ನವದೆಹಲಿ: ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಮತ್ತು ಹಾಲಿ ನಾಯಕ ವಿರಾಟ್ ಕೊಹ್ಲಿ ಆಕ್ರಮಣಕಾರಿ ಆಟ ಹೋಲುತ್ತದೆ ಎಂದು ಮಾಜಿ ಕ್ರಿಕೆಟ್ ಮತ್ತು ಭಾರತದ ಕ್ರಿಕೆಟ್ ತಂಡದ ಮುಖ್ಯ ಆಯ್ಕೆ ಸಮಿತಿ ಮುಖ್ಯಸ್ಥ ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದ್ದಾರೆ.
1983 ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಶ್ರೀಕಾಂತ್, ಸ್ಟಾರ್ ಸ್ಪೋರ್ಟ್ಸ್ -1 ತಮಿಳು ಕಾರ್ಯಕ್ರಮವಾದಲ್ಲಿ "ವಿರಾಟ್ ಕೊಹ್ಲಿ ಮತ್ತು ಕಪಿಲ್ ದೇವ್ ಇಬ್ಬರೂ ಒಂದೇ ರೀತಿಯ ದೃಷ್ಟಿಕೋನದ ಹೊಂದಿದವರು. ಇಬ್ಬರೂ ಉತ್ತಮ ಪ್ರದರ್ಶನ ನೀಡಿ ಗೆಲುವಿನ ಬಾವುಟ ಹಾರಿಸುವುದೇ ಇಬ್ಬರ ಗುರಿಯಾಗಿದೆ ಎಂದಿದ್ದಾರೆ.
Advertisement