದಲ್ಲಿ ನಟಿಸಿದ್ದಾರೆ.
Gulshan Devaiah in Kantara: Chapter 1
ಕಾಂತಾರ: ಚಾಪ್ಟರ್ 1ನಲ್ಲಿ ಗುಲ್ಶನ್ ದೇವಯ್ಯ
Updated on

ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ: ಚಾಪ್ಟರ್ 1 ಚಿತ್ರ ಭರ್ಜರಿ ಯಶಸ್ಸು ಸಾಧಿಸಿದೆ. ರಿಷಭ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಜೊತೆಗೆ ನಟಿಸಿದ್ದ ಗುಲ್ಶನ್ ದೇವಯ್ಯ ಇದೀಗ ಶಾಂತ ಮತ್ತು ನಿರಾಳರಾಗಿದ್ದು, ಚಿತ್ರದ ಯಶಸ್ಸನ್ನು ಆನಂದಿಸುತ್ತಿದ್ದಾರೆ. ಕನ್ನಡವನ್ನು ಕನ್ನಡ್ ಎಂದು ಕರೆಯುವ ಹಾಗೂ ಕಾಂತಾರವನ್ನು ಸರಿಯಾಗಿ ಉಚ್ಛರಿಸದ ಇತರ ರಾಜ್ಯದ ವರದಿಗಾರರನ್ನು ಸರಿ ಮಾಡುವಂತೆ ಕೇಳಿದ ಇಂಟರ್ನೆಟ್ ಬಳಕೆದಾರರೊಬ್ಬರಿಗೆ ನಟ ಪ್ರತಿಕ್ರಿಯಿಸಿದ್ದಾರೆ.

'ಸರಿ, ಸ್ಥಳೀಯ ಕನ್ನಡ ಮಾತನಾಡುವವರು ಸಹ ಇತರ ಭಾಷೆಗಳ ಪದಗಳನ್ನು ತಪ್ಪಾಗಿ ಉಚ್ಚರಿಸುತ್ತಾರೆ. ವೈಯಕ್ತಿಕವಾಗಿ ಇದು ದೊಡ್ಡ ವಿಷಯ ಎಂದು ನಾನು ಭಾವಿಸುವುದಿಲ್ಲ ... ಇದು ಉದ್ದೇಶಪೂರ್ವಕವಾಗಿ ಅಪಹಾಸ್ಯ ಮಾಡುವುದು ಅಥವಾ ಅವಮಾನಿಸುವುದಲ್ಲ' ಎಂದಿದ್ದಾರೆ.

'ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ನಮ್ಮನ್ನು ನೋಯಿಸುವ ಅಥವಾ ಕೀಳಾಗಿ ಕಾಣುವಂತಹ ಉದ್ದೇಶವಿಲ್ಲದ ಇಂತಹ ಚಿಕ್ಕಪುಟ್ಟ ವಿಷಯಗಳನ್ನು ಒಪ್ಪಿಕೊಳ್ಳಬೇಕು' ಎಂದು ಉತ್ತರಿಸಿದ್ದಾರೆ.

ದಿ ಹಿಂದೂ ಜೊತೆಗಿನ ಇತ್ತೀಚಿನ ಸಂಭಾಷಣೆಯಲ್ಲಿ, ಗುಲ್ಶನ್ ಅವರು ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮವನ್ನು ಅನ್ವೇಷಿಸಲು ಪ್ರಾರಂಭಿಸಿದಾಗ ತನಗೆ ಅನಾನುಕೂಲವಾಗಿತ್ತು. ಈಗ ಸಾಮಾಜಿಕ ಮಾಧ್ಯಮವನ್ನು ತನ್ನ 'ಅಧಿಕೃತ ಪ್ರತಿಬಿಂಬವಾಗಿ' ಬಳಸುತ್ತಿದ್ದೇನೆ ಎಂದರು.

Gulshan Devaiah in Kantara: Chapter 1
ಪುನೀತ್ ರಾಜ್‌ಕುಮಾರ್ ಸಿಗುವುದಕ್ಕೂ ಮುನ್ನ ಪಾಪ್‌ಕಾರ್ನ್ ಮಾರುತ್ತಿದ್ದೆ; ಕಾಂತಾರ: ಚಾಪ್ಟರ್ 1ರ ಸಂಕಲನಕಾರ

2022ರಲ್ಲಿ ತೆರೆಕಂಡ ಬ್ಲಾಕ್ ಬಸ್ಟರ್ ಕಾಂತಾರ ಚಿತ್ರದ ಪ್ರೀಕ್ವೆಲ್ ಆಗಿರುವ ಕಾಂತಾರ: ಚಾಪ್ಟರ್ 1ರಲ್ಲಿ ಗುಲ್ಶನ್ ದೇವಯ್ಯ ರಾಜ ಕುಲಶೇಖರ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ, ಮಲ್ಲೇಶ್ವರಂನ ರೆಸ್ಟೋರೆಂಟ್‌ನಲ್ಲಿ ರಿಷಬ್ ಅವರನ್ನು ಭೇಟಿಯಾದರು ಮತ್ತು ಭವಿಷ್ಯದ ಯೋಜನೆಯಲ್ಲಿ ಸಹಕರಿಸುವ ಬಗ್ಗೆ ಚರ್ಚಿಸಿದರು ಎಂದು ನಟ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com