ಇ-ಮೇಲ್ ವರದಿಯಲ್ಲಿ ಘಟನೆಯ ಸಂಪೂರ್ಣ ವಿವರ ನೀಡಿರುವ ಟಾಫಲ್, ಪಂದ್ಯದ ವೇಳೆ ವಾರ್ನರ್ ಉದ್ದೇಶ ಪೂರ್ವಕವಾಗಿಯೇ ಚೆಂಡನ್ನು ಪುಟಿದೇಳಿಸುತ್ತಿದ್ದರು. ವಿಕೆಟ್ ಕೀಪರ್ ನತ್ತ ಚೆಂಡು ಎಸೆಯುವಾಗ ನೇರವಾಗಿ ಆತನ ಕೈಗೆ ಎಸೆಯದೇ ಪಿಚ್ ಗೆ ಚೆಂಡು ಬಡಿದು ಪುಟಿದೇಳುವಂತೆ ಮಾಡುತ್ತಿದ್ದರು. ಇದು ನಿಜಕ್ಕೂ ಪ್ರಾಮಾಣಿಕ ಆಟವಾಗಿರಲಿಲ್ಲ. ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾಗೂ ಮಾಹಿತಿ ನೀಡಲಾಗಿತ್ತು. ಆದರೆ ಅಂದು ಸಿಎಂ ರಾಷ್ಟ್ರೀಯ ತಂಡದ ನಾಕ ಕೂಡ ಆಗಿದ್ದ ಸ್ನಿತ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಪಂದ್ಯದ ಬಳಿಕ ವಾರ್ನರ್ ಪಿಚ್ ಬಗ್ಗೆಯೇ ದೂರು ನೀಡಿದ್ದರು. ಪಿಚ್ ಗುಣಮಟ್ಟ ಸರಿ ಇಲ್ಲ ಎಂಬಿತ್ಯಾದಿ ಅಂಶಗಳನ್ನು ದೂರಿನಲ್ಲಿ ಉಲ್ಲೇಖಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.