ವಿವಾದಗಳ ಬಳಿಕ ಮತ್ತೆ ಟ್ರ್ಯಾಕ್‌ಗೆ ಮರಳಿದ ಮಡೇನೂರು ಮನು; ಎರಡು ಚಿತ್ರಗಳಲ್ಲಿ ಬ್ಯುಸಿ

ಹೊಸ ಯೋಜನೆಯ ಚಿತ್ರೀಕರಣ ಮುಂದಿನ ತಿಂಗಳು ಪ್ರಾರಂಭವಾಗುವ ನಿರೀಕ್ಷೆಯಿದ್ದು, ನಿರ್ದೇಶಕರು ಮತ್ತು ಪಾತ್ರವರ್ಗ ಶೀಘ್ರದಲ್ಲೇ ಬಹಿರಂಗಗೊಳ್ಳಲಿದೆ.
Muttharasa Poster Release Event
ಮುತ್ತರಸ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ
Updated on

ವೈಯಕ್ತಿಕ ಜೀವನದ ಸಮಸ್ಯೆ ಸೇರಿದಂತೆ ವಿವಾದಗಳ ಸುಳಿಯಲ್ಲಿ ಸಿಲುಕಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೇನೂರು ಮನು ಕೊನೆಗೂ ಟ್ರ್ಯಾಕ್‌ಗೆ ಮರಳಿದ್ದು, ತಮ್ಮ ಹುಟ್ಟುಹಬ್ಬದ ದಿನದಂದೇ ಎರಡು ಹೊಸ ಚಿತ್ರಗಳ ಘೋಷಣೆ ಮಾಡಿದ್ದಾರೆ. ಕೊನೆಯದಾಗಿ 'ಕುಲದಲ್ಲಿ ಕಿಲ್ಯಾವುದೋ' ಚಿತ್ರದಲ್ಲಿ ನಟಿಸಿದ್ದರು.

ಮನು ಅವರ ಮುಂದಿನ ಯೋಜನೆಯ ಶೀರ್ಷಿಕೆಯನ್ನು ಅನಾವರಣಗೊಳಿಸಿದ್ದು, 'ಮುತ್ತರಸ' ಎಂದು ಹೆಸರಿಡಲಾಗಿದೆ. ಮತ್ತೊಂದು ಚಿತ್ರದ 'ವಿಚಾರಣೆ'ಯ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಲಾಯಿತು.

ಮುತ್ತರಸ ಚಿತ್ರವನ್ನು ಜೆಕೆ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಕೆಎಂ ನಟರಾಜ್ ನಿರ್ಮಿಸುತ್ತಿದ್ದಾರೆ. ಸಮಾರಂಭದಲ್ಲಿ ಖ್ಯಾತ ನಟ ವಸಿಷ್ಠ ಸಿಂಹ, ಹಿರಿಯರಾದ ಎಂಎಸ್ ಉಮೇಶ್ ಮತ್ತು ಕರಿ ಸುಬ್ಬು, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಭಾಗವಹಿಸಿದ್ದರು. ಅವರೆಲ್ಲರೂ ಮನುಗೆ ಶುಭ ಹಾರೈಸಿದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ, 'ಪ್ರತಿಯೊಬ್ಬರೂ ಸಮಯವನ್ನು ಗೌರವಿಸಲು ಕಲಿಯಬೇಕು. ಎಲ್ಲರೊಳಗೆ ದೈವಿಕ ಉಪಸ್ಥಿತಿ ಇರುತ್ತದೆ ಎಂದ ಅವರು ಚಿತ್ರಕ್ಕೆ ಶುಭ ಕೋರಿದರು.

ವಿವಾದಗಳಿಂದ ದೂರವಿರುವಂತೆ ಸಲಹೆ ನೀಡಿದ ವಸಿಷ್ಠ ಸಿಂಹ, 'ನಾವು ವಿಮಾನ ಹತ್ತಿದಾಗ, ಅದು ನಮ್ಮದಾಗುವುದಿಲ್ಲ. ಯಾವುದೇ ಮಹತ್ವಾಕಾಂಕ್ಷೆಯನ್ನು ಬೆನ್ನಟ್ಟುವಾಗಲೂ ನಾವು ನೆಲದಲ್ಲಿಯೇ ಇರಬೇಕು ಎಂದು ಹೇಳಿದರು.

Muttharasa Poster Release Event
"ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು": ಶಿವಣ್ಣನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಡೆನೂರು ಮನು!

'ಕೆಲವು ದಿನಗಳ ಹಿಂದೆ, ನಾನು ಜೀವನದಲ್ಲಿ ತುಂಬಾ ಕಷ್ಟಕರವಾದ ಹಂತವನ್ನು ಎದುರಿಸಿದೆ. ಆದರೆ ಈಗ, ಆ ಅನುಭವಗಳನ್ನು ದಾಟಿ ಬಂದಿದ್ದೇನೆ. ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಇಂದು ಹೊಸ ಆರಂಭದಂತೆ ಭಾಸವಾಗುತ್ತಿದೆ. ಕುಲದಲ್ಲಿ ಕಿಳ್ಯಾವುದೋ ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕ ರಾಮ್ ನಾರಾಯಣ್ ನನಗೆ 'ಮುತ್ತರಸ' ಎಂಬ ಬಿರುದನ್ನು ಉಡುಗೊರೆಯಾಗಿ ನೀಡಿದ್ದರು ಎಂದರು.

ಹೊಸ ಯೋಜನೆಯ ಚಿತ್ರೀಕರಣ ಮುಂದಿನ ತಿಂಗಳು ಪ್ರಾರಂಭವಾಗುವ ನಿರೀಕ್ಷೆಯಿದ್ದು, ನಿರ್ದೇಶಕರು ಮತ್ತು ಪಾತ್ರವರ್ಗ ಶೀಘ್ರದಲ್ಲೇ ಬಹಿರಂಗಗೊಳ್ಳಲಿದೆ.

ನಿರ್ಮಾಪಕ ನಟರಾಜ್ ಮಾತನಾಡಿ, 'ಮನು ನಾನು ಈ ಹಿಂದೆ ನಿರ್ಮಿಸಿದ ಚಿತ್ರದಲ್ಲಿ ನಟಿಸಿದ್ದರು. ಮುತ್ತರಸ ನಮ್ಮ ಎರಡನೇ ಸಹಯೋಗವಾಗಿದೆ ಮತ್ತು ಇಂದು ಶೀರ್ಷಿಕೆಯನ್ನು ಅನಾವರಣಗೊಳಿಸಲು ಒಟ್ಟಾಗಿ ಬಂದ ಎಲ್ಲ ಗಣ್ಯರಿಗೆ ನಾನು ಕೃತಜ್ಞನಾಗಿದ್ದೇನೆ' ಎಂದರು.

ವಿಚಾರಣೆ ಚಿತ್ರವು ಈ ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ಗುರಿಯನ್ನು ಹೊಂದಿದೆ ಎಂದು ಮನು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com