ಭಾರತ-ಲಂಕಾ ಕದನ ವೇಳೆ ಆಗಸದಲ್ಲಿ ಭಾರತ ವಿರೋಧಿ ಹೇಳಿಕೆ ಬ್ಯಾನರ್, ಐಸಿಸಿಗೆ ಬಿಸಿಸಿಐ ಪತ್ರ!

ವಿಶ್ವಕಪ್ ಟೂರ್ನಿಯ ಟೀಂ ಇಂಡಿಯಾ-ಶ್ರೀಲಂಕಾ ನಡುವಿನ ಪಂದ್ಯದ ವೇಳೆ ಹೆಡಿಂಗ್ಲೆ ಕ್ರೀಡಾಂಗಣದ ಮೇಲೆ ವಿಮಾನವೊಂದು ಭಾರತ ವಿರೋಧಿ ಹೇಳಿಕೆಯುಳ್ಳ ಭಿತ್ತಿ ಪತ್ರವನ್ನು ಪ್ರದರ್ಶಿಸುತ್ತಾ ಹಾರಾಟ ನಡೆಸಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಲೀಡ್ಸ್: ವಿಶ್ವಕಪ್ ಟೂರ್ನಿಯ ಟೀಂ ಇಂಡಿಯಾ-ಶ್ರೀಲಂಕಾ ನಡುವಿನ ಪಂದ್ಯದ ವೇಳೆ ಹೆಡಿಂಗ್ಲೆ ಕ್ರೀಡಾಂಗಣದ ಮೇಲೆ ವಿಮಾನವೊಂದು ಭಾರತ ವಿರೋಧಿ ಹೇಳಿಕೆಯುಳ್ಳ ಭಿತ್ತಿ ಪತ್ರವನ್ನು ಪ್ರದರ್ಶಿಸುತ್ತಾ ಹಾರಾಟ ನಡೆಸಿತ್ತು. ಈ ಕುರಿತು ಆತಂಕ ವ್ಯಕ್ತಪಡಿಸಿದ ಬಿಸಿಸಿಐ ಐಸಿಸಿಗೆ ಪತ್ರ ಬರೆದಿದೆ.
ಲೀಡ್ಸ್ ನಲ್ಲಿ ಪಂದ್ಯ ಆರಂಭವಾದ ಕೆಲ ಕ್ಷಣದಲ್ಲೇ ಜಸ್ಟಿಸ್ ಫಾರ್ ಕಾಶ್ಮೀರ್ ಎಂಬ ಭಿತ್ತಪತ್ರದೊಂದಿಗೆ ವಿಮಾನ ಮೈದಾನದ ಮೇಲೆ ಹಾರಾಟ ನಡೆಸಿತ್ತು. ಇದಾಗಿ ಅರ್ಧ ಗಂಟೆಯಲ್ಲೇ ಇಂಡಿಯಾ ಸ್ಟಾಪ್ ಗೆನೆಸಿಡಿ, ಫ್ರೀ ಕಾಶ್ಮೀರ್ ಎಂಬ ಭಿತ್ತಪತ್ರದೊಂದಿಗೆ ಮತ್ತೊಂದು ವಿಮಾನ ಹಾರಾಟ ನಡೆಸಿತ್ತು. 
ಇಂತಹ ಘಟನೆಗಳು ಸ್ವೀಕಾರಾರ್ಹವಲ್ಲ. ಸೆಮಿಫೈನಲ್ ನಲ್ಲಿ ಈ ರೀತಿಯ ಘಟನೆ ಪುನರಾವರ್ತನೆಯಾದರೆ ಅದು ನಿಜಕ್ಕೂ ದುರದೃಷ್ಟಕರ. ನಮ್ಮ ಆಟಗಾರರ ಸುರಕ್ಷತೆ ಅತ್ಯುನ್ನತವಾಗಿದೆ ಎಂದು ಕಳವಳ ವ್ಯಕ್ತಪಡಿಸಿ ಬಿಸಿಸಿಐ ಐಸಿಸಿಗೆ ಪತ್ರ ಬರೆದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com