ಈ ಪಂದ್ಯದಲ್ಲಿ ಭಾರತ ತಂಡದ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಿಥಾಲಿ ರಾಜ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೂ, ಅವರಿಗೆ ಸಿಕ್ಕ ನಗದು ಬಹುಮಾನ ಮಾತ್ರ ಎಲ್ಲ ಹುಬ್ಬೇರುವಂತೆ ಮಾಡಿದೆ. ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯಶ್ರೇಷ್ಠ ಆಟಗಾರರಿಗೆ ನಗದು ಬಹುಮಾನ ನೀಡಿ ಗೌರವಿಸುವುದು ವಾಡಿಕೆ. ಆದರೆ ನಿನ್ನೆ ಮಿಥಾಲಿ ರಾಜ್ ಗೆ ನೀಡಿದ ಬಹುಮಾನವನ್ನು ನೋಡಿದರೆ, ನಗದು ಬಹುಮಾನ ನೀಡದೇ ಕೇವಲ ಟ್ರೋಫಿ ನೀಡದರೆ ಸಾಕು.. ಎಂಬ ಭಾವನೆ ಮೂಡುತ್ತದೆ.