ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಆಯ್ಕೆ ಸಮಿತಿ ವಿರುದ್ಧ ಕೆಂಡ ಕಾರಿದ್ದು, ಇದು ಭಾರತೀಯ ಕ್ರಿಕೆಟ್ಗೆ ವಿಷಾದಕರ ಕ್ಷಣವಾಗಿದೆ ಎಂದು ಹೇಳಿದ್ದಾರೆ. ಐಪಿಎಲ್ ಮತ್ತು ರಾಷ್ಟ್ರಕ್ಕಾಗಿ ಅಷ್ಟು ಉತ್ತಮವಾಗಿ ಆಡಿದ ಅವರಂತಹ ಕ್ರಿಕೆಟಿಗರು 3 ಶತಕ 10 ಅರ್ಧಶತಕವನ್ನು ಗಳಿಸಿದ್ದಾರೆ, ಮತ್ತು ಅದರ ಹೊರತಾಗಿಯೂ ಒಬ್ಬ ಆಟಗಾರ ನಿವೃತ್ತಿ ಹೊಂದಬೇಕಾದರೆ - ಇದು ಭಾರತೀಯ ಕ್ರಿಕೆಟ್ಗೆ ವಿಷಾದಕರ ಕ್ಷಣವಾಗಿದೆ" ಎಂದು ಗಂಭೀರ್ ಹೇಳಿದ್ದಾರೆ.