'ಸೆಲ್ಯೂಟ್ ಟು ಮನ್ದೀಪ್ ಸಿಂಗ್': ವೀರ ಯೋಧರಿಗಾಗಿ ದೀಪ ಹಚ್ಚಿ ಎಂದ ಸೆಹ್ವಾಗ್

ಉಗ್ರರ ಗುಂಡುಗೆ ಎದೆಗೊಟ್ಟು ವೀರ ಮರಣವನ್ನಪ್ಪಿದ್ದ ಯೋಧ ಮನ್ದೀಪ್ ಸಿಂಗ್ ಅವರಿಗೆ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರು ಭಾನುವಾರ ಗೌರವ...
'ಸೆಲ್ಯೂಟ್ ಟು ಮನ್ದೀಪ್ ಸಿಂಗ್': ವೀರ ಯೋಧರಿಗಾಗಿ ದೀಪ ಹಚ್ಚಿ ಎಂದ ಸೆಹ್ವಾಗ್
'ಸೆಲ್ಯೂಟ್ ಟು ಮನ್ದೀಪ್ ಸಿಂಗ್': ವೀರ ಯೋಧರಿಗಾಗಿ ದೀಪ ಹಚ್ಚಿ ಎಂದ ಸೆಹ್ವಾಗ್

ನವದೆಹಲಿ: ಉಗ್ರರ ಗುಂಡುಗೆ ಎದೆಗೊಟ್ಟು ವೀರ ಮರಣವನ್ನಪ್ಪಿದ್ದ ಯೋಧ ಮನ್ದೀಪ್ ಸಿಂಗ್ ಅವರಿಗೆ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರು ಭಾನುವಾರ ಗೌರವ ಸೂಚಿಸಿದ್ದಾರೆ.

ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ಮಾಡಿದ ಯೋಧ ಮನ್ದೀಪ್ ಸಿಂಗ್ ಅವರಿಗೆ ಶತಕೋಟಿ ನಮನಗಳು. ಯೋಧರಿಗಾಗಿ ಇಂದು ದೀಪವನ್ನು ಹಚ್ಚಿ. ಪ್ರಾಣದ ಹಂಗು ತೊರೆದು ದೇಶದ ಗಡಿ ಕಾಯುವ ನಿಸ್ವಾರ್ಥ ಯೋಧರಿಗಾಗಿ ದೀಪವನ್ನು ಹಚ್ಚುವ ಕೆಲಸವನ್ನಾದರೂ ನಾವು ಮಾಡಬಹುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com