ಬಿಡುಗಡೆಗೂ ಮುನ್ನವೇ ಕಾಂತಾರ: ಚಾಪ್ಟರ್ 1 ಮತ್ತೊಂದು ದಾಖಲೆ: ಮುಂಗಡ ಬುಕಿಂಗ್‌ಗೆ ವ್ಯಾಪಕ ಪ್ರತಿಕ್ರಿಯೆ

ಕರ್ನಾಟಕದಾದ್ಯಂತ 300ಕ್ಕೂ ಹೆಚ್ಚು ಪ್ರದರ್ಶನಗಳಿಗೆ ಬುಕಿಂಗ್‌ಗಳು ಸದ್ಯ ಲಭ್ಯವಿದ್ದು, ಮಲ್ಟಿಪ್ಲೆಕ್ಸ್‌ಗಳು ಮತ್ತು ಸಿಂಗಲ್-ಸ್ಕ್ರೀನ್ ಥಿಯೇಟರ್‌ಗಳಲ್ಲಿ ಸುಮಾರು ಶೇ 70 ರಷ್ಟು ಸೀಟುಗಳು ಈಗಾಗಲೇ ಭರ್ತಿಯಾಗಿವೆ.
Kantara: Chapter 1 Poster
ಕಾಂತಾರ ಚಾಪ್ಟರ್ 1 ಚಿತ್ರದ ಪೋಸ್ಟರ್
Updated on

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ ಕಾಂತಾರ: ಚಾಪ್ಟರ್ 1 ರ ಮುಂಗಡ ಟಿಕೆಟ್ ಮಾರಾಟ ಗುರುವಾರ ಪ್ರಾರಂಭವಾಗಿದ್ದು, ಆರಂಭಿಕ ಪ್ರತಿಕ್ರಿಯೆ ತುಂಬಾ ಸಕಾರಾತ್ಮಕವಾಗಿದೆ. ಕೇವಲ ಒಂದು ಗಂಟೆಯೊಳಗೆ, 10,000ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ.

ಕರ್ನಾಟಕದಾದ್ಯಂತ 300ಕ್ಕೂ ಹೆಚ್ಚು ಪ್ರದರ್ಶನಗಳಿಗೆ ಬುಕಿಂಗ್‌ಗಳು ಸದ್ಯ ಲಭ್ಯವಿದ್ದು, ಮಲ್ಟಿಪ್ಲೆಕ್ಸ್‌ಗಳು ಮತ್ತು ಸಿಂಗಲ್-ಸ್ಕ್ರೀನ್ ಥಿಯೇಟರ್‌ಗಳಲ್ಲಿ ಸುಮಾರು ಶೇ 70 ರಷ್ಟು ಸೀಟುಗಳು ಈಗಾಗಲೇ ಭರ್ತಿಯಾಗಿವೆ. ಬೇಡಿಕೆ ಪ್ರಬಲವಾಗಿದ್ದು, ಪ್ರತಿ ಗಂಟೆಗೆ ಸುಮಾರು 4,000 ಟಿಕೆಟ್‌ಗಳು ಮಾರಾಟವಾಗುತ್ತಿವೆ.

ರಾಜ್ಯದಾದ್ಯಂತ ಟಿಕೆಟ್ ಬೆಲೆಗಳು ಹೆಚ್ಚಾಗಿವೆ. ಸ್ಟ್ಯಾಂಡರ್ಡ್ ಮಲ್ಟಿಪ್ಲೆಕ್ಸ್ ಸೀಟುಗಳ ಬೆಲೆ ಈಗ 300 ರಿಂದ 400 ರೂ.ಗಳವರೆಗೆ ಇದೆ. ಆದರೆ, ಪ್ರೀಮಿಯಂ ಗೋಲ್ಡ್ ಕ್ಲಾಸ್ ಮತ್ತು ರೆಕ್ಲೈನರ್ ಬೆಲೆ 800 ರಿಂದ 1,000 ರೂ.ಗಳವರೆಗೆ ಇದೆ. ಸಾಮಾನ್ಯವಾಗಿ 150 ರಿಂದ 200 ರೂ.ಗಳವರೆಗಿನ ಟಿಕೆಟ್‌ಗಳ ಬೆಲೆಯನ್ನು ಹೊಂದಿರುವ ಸಿಂಗಲ್-ಸ್ಕ್ರೀನ್ ಥಿಯೇಟರ್‌ಗಳು ಬೆಳಗಿನ ಪ್ರದರ್ಶನಗಳಿಗೆ ತಮ್ಮ ದರವನ್ನು 500 ರೂ.ಗಳಿಗೆ ಹೆಚ್ಚಿಸಿವೆ. ಕರ್ನಾಟಕ ಹೈಕೋರ್ಟ್ 200 ರೂ. ಟಿಕೆಟ್ ಮಿತಿಯನ್ನು ತೆಗೆದುಹಾಕಿದ ನಂತರ ಈ ಹೆಚ್ಚಳವು ಚಿತ್ರಮಂದಿರಗಳಿಗೆ ಬೆಲೆಗಳನ್ನು ನಿಗದಿಪಡಿಸುವಲ್ಲಿ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಿದೆ.

