ರಣಜಿ ಟೂರ್ನಿ: ಮುಂಬೈ ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ರಣಜಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಮುಂಬೈ ತಂಡವನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ...
ಕರ್ನಾಟಕ ಪರ ಬೌಲರ್ ಗೌತಮ್
ಕರ್ನಾಟಕ ಪರ ಬೌಲರ್ ಗೌತಮ್
ನಾಗ್ಪುರ: ರಣಜಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಮುಂಬೈ ತಂಡವನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. 
ಜಾಮ್ತಾನಗರ ವಿದರ್ಭ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ಇನ್ನಿಂಗ್ಸ್ ಮತ್ತು 20 ರನ್ ಗಳ ಜಯ ಸಾಧಿಸಿದೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. 
ಕರ್ನಾಟಕ ತಂಡಕ್ಕೆ ಗೆಲ್ಲಲು 7 ವಿಕೆಟ್ ಗಳನ್ನು ಪಡೆಯಬೇಕಿತ್ತು. ನಾಲ್ಕನೇ ದಿನವಾದ ಇಂದು ಮುಂಬೈ ತಂಡ ದಿನದಾಟದಂತ್ಯಕ್ಕೆ 377 ರನ್ ಗಳಿಗೆ ಆಲೌಟ್ ಆಗುವ ಮೂಲಕ ಕ್ವಾರ್ಟರ್ ಫೈನಲ್ ನಲ್ಲೇ ಸೋತು ಟೂರ್ನಿಯಿಂದ ಹೊರಬಂದಿದೆ. 
ಕರ್ನಾಟಕ ಪರ ಸ್ಪಿನ್ನರ್ ಕೆ ಗೌತಮ್ 6 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಮೊದಲ ಇನ್ನಿಂಗ್ಸ್ ನಲ್ಲಿ ನಾಯಕ ವಿನಯ್ ಕುಮಾರ್ 2 ಮತ್ತು ಅರವಿಂದ್ 1 ವಿಕೆಟ್ ಪಡೆದಿದ್ದರು. ವಿನಯ್ ಕುಮಾರ್ ಪಂದ್ಯದಲ್ಲಿ 79 ರನ್ ನೀಡಿ 8 ವಿಕೆಟ್ ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com