ಕೇವಲ ರನ್ ಗಳಿಸಿದ ಮಾತ್ರಕ್ಕೆ ಕಮ್ ಬ್ಯಾಕ್ ಸಾಧ್ಯವಿಲ್ಲ, ಬೊಜ್ಜು ಕರಗಿಸಿ: ಪಂತ್ ಗೆ ಬಿಸಿಸಿಐ ಎಚ್ಚರಿಕೆ?

ರಿಷಬ್ ಪಂತ್ ಸೀಮಿತ ಓವರ್ ಗಳ ವೃತ್ತಿಜೀವನ ಈಗ ಅಪಾಯದಲ್ಲಿದೆ. ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಆಯ್ಕೆಯಾಗದ ಪಂತ್ ಅವರನ್ನು ಸದ್ಯಕ್ಕೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಹೋಗುವಂತೆ ಸೂಚಿಸಲಾಗಿದೆ.
ರಿಷಬ್ ಪಂತ್
ರಿಷಬ್ ಪಂತ್

ನವದೆಹಲಿ: ರಿಷಬ್ ಪಂತ್ ಸೀಮಿತ ಓವರ್ ಗಳ ವೃತ್ತಿಜೀವನ ಈಗ ಅಪಾಯದಲ್ಲಿದೆ. ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಆಯ್ಕೆಯಾಗದ ಪಂತ್ ಅವರನ್ನು ಸದ್ಯಕ್ಕೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಹೋಗುವಂತೆ ಸೂಚಿಸಲಾಗಿದೆ. 

ಪ್ರಸ್ತುತ ರಿಷಬ್ ಪಂತ್ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಬೇಕಿದೆ. ಈ ಕಾರಣಕ್ಕಾಗಿ ಅವರನ್ನು ವೈಟ್ ಬಾಲ್ ಸರಣಿಗೆ ತಂಡದಲ್ಲಿ ಆಯ್ಕೆ ಮಾಡಲಾಗಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಈಗ ಪಂತ್ ಮರಳುವುದು ಅಷ್ಟು ಸುಲಭವಲ್ಲ ಎಂದು ವರದಿಯಾಗುತ್ತಿದೆ. ಪಂತ್ ಕೇವಲ ಫಾರ್ಮ್ ನಿಂದಾಗಿ ಕೈಬಿಟ್ಟಿಲ್ಲ. ಅವರ ಫಿಟ್ನೆಸ್ ಕೂಡ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ರಿಷಬ್ ಪಂತ್ ಫಾರ್ಮ್‌ಗೆ ಮರಳಿದರೆ ಸಾಲದು. ತಮ್ಮ ಫಿಟ್‌ನೆಸ್‌ನಲ್ಲಿ ಕೆಲಸ ಮಾಡಬೇಕಾಗುತ್ತದೆ. ಪಂತ್ ಒಬ್ಬ ಶ್ರೇಷ್ಠ ಆಟಗಾರ ಆದರೆ ಈ ವರ್ಷ ಅವರ ODI ಮತ್ತು T20 ಫಾರ್ಮ್ ಕಳಪೆಯಾಗಿದೆ. ಕೋಚಿಂಗ್ ಸಿಬ್ಬಂದಿ ಅವರು ಹೆಚ್ಚು ಫಿಟ್ ಮತ್ತು ಚುರುಕುಬುದ್ಧಿಯಾಗಿರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿಯೇ ಅವರನ್ನು ಎನ್‌ಸಿಎಯಲ್ಲಿ ತರಬೇತಿಗೆ ಕೇಳಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. 

ಪಂತ್ ಗೆ ಮೊಣಕಾಲು ಮತ್ತು ಬೆನ್ನಿನ ಸಮಸ್ಯೆ ಇದೆ
ರಿಷಬ್ ಪಂತ್ ಅವರ ಮೊಣಕಾಲು ಮತ್ತು ಬೆನ್ನಿನಲ್ಲಿ ನೋವಿದೆ. ಪಂತ್ ತನ್ನನ್ನು ಫಾರ್ಮ್ ಜೊತೆಗೆ ಸಂಪೂರ್ಣವಾಗಿ ಫಿಟ್ ಆಗಿರಿಸಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಪಂತ್ ತಮ್ಮ ಫಾರ್ಮ್ ಮತ್ತು ಫಿಟ್ನೆಸ್ ಎರಡೂ ಸರಿಯಾಗುವವರೆಗೂ ಕಮ್ ಬ್ಯಾಕ್ ಅಸಾಧ್ಯ ಎಂದು ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಅದೇ ರೀತಿ ಟಿ20ಯಲ್ಲಿ ಸ್ಥಾನ ಕಳೆದುಕೊಂಡಿದ್ದು, ಇದೀಗ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ತಂಡದ ಮೊದಲ ಆಯ್ಕೆಯಾಗಿದ್ದಾರೆ. ಇತ್ತೀಚೆಗಷ್ಟೇ ಇಶಾನ್ ಕಿಶನ್ ಏಕದಿನದಲ್ಲಿ ದ್ವಿಶತಕ ಬಾರಿಸುವ ಮೂಲಕ ರೇಸ್‌ನಲ್ಲಿ ಮುಂದಿದ್ದಾರೆ ಮತ್ತು ಅವರ ಫಿಟ್ನೆಸ್ ಕೂಡ ಅತ್ಯುತ್ತಮವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com