ಕಾಂತಾರ: ಚಾಪ್ಟರ್ 1 ಅಕ್ಟೋಬರ್ 2 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಬೆಳಗಿನ ಪ್ರದರ್ಶನಗಳು ಬೆಳಿಗ್ಗೆ 6.30ಕ್ಕೆ ಪ್ರಾರಂಭವಾಗುತ್ತವೆ. ಅನೇಕ ಮಲ್ಟಿಪ್ಲೆಕ್ಸ್‌ಗಳು ತಮ್ಮ ಯೋಜಿತ 10 ಅಥವಾ ಹೆಚ್ಚಿನ ಪ್ರದರ್ಶನ ನೀಡಲು ಮುಂದಾಗಿದ್ದು, ಈಗಾಗಲೇ ಟಿಕೆಟ್‌ಗಳು ಮಾರಾಟವಾಗಿವೆ ಮತ್ತು ಬೇಡಿಕೆ ಹೆಚ್ಚಿರುವುದರಿಂದ ಚಿತ್ರಮಂದಿರಗಳು ಕೂಡ ಹೆಚ್ಚಿನ ಪ್ರದರ್ಶನಗಳನ್ನು ನೀಡಲು ಎದುರು ನೋಡುತ್ತಿವೆ.

Kantara: Chapter 1 Poster
ಬಿಡುಗಡೆಗೂ ಮುನ್ನವೇ ಕಾಂತಾರ: ಚಾಪ್ಟರ್ 1 ದಾಖಲೆ; 2,500ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಪೇಯ್ಡ್ ಪ್ರೀಮಿಯರ್!

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ, ಕಾಂತಾರ ಚಿತ್ರದ ಈ ಪ್ರೀಕ್ವೆಲ್ ಸಾಕಷ್ಟು ಆಸಕ್ತಿ ಹುಟ್ಟುಹಾಕಿದೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಸಂಚಲನ ಉಂಟುಮಾಡಿದೆ. ಗಲ್ಲಾಪೆಟ್ಟಿಗೆಯಲ್ಲಿಯೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

ನಟಿ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಜಯರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ರಿಷಬ್ ಶೆಟ್ಟಿ, ಶನೀಲ್ ಗೌತಮ್ ಮತ್ತು ಅನಿರುಷ್ ಮಹೇಶ್ ಸಹ ಬರಹಗಾರರಾಗಿದ್ದಾರೆ. ಈ ಚಿತ್ರಕ್ಕೆ ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಅವರ ಸಂಗೀತ, ಬಾಂಗ್ಲಾನ್ ಅವರ ನಿರ್ಮಾಣ ವಿನ್ಯಾಸ, ಪ್ರಗತಿ ಶೆಟ್ಟಿ ಅವರ ವೇಷಭೂಷಣ, ಸುರೇಶ್ ಮಲ್ಲಯ್ಯ ಅವರ ಸಂಕಲನ ಮತ್ತು ಅರ್ಜುನ್ ರಾಮು ಮತ್ತು ಟೋಡರ್ ಲಜರೋವ್ ಅವರ ಸಾಹಸ ನಿರ್ದೇಶನವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com