ನವದೆಹಲಿ: ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಭಾರತ ಕ್ರಿಕೆಟ್ ತಂಡದ ನಾಯಕತ್ವ ಕುರಿತಾಗಿ ಸಮಿತಿಯಲ್ಲಿ ನಡೆದ ಮಾತುಕತೆಯ ವಿವರಗಳನ್ನು ಬಹಿರಂಗ ಪಡಿಸಲು ನಿರಾಕರಿಸಿದ್ದಾರೆ.
ಇತ್ತೀಚಿಗಷ್ಟೆ ವಿರಾಟ್ ಕೊಹ್ಲಿಯವರನ್ನು ಭಾರತ ಕ್ರಿಕೆಟ್ ತಂಡದ ನಾಯಕತ್ವ ಸ್ಥಾನದಿಂದ ಇಳಿಸಿ ರೋಹಿತ್ ಶರ್ಮಾ ಅವರಿಗೆ ನಾಯಕತ್ವ ಜವಾಬ್ದಾರಿಯನ್ನು ನೀಡಲಾಗಿತ್ತು. ಈ ಬಗ್ಗೆ ವಿವಾದ ಎದ್ದಿತ್ತು. ಆಯ್ಕೆದಾರರು ಹಾಗೂ ಇತರೆ ಮುಖ್ಯಸ್ಥರೊಡನೆ ಸಭೆ ವೇಳೆ ನಡೆದ ಮಾತುಕತೆ ಕುರಿತು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದ್ದರು.
ವಿರಾಟ್ ಕೊಹ್ಲಿ ಈ ಟಿ20 ನಾಯಕತ್ವ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದ್ದರು. ನಂತದದ ಬೆಳವಣಿಗೆಯಲ್ಲಿ ಏಕದಿನ ಫಾರ್ಮಾಟ್ ಪಂದ್ಯಗಳ ನಾಯಕತ್ವ ಸ್ಥಾನವನ್ನು ರೋಹಿತ್ ಶರ್ಮಾ ಅವರಿಗೆ ವಹಿಸಲಾಗಿತ್ತು.
Advertisement