ನ್ಯೂಜಿಲೆಂಡ್ ಹಾಗೂ ಭಾರತ ನಡುವಣ ಪಂದ್ಯ ಟ್ರೆಂಟ್ ಬ್ರಿಡ್ಜ್ನಲ್ಲಿ ಮಳೆಯಿಂದ ರದ್ದಾದ ಬಳಿಕ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಸಚಿನ್ "ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರಿಗೆ ಇನ್ನುಳಿದವರು ಸಾಥ್ ನೀಡಬೇಕು. ಮೊಹಮ್ಮದ್ ಅಮೀರ್ ಅವರ ದಾಳಿಯನ್ನು ಋಣಾತ್ಮಕವಾಗಿ ಎದುರಿಸದೆ ತಮ್ಮ ಸ್ವಾಭಾವಿಕ ಬ್ಯಾಟಿಂಗ್ ಪ್ರದರ್ಶನ ತೋರಿ, ಧನಾತ್ಮಕವಾಗಿ ಬ್ಯಾಟಿಂಗ್ ಮಾಡಬೇಕು. ಅಲ್ಲದೇ, ಇತರೆ ತಂಡಗಳೊಂದಿಗೆ ಆಡುವ ರೀತಿ ಪಾಕ್ ವಿರುದ್ಧ ಆಡಬೇಕು. ಎಲ್ಲ ವಿಭಾಗಗಳಲ್ಲಿಯೂ ಆಕ್ರಮಣಕಾರಿ ಪ್ರದರ್ಶನ ತೋರುವ ಅಗತ್ಯವಿದೆ. ಭಾರತದ ಬೌಲರ್ ಗಳು ಆತ್ಮವಿಶ್ವಾಸದಿಂದ ಬೌಲಿಂಗ್ ಮಾಡಬೇಕು. ಅನಗತ್ಯ ಮಾತು ಅಥವಾ ಮಾತಿನ ಸಮರಗಳನ್ನು ನಿಯಂತ್ರಿಸಬೇಕು" ಎಂದು ಸಚಿನ್ ಬೌಲರ್ ಗಳಿಗೆ ಕಿವಿ ಮಾತು ಹೇಳಿದ್ದಾರೆ.