ಇದೇ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿರಾಟ್ ಕೊಹ್ಲಿಯ ಸ್ವಾರ್ಥದಿಂದಾಗಿ ಚೇತೇಶ್ವರ ಪೂಜಾರ ಅವರು ರನ್ ಔಟ್ ಗೆ ಬಲಿಯಾದರು. ಇದು ಕೊಹ್ಲಿಯದ್ದೇ ತಪ್ಪು, ಪೂಜಾರ ತಂಡದಲ್ಲಿರುವುದು ಕೊಹ್ಲಿಗೆ ಇಷ್ಟವಿಲ್ಲ ಎಂದು ಟ್ವೀಟರಿಗರು ಕೊಹ್ಲಿಯನ್ನು ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಹಲವರು ಕೊಹ್ಲಿಯನ್ನು ಸಮರ್ಥಿಸಿಕೊಳ್ಳುತ್ತಿದ್ದು ಚೇತೇಶ್ವರ ಪೂಜಾರ ಬೇಡವಾಗಿದ್ದರೇ ಅವರಿಗೇಕೆ ತಂಡದಲ್ಲಿ ಆಡಲು ಸ್ಥಾನ ನೀಡುತ್ತಿದ್ದರು. ಕೊಹ್ಲಿ ಸ್ವಾರ್ಥಿಯಲ್ಲ. ಚೇತೇಶ್ವರ ಪೂಜಾರನೇ ರನ್ ತೆಗೆದುಕೊಳ್ಳಲು ಮುಂದಾಗಿದ್ದು ಕ್ರಿಸ್ ಮಧ್ಯಕ್ಕೆ ಬಂದು ಇಬ್ಬರು ಗೊಂದಲಕ್ಕೆ ಸಿಲುಕ್ಕಿದ್ದರಿಂದ ಪೂಜಾರ ರನ್ ಔಟ್ ಗೆ ಬಲಿಯಾಗಬೇಕಾಯಿತು ಎಂದು ಟ್ವೀಟಿಸುತ್ತಿದ್ದಾರೆ.