ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡದ ಆಟಗಾರ ಡುಪ್ಲೇಸಿಸ್ ಸಿಕ್ಸರ್ ಹೋಗುತ್ತಿದ್ದ ಚೆಂಡನ್ನು ಡೈವ್ ಮಾಡಿ ಹಿಡಿದರು. ಇನ್ನೇನು ತಾನು ಬೌಂಡರಿ ಗೆರೆಯನ್ನು ದಾಟುತ್ತೇನೆ ಎಂದು ಬಾವಿಸಿ ಕೂಡಲೇ ಚೆಂಡನ್ನು ಧ್ರುವ ಕೈಗೆಸೆದರು. ಈ ಮೂಲಕ ಸ್ಫೋಟಕ ಬ್ಯಾಟಿಂಗ್ ಮಾಡಲು ರೆಡಿಯಾಗಿದ್ದ ಸ್ಟೋಯ್ನಿಸ್ ಪೆವಿಲಿಯನ್ ಸೇರಿದರು.