ಯಶಸ್ವಿ ಟಿ20 ಬ್ಯಾಟಿಂಗ್ ತರಬೇತುದಾರನಾಗಲು ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವ ಬೇಕಿಲ್ಲ: ಗಂಭೀರ್

ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವ ಯಶಸ್ವಿ ಟಿ20 ಬ್ಯಾಟಿಂಗ್ ತರಬೇತುದಾರನಾಗಲು ಅನಿವಾರ್ಯವಲ್ಲ ಎಂದು ಮಾಜಿ ಟೀಂ ಇಂಡಿಯಾ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಗೌತಮ್ ಗಂಭೀರ್
ಗೌತಮ್ ಗಂಭೀರ್
Updated on

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವ ಯಶಸ್ವಿ ಟಿ20 ಬ್ಯಾಟಿಂಗ್ ತರಬೇತುದಾರನಾಗಲು ಅನಿವಾರ್ಯವಲ್ಲ ಎಂದು ಮಾಜಿ ಟೀಂ ಇಂಡಿಯಾ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಆಟಗಾರರಲ್ಲಿ ಸಕಾರಾತ್ಮಕ ಮನೋಭಾವವನ್ನು ಬೆಳೆಸಲು ಸಹಾಯ ಮಾಡುವುದು ಕೋಚ್ ಗಳ ಕೆಲಸವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದರಷ್ಟೆ ಅಥವಾ ಸಾಕಷ್ಟು ಕ್ರಿಕೆಟ್ ಆಡದ ಯಾರಾದರೂ ಯಶಸ್ವಿ ತರಬೇತುದಾರರಾಗಲು ಸಾಧ್ಯವಿಲ್ಲ ಎಂಬುದು ನಿಜವಲ್ಲ ಎಂದು ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಗಂಭೀರ್ ಹೇಳಿದ್ದಾರೆ.

ಅಂತಿಮವಾಗಿ ತರಬೇತುದಾರನು ಟಿ20 ಸ್ವರೂಪದಲ್ಲಿ ಏನು ಮಾಡುತ್ತಾನೆಂದರೆ ಅದು ನಿಮ್ಮ ಮನಸ್ಥಿತಿಯನ್ನು ಮುಕ್ತಗೊಳಿಸುತ್ತದೆ ಮತ್ತು ನಿಮ್ಮ ಮನಸ್ಥಿತಿಯನ್ನು ಪೋಷಿಸುತ್ತದೆ ಮತ್ತು ದೊಡ್ಡ ಹೊಡೆತಗಳನ್ನು ಹೊಡೆಯುವಂತೆ ಮಾಡುತ್ತದೆ ಎಂದು ಅವರು ಹೇಳಿದರು.

ಟ 20 ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ತರಬೇತುದಾರನ ಕೆಲಸವೆಂದರೆ ಹೊಡೆತಗಳನ್ನು ಹೇಗೆ ಹೊಡೆಯಬೇಕು ಎಂದು ಕಲಿಸುವುದಲ್ಲ ಎಂದು ವಿಶ್ವಕಪ್ ವಿಜೇತ ಆರಂಭಿಕ ಆಟಗಾರ ಹೇಳಿದ್ದಾರೆ.

"ಲ್ಯಾಪ್ ಶಾಟ್ ಅಥವಾ ರಿವರ್ಸ್ ಲ್ಯಾಪ್ ಶಾಟ್ ಅನ್ನು ಹೇಗೆ ಹೊಡೆಯಬೇಕು ಎಂದು ಯಾರೂ ನಿಮಗೆ ಕಲಿಸುವುದಿಲ್ಲ, ಯಾವುದೇ ತರಬೇತುದಾರನು ಅದನ್ನು ಕಲಿಸಲು ಸಾಧ್ಯವಿಲ್ಲ. ಯಾರಾದರೂ ಅದನ್ನು ಆಟಗಾರನಿಗೆ ಕಲಿಸಲು ಪ್ರಯತ್ನಿಸುತ್ತಿದ್ದರೆ, ಅಂತಹ ಕೋಚ್ ಅವನನ್ನು ಉತ್ತಮ ಆಟಗಾರನನ್ನಾಗಿ ಮಾಡುವುದಕ್ಕಿಂತ ಹೆಚ್ಚಾಗಿ ಅವನಿಗೆ ಹಾನಿ ಮಾಡುತ್ತಿದ್ದಾನೆ ಎಂದರ್ಥ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com