ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿ ಈಗಾಗಲೇ ಭಾರತದ ಪಾಲಾಗಿದೆ. ಸರಣಿ ಕೈವಶ ಮಾಡಿಕೊಂಡಿರುವ ವಿರಾಟ್ ಕೊಹ್ಲಿ ಪಡೆಯ ಮುಂದಿನ ಟಾರ್ಗೆಟ್ ಸರಣಿ ಕ್ಲೀನ್ ಸ್ವೀಪ್ ಮಾಡುವುದು. ಆದರೆ ಉದ್ಯಾನನಗರಿಯ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತದ ಗೆಲುವಿನ ಓಟಕ್ಕೆ ತಡೆ ಬೀಳುವ ಭೀತಿ ಎದುರಾಗಿದೆ. ಇಂಥ ಸವಾಲು ಎದುರಾಗಿರುವುದು ಸ್ಟೀವನ್ ಸ್ಮಿತ್ ಪಡೆಯಿಂದ ಅಲ್ಲ, ಮಳೆರಾಯ ಇಂಥದ್ದೊಂದು ಸಾಧ್ಯತೆಯನ್ನು ಹರಡಿದ್ದಾನೆ.