ಪಾಕ್ ವಿರುದ್ಧ ಪಂದ್ಯ ಗೆದ್ದ ಟೀಂ ಇಂಡಿಯಾಗೆ ಸಚಿನ್ ವಿಶೇಷ ಸಂದೇಶ

ಇದೊಂದು ಅದ್ಭುತ ಗೆಲವು ಟೀಂ ಇಂಡಿಯಾ. ಈ ಇನ್ನಿಂಗ್ಸ್ ಮತ್ತು ಆ ನಮನಕ್ಕಾಗಿ ವಿರಾಟ್ ಕೊಹ್ಲಿಗೆ ಧನ್ಯವಾದಗಳು. ಪಂದ್ಯ ಮುಗಿದ....
ಈಡೆನ್ ಗಾರ್ಡೆನ್ಸ್ ನಲ್ಲಿ ಸಚಿನ್ ತೆಂಡೂಲ್ಕರ್
ಈಡೆನ್ ಗಾರ್ಡೆನ್ಸ್ ನಲ್ಲಿ ಸಚಿನ್ ತೆಂಡೂಲ್ಕರ್
ಮುಂಬೈ: ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಪರಾಭವಗೊಳಿಸಿದ ಟೀಂ ಇಂಡಿಯಾಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ವಿಶೇಷ ಸಂದೇಶ ನೀಡಿದ್ದಾರೆ.
ಶನಿವಾರ ಕೊಲ್ಕತ್ತಾದ ಈಡೆನ್ ಗಾರ್ಡೆನ್ಸ್ ನಲ್ಲಿ ಪಂದ್ಯ ವೀಕ್ಷಿಸಿದ ಸಚಿನ್ ತೆಂಡೂಲ್ಕರ್, ಭಾರತೀಯ ತಂಡಕ್ಕೆ ಹುರುಪು ತುಂಬುತ್ತಿದ್ದುದು ಕಂಡು ಬಂತು. ಸಚಿನ್ ಈಡೆನ್ ಮೈದಾನಕ್ಕೆ ಕಾಲಿಟ್ಟಾಗ ಅಭಿಮಾನಿಗಳು ಸಚಿನ್..ಸಚಿನ್...ಎಂದು ಕೂಗುತ್ತಾ ಸಚಿನ್‌ಗೆ ಸ್ವಾಗತ ಕೋರಿದ್ದರು.
ಪಂದ್ಯದುದ್ದಕ್ಕೂ ಭಾರತದ ತಂಡವನ್ನು ಪ್ರೋತ್ಸಾಹಿಸುತ್ತಾ ಬಂದ ಸಚಿನ್ ಭಾರತ ಪಾಕ್‌ನ್ನು ಪರಾಭವಗೊಳಿಸಿದ ನಂತರ ಫೇಸ್‌ಬುಕ್‌ನಲ್ಲಿ ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಿ ಸಂದೇಶ ಬರೆದಿದ್ದಾರೆ.
ಇದೊಂದು ಅದ್ಭುತ ಗೆಲವು ಟೀಂ ಇಂಡಿಯಾ. ಈ ಇನ್ನಿಂಗ್ಸ್ ಮತ್ತು ಆ ನಮನಕ್ಕಾಗಿ ವಿರಾಟ್ ಕೊಹ್ಲಿಗೆ ಧನ್ಯವಾದಗಳು. ಪಂದ್ಯ ಮುಗಿದ ನಂತರ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂಗೆ ಮರಳುವಾಗ ನನ್ನತ್ತ ಕೈ ಬೀಸಿದರು. ನಾನು ಅವರ ಟೀಂ ನಿಂದ ಹೊರೆಗೆ ಬಂದೇ ಇಲ್ಲ ಎಂಬ ಅನುಭವ ನನಗೆ... ಎಂದು ಸಚಿನ್ ಫೇಸ್ ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com