ಪ್ರೀತಿಯ ಬೆಲೆ ಗೊತ್ತಿಲ್ಲ?: ವಿಚ್ಛೇದನ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ ನಟಿ ನಿವೇದಿತಾ ಗೌಡ

ನಿವೇದಿತಾ ಗೌಡಗೆ ಪ್ರೀತಿಯ ಮಹತ್ವ ಗೊತ್ತಿಲ್ಲ. ಹೀಗಾಗಿ ವಿಚ್ಛೇದನಕ್ಕೆ ಇದೇ ಕಾರಣ ಎಂದು ಕಮೆಂಟ್ ಮಾಡಲಾಗಿತ್ತು. ಇದೀಗ ಮೊದಲ ಬಾರಿಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ವಿಚ್ಛೇದನದ ಬಗ್ಗೆ ನಿವೇದಿತಾ ಗೌಡ ಮಾತನಾಡಿದ್ದಾರೆ.
chandan shetty, niveditha gowda
ಚಂದನ್ ಶೆಟ್ಟಿ, ನಿವೇದಿತ ಗೌಡ
Updated on

ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ವಿಚ್ಛೇದನ ವಿಷಯ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಈ ಜೋಡಿ ಪ್ರೀತಿಸಿ ಬಳಿಕ 2020ರ ಫೆಬ್ರವರಿ 24ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಆದರೆ ಈ ದಾಂಪತ್ಯ ಹೆಚ್ಚು ದಿನ ಉಳಿಯಲಿಲ್ಲ. ಮದುವೆಯಾಗಿ ನಾಲ್ಕು ವರ್ಷಕ್ಕೆ ಅಂದರೆ 2024ರಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡಿದ್ದರು. ಆದರೆ ಈ ವಿಚ್ಛೇದನದ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕಮೆಂಟ್ ಗಳು ಬರುತ್ತಿದ್ದವು.

ನಿವೇದಿತಾ ಗೌಡಗೆ ಪ್ರೀತಿಯ ಮಹತ್ವ ಗೊತ್ತಿಲ್ಲ. ಹೀಗಾಗಿ ವಿಚ್ಛೇದನಕ್ಕೆ ಇದೇ ಕಾರಣ ಎಂದು ಕಮೆಂಟ್ ಮಾಡಲಾಗಿತ್ತು. ಇದೀಗ ಮೊದಲ ಬಾರಿಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ವಿಚ್ಛೇದನದ ಬಗ್ಗೆ ನಿವೇದಿತಾ ಗೌಡ ಮಾತನಾಡಿದ್ದಾರೆ. ವಿಚ್ಛೇದನ ಪಡೆಯಬೇಕು ಎಂದು ಯಾರೂ ಮದುವೆ ಆಗುವುದಿಲ್ಲ. ನಾವೂ ಸಹ ಚೆನ್ನಾಗಿ ಇರಬೇಕು ಅಂತಲೇ ಮದುವೆಯಾಗಿದ್ದೇವು. ಆದರೆ ನಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಆಗಲಿಲ್ಲ. ಡಿವೋರ್ಸ್ ಬಗ್ಗೆ ನಾನು ಮಾತನಾಡುವುದಿಲ್ಲ ಅದು ನಮ್ಮಿಬ್ಬರ ವೈಯಕ್ತಿಕ ವಿಷಯ. ಈ ಬಗ್ಗೆ ಬೇರೆಯವರೂ ಕಮೆಂಟ್ ಮಾಡುವುದು ಬೇಡ ಅಂತಲೇ ನಾವು ಸುದ್ದಿಗೋಷ್ಠಿ ಸಹ ನಡೆಸಿದ್ದೆವು ಎಂದು ನಿವೇದಿತಾ ಹೇಳಿದ್ದಾರೆ.

chandan shetty, niveditha gowda
Youtuber Influencer- ವಿಚ್ಛೇದಿತ ಖಾಲಿದ್ ಜೊತೆ ಮುರಿದು ಬಿತ್ತು ದಕ್ಷಿಣದ ನಟಿಯ ನಿಶ್ಚಿತಾರ್ಥ? Instaದಲ್ಲಿ ಪರಸ್ಪರ ಅನ್ ಫಾಲೋ!

ನಮ್ಮಿಬ್ಬರಿಗೂ ನಮ್ಮ ಖಾಸಗಿ ಜೀವನದ ಬಗ್ಗೆ ಪರಸ್ಪರ ಗೌರವ ಇದೆ. ಇದೇ ಕಾರಣಕ್ಕೆ ನಾವು ವಿಚ್ಛೇದನದ ಬಗ್ಗೆ ನಾವು ಮಾತನಾಡಿಲ್ಲ. ಅದು ಅನಗತ್ಯ ಸಹ, ನನ್ನ ಹತ್ತಿರದವರಿಗೆ ಗೊತ್ತಾದರೆ ಸಾಕು, ಎಲ್ಲರಿಗೂ ಗೊತ್ತಾಗುವ ಅಗತ್ಯ ಇಲ್ಲ. ಜನರು ಅವರಿಗೆ ಏನು ಬೇಕೋ ಅದನ್ನು ನಂಬುತ್ತಾರೆ. ಅದು ಅವರಿಗೆ ಬಿಟ್ಟಿದ್ದು, ಎಲ್ಲರನ್ನೂ ಕನ್ವಿನ್ಸ್ ಮಾಡೋಕೆ ಆಗಲ್ಲ’ ಎಂದು ನಿವೇದಿತಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com