ಕ್ರೀಡಾ ಸ್ಪೂರ್ತಿ ಮರೆತ ಚೇತೇಶ್ವರ ಪೂಜಾರ, ಜಂಟಲ್​ಮ್ಯಾನ್ ಗೇಮ್​ಗೆ ಅವಮಾನ!

ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ಬ್ಯಾಟ್ಸ್​ಮನ್ ಚೇತೇಶ್ವರ ಪೂಜಾರ ಕ್ರೀಡಾಸ್ಫೂರ್ತಿ ಹಾಗೂ ಮಾನವೀಯತೆ ಮರೆತು ಬ್ಯಾಟಿಂಗ್ ಮಾಡಿದ್ದಾರೆ.
ಚೇತೇಶ್ವರ ಪೂಜಾರ
ಚೇತೇಶ್ವರ ಪೂಜಾರ
Updated on
ಬೆಂಗಳೂರು: ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ಬ್ಯಾಟ್ಸ್​ಮನ್ ಚೇತೇಶ್ವರ ಪೂಜಾರ ಕ್ರೀಡಾಸ್ಫೂರ್ತಿ ಹಾಗೂ ಮಾನವೀಯತೆ ಮರೆತು ಬ್ಯಾಟಿಂಗ್ ಮಾಡಿದ್ದಾರೆ. 
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಪೂಜಾರ ಔಟಾಗಿದ್ದು ಗೊತ್ತಾಗಿದ್ದರೂ ಕ್ರೀಸ್​ನಲ್ಲೇ ನಿಂತಿದ್ದರು.  ಇನ್ನು ಎರಡನೇ ಇನ್ನಿಂಗ್ಸ್​ನಲ್ಲೂ ಸಹ ಪೂಜಾರ ಔಟಾಗಿದ್ದರು ಏನು ಆಗಲಿಲ್ಲವೆಂಬಂತೆ ನಿಂತಿದ್ದು ಜಂಟಲ್​ಮ್ಯಾನ್ ಗೇಮ್​ಗೆ ಮೋಸ ಮಾಡಿದ್ದಾರೆ. 
ಎರನಡೇ ಇನ್ನಿಂಗ್ಸ್​ನಲ್ಲಿ 34ರನ್ ಗಳಿಸಿದ್ದ ಪೂಜಾರ ವಿನಯ್ ಕುಮಾರ್ ಬೌಲಿಂಗ್​ನಲ್ಲಿ ವಿಕೆಟ್ ಕೀಪರ್ ಎಸ್. ಶರತ್​ಗೆ ಕ್ಯಾಚ್ ನೀಡಿದ್ದರು. ಬ್ಯಾಟ್​ಗೆ ಚೆಂಡು ತಾಗಿದ್ದು ಗೊತ್ತಿದ್ದರೂ ಪೂಜಾರ ಕ್ರೀಸ್​ನಲ್ಲೇ ನಿಂತುಕೊಂಡರು. ಇನ್ನೂ ಅಂಪೈರ್ ಕೂಡ ಔಟ್ ತೀರ್ಪು ನೀಡದೆ ಇರುವುದು ಪೂಜಾರ ಮೋಸಾದಾಟಕ್ಕೆ ಸಾಥ್ ಕೊಡುವಂತಿತ್ತು.. ಅಂಪೈರ್ ಔಟ್ ಕೊಡದಿದ್ದಕ್ಕೆ ಕೋಪಗೊಂಡ ವಿನಯ್ ವಾಗ್ವಾದವನ್ನು ನಡೆಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com