ಬಾಂಗ್ಲಾ ವಿರುದ್ಧ ಗೆಲುವು; ವಾಷಿಂಗ್ಟನ್ ಸುಂದರ್ ಕೊಂಡಾಡಿದ ನಾಯಕ ರೋಹಿತ್ ಶರ್ಮಾ

ಭಾರತದ ಪಾಲಿಗೆ ಪ್ರಮುಖವಾಗಿದ್ದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಅಂತಿಮ ಹಂತದಲ್ಲಿ ವಿಕೆಟ್ ಉರುಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ವಾಷಿಂಗ್ಟನ್ ಸುಂದರ್ ಅವರನ್ನು ನಾಯಕ ರೋಹಿತ್ ಶರ್ಮಾ ಕೊಂಡಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಲಂಬೋ: ಭಾರತದ ಪಾಲಿಗೆ ಪ್ರಮುಖವಾಗಿದ್ದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಅಂತಿಮ ಹಂತದಲ್ಲಿ ವಿಕೆಟ್ ಉರುಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ವಾಷಿಂಗ್ಟನ್ ಸುಂದರ್ ಅವರನ್ನು ನಾಯಕ ರೋಹಿತ್ ಶರ್ಮಾ ಕೊಂಡಾಡಿದ್ದಾರೆ.
ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮಾ, ತಂಡದ ಸಹ ಆಟಗಾರ ಹಾಗೂ ಉದಯೋನ್ಮುಖ ಪ್ರತಿಭೆ ವಾಷಿಂಗ್ಟನ್ ಸುಂದರ್ ಅವರ ಪ್ರದರ್ಶನವನ್ನು ಕೊಂಡಾಡಿದರು. ನಿಜಕ್ಕೂ ಸುಂದರ್ ಅಂತಿಮ ಹಂತದಲ್ಲಿ ಮ್ಯಾಜಿಕ್ ಮಾಡಿದರು. ನಿರ್ಣಾಯಕ ಹಂತದಲ್ಲಿ ಬಾಂಗ್ಲಾ ತಂಡದ ಪ್ರಮುಖ ಆಟಗಾರರನ್ನು ಔಟ್ ಮಾಡುವ ಮೂಲಕ ತಂಡಕ್ಕ ಮೇಲುಗೈ ಒದಗಿಸಿದರು. 
ಹೊಸ ಚೆಂಡಿನಲ್ಲಿ ಸ್ಪಿನ್ನರ್ ಗಳು ಬೌಲ್ ಮಾಡುವುದು ಅಷ್ಟು ಸುಲಭವಲ್ಲ. ಆದರೆ ಸುಂದರ್ ಅದನ್ನು ಯಶಸ್ವಿಯಾಗಿ ಮೆಟ್ಟು ನಿಂತರು. ಅವರ ಪ್ರದರ್ಶನಕ್ಕೆ ಹ್ಯಾಟ್ಸಾಫ್ ಹೇಳಲೇಬೇಕು. ಕಠಿಣ ಸಂದರ್ಭದಲ್ಲಿ ತಾನೇ ಮುಂದುಬಂದು ಬೌಲ್ ಮಾಡುವ ಧೈರ್ಯ ಸುಂದರ್ ಗಿದೆ. ಆ ಧೈರ್ಯವನ್ನು ಮೆಚ್ಚಿಯೇ ನಾನು ಆತನಿಗೆ ಚೆಂಡು ನೀಡಿದ್ದೆ, ಸುಂದರ್ ಗೆ ತನಗೇನು ಬೇಕು ಎಂಬುದರ ಕುರಿತು ಸ್ಪಷ್ಟತೆ ಇದೆ. ಇದೇ ಕಾರಣಕ್ಕೆ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ನಾನು ನೆಮ್ಮದಿಯಿಂದ ಉಸಿರಾಡಿದೆ.
ಬೌಲರ್ ಗೆ ಯಾವ ರೀತಿಯ ಫೀಲ್ಡಿಂಗ್ ಬದಲಾವಣೆ ಬೇಕು ಎಂದು ತಿಳಿದರೆ ಆಗ ನಾಯಕನ ಅರ್ಧ ಕೆಲಸ ಕಡಿಮೆಯಾಗುತ್ತದೆ. ಆ ಗುಣ ಸುಂದರ್ ಬಳಿ ಇದೆ. ಶ್ರೀಲಂಕಾ ವಿರುದ್ಧವೂ ಸುಂದರ್ ಉತ್ತಮವಾಗಿ ಬೌಲಿಂಗ್ ಮಾಡಿದ್ದರು.  ಅಂತೆಯೇ ತಂಡದ ಇತರೆ ಬೌಲರ್ ಗಳೂ ಕೂಡ ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿದರು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com