ಭಾರತೀಯ ಸ್ಪಿನ್ನರ್ ಗಳು ಅತ್ಯುತ್ತಮ ಲಯದಲ್ಲಿದ್ದು, ಅವರನ್ನು ಎದುರಿಸುವ ಸಲುವಾಗಿ ಹೊಸ ಮಾರ್ಗಗಳ ಶೋಧದಲ್ಲಿ ತಮ್ಮ ತಂಡ ತೊಡಗಿದೆ. ಪ್ರಮುಖವಾಗಿ ಭಾರತದ ಯಜುವೇಂದ್ರ ಚಾಹಲ್ ಮತ್ತು ಕಲುದೀಪ್ ಯಾದವ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಈ ಇಬ್ಬರು ಸ್ಪಿನ್ನರ್ ಗಳನ್ನು ಎದುರಿಸುವುದೇ ತಂಡದ ಮುಂದಿರುವ ದೊಡ್ಡ ಸವಾಲಾಗಿದೆ. ಈ ಇಬ್ಬರ ಬೌಲಿಂಗ್ ನಲ್ಲಿ ಸಿಂಗಲ್ ರನ್ ಕದಿಯುವುದು ಸವಾಲಾಗುತ್ತಿದ್ದು, ಇವರ ಗೂಗ್ಲಿ ಎಸೆತಗಳನ್ನು ಎದುರಿಸಲು ನಮ್ಮ ತಂಡದಿಂದ ಸಾಧ್ಯವಾಗುತ್ತಿಲ್ಲ. ಈ ಇಬ್ಬರೂ ಬೌಲಿಂಗ್ ಗೆ ಇಳಿಯುತ್ತಿದ್ದಂತೆಯೇ ನಮ್ಮ ಯೋಜನೆಗಳೆಲ್ಲಾ ತಲೆಕೆಳಗಾಗುತ್ತಿದೆ ಎಂದು ಡುಮಿನಿ ಹೇಳಿದ್ದಾರೆ.