ಹೊಸ ಚೆಂಡಿನಲ್ಲಿ ಸ್ಪಿನ್ನರ್ ಗಳು ಬೌಲ್ ಮಾಡುವುದು ಅಷ್ಟು ಸುಲಭವಲ್ಲ. ಆದರೆ ಸುಂದರ್ ಅದನ್ನು ಯಶಸ್ವಿಯಾಗಿ ಮೆಟ್ಟು ನಿಂತರು. ಅವರ ಪ್ರದರ್ಶನಕ್ಕೆ ಹ್ಯಾಟ್ಸಾಫ್ ಹೇಳಲೇಬೇಕು. ಕಠಿಣ ಸಂದರ್ಭದಲ್ಲಿ ತಾನೇ ಮುಂದುಬಂದು ಬೌಲ್ ಮಾಡುವ ಧೈರ್ಯ ಸುಂದರ್ ಗಿದೆ. ಆ ಧೈರ್ಯವನ್ನು ಮೆಚ್ಚಿಯೇ ನಾನು ಆತನಿಗೆ ಚೆಂಡು ನೀಡಿದ್ದೆ, ಸುಂದರ್ ಗೆ ತನಗೇನು ಬೇಕು ಎಂಬುದರ ಕುರಿತು ಸ್ಪಷ್ಟತೆ ಇದೆ. ಇದೇ ಕಾರಣಕ್ಕೆ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ನಾನು ನೆಮ್ಮದಿಯಿಂದ ಉಸಿರಾಡಿದೆ.