ಪಾಕಿಸ್ತಾನ ಮತ್ತು ಭಾರತ ನಡುವೆ ಉಂಟಾಗಿರುವ ಆತಂಕದ ವಾತಾವರಣವನ್ನ ಗಮನಿಸಿರುವ ವಾಸಿಂ ಅಕ್ರಂ ಟ್ವೀಟರ್ ನಲ್ಲಿ ನನ್ನ ಭಾರವಾದ ಹೃದಯದಿಂದ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಭಾರತ, ಪಾಕಿಸ್ತಾನ ಶತ್ರು ಅಲ್ಲ. ನಮ್ಮಬ್ಬರ ಶತ್ರು ಭಯೋತ್ಪಾದನೆ, ಇದನ್ನು ತಿಳಿದುಕೊಳ್ಳುವ ಮೊದಲು ಎಷ್ಟೋ ರಕ್ತವನ್ನು ಚೆಲ್ಲಿರುತ್ತೇವೆ. ಇದೇ ಯುದ್ಧವನ್ನು ನಾವಿಬ್ಬರು ಸೇರಿಕೊಂಡು ಭಯೋತ್ಪಾದನೆ ವಿರುದ್ಧ ಮಾಡೋಣ ಎಂದಿದ್ದಾರೆ.