ಚೆನ್ನೈ ವಿರುದ್ಧದ ಸತತ ಸೋಲು ಕಂಡಿರುವ ಆರ್ಸಿಬಿ ತಂಡ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋಲು ಮೊದಲು ಬ್ಯಾಟಿಂಗ್ ಮಾಡಿದ್ದು 161 ರನ್ ಪೇರಿಸಿತ್ತು. 162 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಚೆನ್ನೈಗೆ ಡೈಲ್ ಸ್ಟೈಲ್ ಆರಂಭಿಕ ಆಘಾತ ನೀಡಿದರು. ಚೆನ್ನೈ 28 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಎಂಎಸ್ ಧೋನಿ ಅದ್ಭುತ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನ ದಾರಿಗೆ ತಂದಿಟ್ಟಿದ್ದರು. ಕೊನೆಯ ಓವರ್ ನಲ್ಲಿ 4,6,6,2,6 ರನ್ ಬಾರಿಸಿದ್ದರು. ಈ ವೇಳೆ ಕೊನೆಯ ಎಸೆತದಲ್ಲಿ 2 ರನ್ ಬೇಕಿತ್ತು. ಈ ವೇಳೆ ಭರ್ಜರಿ ಹೊಡೆತಕ್ಕೆ ಧೋನಿ ಮುಂದಾದರು. ಅದು ಸಾಧ್ಯವಾಗದೆ ಚೆಂಡು ನೇರವಾಗಿ ಕೀಪರ್ ಪಾರ್ಥಿವ್ ಪಟೇಲ್ ಕೈಸೇರಿತು. ಈ ವೇಳೆ ಒಂದು ರನ್ ಓಡಲು ಮುಂದಾದ ವೇಳೆ ಪಾರ್ಥಿವ್ ಸ್ಟಂಪ್ ಹೊಡೆದು ರನೌಟ್ ಮಾಡಿದರು.