ಕೋಲ್ಕತ್ತಾ ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ ಮೊದಲು ಟೀಂ ಇಂಡಿಯಾ ಬ್ಯಾಟಿಂಗ್ ಮಾಡಿತು. ತಂಡ ಆರು ವಿಕೆಟ್ ಕಳೆದುಕೊಂಡಿದ್ದಾಗ ಮೈದಾನದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಭುವನೇಶ್ವರ್ ಬ್ಯಾಟಿಂಗ್ ಮಾಡುತ್ತಿದ್ದರು. 47ನೇ ಓವರ್ ನ ಕೋಲ್ಟರ್-ನೈಲ್ 4ನೇ ಎಸೆತವನ್ನು ಭುವನೇಶ್ವರ್ ಕುಮಾರ್ ಸ್ಟ್ರೈ ಹಿಟ್ ಮಾಡಿದರು. ಆಗ ನಾನ್ ಸ್ಟ್ರೈಕ್ ನಲ್ಲಿದ್ದ ಹಾರ್ದಿಕ್ ಪಾಂಡ್ಯಗೆ ಚೆಂಡು ತಗುಲಿ ಅಲ್ಲೇ ಕುಸಿದು ಬಿದ್ದರು.