ಟಿ20 ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಪರ ಆಡುತ್ತಿರುವ ಕೃನಾಲ್ ಪಾಂಡ್ಯೆ ತಂಡದ 12ನೇ ಓವರ್ ನಾಲ್ಕನೇ ಎಸೆತವನ್ನು ಬೌನ್ಸರ್ ಎಸೆದಿದ್ದು ವಿಕೆಟ್ ಹಿಂದೆ ಕೀಪಿಂಗ್ ಮಾಡುತ್ತಿದ್ದ ದಿನೇಶ್ ಕಾರ್ತಿಕ್ ಚೆಂಡನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಅಲ್ಲದೆ ಕೃನಾಲ್ ಎಸೆದ ಬೌನ್ಸರ್ ಕಂಡು ದಿನೇಶ್ ಕಾರ್ತಿಕ್ ಕೆಲ ಕಾಲ ಬೆಪ್ಪಾಗಿ ನಿಂತರು. ಇನ್ನು ನಾಯಕ ರೋಹಿತ್ ಶರ್ಮಾ ಸಹ ಕೃನಾಲ್ ಎಸೆತವನ್ನು ಕಂಡು ಬಾಯಿ ಮೇಲೆ ಕೈಯಿಟ್ಟುಕೊಂಡರು.