ಟೀಂ ಇಂಡಿಯಾಗೆ ಮತ್ತೊಂದು ಆಘಾತ; ಬ್ಯಾಟ್ಸ್ಮನ್, ಬೌಲರ್ ಬಳಿಕ ಇದೀಗ ಆಲ್ರೌಂಡರ್ಗೆ ಗಾಯ!
ವಿಶ್ವಕಪ್ ಟೂರ್ನಿಯಲ್ಲಿ ಸದ್ಯ ಟೀಂ ಇಂಡಿಯಾಗೆ ಮೇಲಿಂದ ಮೇಲೆ ಆಘಾತ ಎದುರಾಗುತ್ತಿದೆ. ಬ್ಯಾಟ್ಸ್ಮನ್ ಶಿಖರ್ ಧವನ್ ಮತ್ತು ಬೌಲರ್ ಭುವನೇಶ್ವರ್ ಬಳಿಕ ಇದೀಗ ಮತ್ತೋರ್ವ ಆಲ್ರೌಂಡರ್ ಗಾಯಗೊಂಡಿದ್ದಾರೆ.
Published: 20th June 2019 12:00 PM | Last Updated: 20th June 2019 06:21 AM | A+A A-

ಟೀಂ ಇಂಡಿಯಾ
Source : Online Desk
ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಸದ್ಯ ಟೀಂ ಇಂಡಿಯಾಗೆ ಮೇಲಿಂದ ಮೇಲೆ ಆಘಾತ ಎದುರಾಗುತ್ತಿದೆ. ಬ್ಯಾಟ್ಸ್ಮನ್ ಶಿಖರ್ ಧವನ್ ಮತ್ತು ಬೌಲರ್ ಭುವನೇಶ್ವರ್ ಬಳಿಕ ಇದೀಗ ಮತ್ತೋರ್ವ ಆಲ್ರೌಂಡರ್ ಗಾಯಗೊಂಡಿದ್ದಾರೆ.
ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ವೇಳೆ ಗಾಯ ಮಾಡಿಕೊಂಡಿದ್ದ ಶಿಖರ್ ಧವನ್ ಸಂಪೂರ್ಣ ಟೂರ್ನಿಯಿಂದ ಹೊರಬಿದ್ದಿದ್ದು ನಂತರ ಪಾಕಿಸ್ತಾನ ವಿರುದ್ಧ ಪಂದ್ಯದ ವೇಳೆ ವೇಗಿ ಭುವನೇಶ್ವರ್ ಕುಮಾರ್ ಸ್ನಾಯು ಸೆಳೆತಕ್ಕೆ ಗುರಿಯಾಗಿದ್ದಾರೆ. ಇದೀಗ ಅಭ್ಯಾಸದ ವೇಳೆ ವಿಜಯ್ ಶಂಕರ್ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ.
ನೆಟ್ಸ್ ನಲ್ಲಿ ಅಭ್ಯಾಸ ನಡೆಸುತ್ತದ್ದ ವೇಳೆ ಟೀಂ ಇಂಡಿಯಾ ವೇಗಿ ಜಸ್ ಪ್ರೀತ್ ಬುಮ್ರಾ ಎಸೆದ ಚೆಂಡು ವಿಜಯ್ ಶಂಕರ್ ಕಾಲಿನ ಹೆಬ್ಬೆರಳಿಗೆ ಬಡಿದು ಗಾಯವಾಗಿದೆ. ಇನ್ನು ಗಾಯ ಜಾಸ್ತಿಯಾಗಿಲ್ಲ ಎಂದು ತಂಡದ ಮೂಲಗಳು ಸ್ಪಷ್ಟಪಡಿಸಿರುವುದರಿಂದ ಸ್ವಲ್ಪ ಆತಂಕ ಕಡಿಮೆಯಾಗಿದೆ.
ಇದೇ ಶನಿವಾರ ಆಫ್ಗಾನಿಸ್ತಾನ ವಿರುದ್ಧ ಟೀಂ ಇಂಡಿಯಾ ಸೆಣೆಸಾಡಲಿದ್ದು ಈ ಪಂದ್ಯದಲ್ಲಿ ವಿಜಯ್ ಶಂಕರ್ ಆಡುತ್ತಾರಾ ಇಲ್ಲವೋ ಕಾದು ನೋಡಬೇಕಿದೆ.
Stay up to date on all the latest ಕ್ರಿಕೆಟ್ news