ಐಪಿಎಲ್ 2024ನೇ ಆವೃತ್ತಿಯಲ್ಲಿ ಅಸಾಧಾರಣ ಫಾರ್ಮ್ನಲ್ಲಿರುವ ಅನುಭವಿ ವಿಕೆಟ್ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್, ಭಾರತಕ್ಕಾಗಿ ಮತ್ತೊಮ್ಮೆ ಆಡುವ ತಮ್ಮ ಕನಸನ್ನು ಹಸಿರಾಗಿಟ್ಟುಕೊಂಡಿದ್ದಾರೆ. ಯುಎಸ್ಎ ಮತ್ತು ವೆಸ್ಟ್ ಇಂಡೀಸ್ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಅಗತ್ಯವಿರುವ ಎಲ್ಲವನ್ನು ಅವರು ಮಾಡುತ್ತಿದ್ದಾರೆ. ಜೂನ್ 1 ರಂದು ವಿಶ್ವಕಪ್ ಕಿಕ್ಸ್ಟಾರ್ಟ್ ಆಗುವ ವೇಳೆಗೆ 39 ವರ್ಷಕ್ಕೆ ಕಾಲಿಡಲಿರುವ ಕಾರ್ತಿಕ್, 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ T20I ವಿಶ್ವಕಪ್ನಲ್ಲಿ ಭಾಗವಾಗಿದ್ದರು. ಇದು ಟೀಮ್ ಇಂಡಿಯಾಗೆ ಅವರು ಆಡಿದ್ದ ಕೊನೆಯ ಆವೃತ್ತಿಯಾಗಿತ್ತು.
ಅಂದಿನಿಂದ ಅವರು ಮೈದಾನದ ಹೊರಗಿನ ಕ್ರಿಕೆಟ್ನಲ್ಲಿ ಪರಿಣತರಾದರು, ಕಾಮೆಂಟರಿ ಮಾಡುವಲ್ಲಿ ತೊಡಗಿಸಿಕೊಂಡಿದ್ದರು.
ಈ ಆವೃತ್ತಿಯಲ್ಲಿ ಐಪಿಎಲ್ನಲ್ಲಿ ಆಡುತ್ತಿರುವ ಅವರು, ತಮ್ಮ ಬ್ಯಾಟಿಂಗ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ವಿರಾಟ್ ಕೊಹ್ಲಿ (361) ಮತ್ತು ನಾಯಕ ಫಾಫ್ ಡು ಪ್ಲೆಸಿಸ್ (232) ನಂತರ ಅವರು 226 ರನ್ಗಳೊಂದಿಗೆ ಆರ್ಸಿಬಿಗೆ ಮೂರನೇ ಪ್ರಮುಖ ರನ್ ಗಳಿಸಿದ ಆಟಗಾರರಾಗಿದ್ದಾರೆ.
'ನನ್ನ ಜೀವನದ ಈ ಹಂತದಲ್ಲಿ, ಭಾರತವನ್ನು ಪ್ರತಿನಿಧಿಸುವುದು ನನಗೆ ದೊಡ್ಡ ಕನಸಾಗಿದೆ. ತಂಡಕ್ಕಾಗಿ ಆಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಈ ಟಿ20 ವಿಶ್ವಕಪ್ನಲ್ಲಿ ಭಾರತವನ್ನು ಪ್ರತಿನಿಧಿಸುವುದಕ್ಕಿಂತ ದೊಡ್ಡದು ನನ್ನ ಜೀವನದಲ್ಲಿ ಏನೂ ಇಲ್ಲ' ಎಂದು ಆರ್ಸಿಬಿ ವಿಕೆಟ್ಕೀಪರ್-ಬ್ಯಾಟರ್ ಹೇಳಿದ್ದಾರೆ.
ದಿನೇಶ್ ಕಾರ್ತಿಕ್ ಇದೀಗ ಅತ್ಯುತ್ತಮ ಸ್ಪರ್ಧಿಯಾಗಿ ಹೊರಹೊಮ್ಮುವುದರೊಂದಿಗೆ, ವಿಕೆಟ್ ಕೀಪರ್ ಸ್ಥಾನಕ್ಕೆ ತೀವ್ರ ಸ್ಪರ್ಧೆ ಎದುರಾಗಿದೆ. ಟೀಮ್ ಇಂಡಿಯಾ ಥಿಂಕ್ ಟ್ಯಾಂಕ್ ಹೆಚ್ಚೆಂದರೆ ಇಬ್ಬರು ವಿಕೆಟ್ ಕೀಪರ್ಗಳನ್ನು ಆಯ್ಕೆ ಮಾಡಬಹುದಾಗಿದೆ.
ಮಾರಣಾಂತಿಕ ಅಪಘಾತದಿಂದ ಹಿಂತಿರುಗಿರುವ ರಿಷಬ್ ಪಂತ್ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದು, ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಇವರೊಂದಿಗೆ ಸಂಜು ಸ್ಯಾಮ್ಸನ್ (ರಾಜಸ್ಥಾನ್ ರಾಯಲ್ಸ್), ಇಶಾನ್ ಕಿಶನ್ (ಮುಂಬೈ ಇಂಡಿಯನ್ಸ್), ಕೆಎಲ್ ರಾಹುಲ್ (ಲಕ್ನೋ ಸೂಪರ್ ಜೈಂಟ್ಸ್) ಕೂಡ ಕಣದಲ್ಲಿದ್ದಾರೆ.
ವಿಶ್ವಕಪ್ಗೆ ಅತ್ಯುತ್ತಮ ಭಾರತೀಯ ತಂಡ ಯಾವುದು ಎಂದು ನಿರ್ಧರಿಸಲು ಮೂರು ಅತ್ಯಂತ ಸ್ಥಿರ, ಪ್ರಾಮಾಣಿಕ ವ್ಯಕ್ತಿಗಳು ಇದ್ದಾರೆ ಎಂದು ನಾನು ಭಾವಿಸುತ್ತೇನೆ. ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಮತ್ತು ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಏನು ನಿರ್ಧರಿಸಿದರೂ ಅದನ್ನು ಗೌರವಿಸುವುದಾಗಿ ಕಾರ್ತಿಕ್ ಹೇಳಿದ್ದಾರೆ.
ನಾನು ಸಂಪೂರ್ಣವಾಗಿ ಅವರೊಂದಿಗೆ ಇದ್ದೇನೆ. ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಆದರೆ, ನಾನು ಹೇಳುವುದೊಂದೇ ನಾನು ಶೇ 100ಕ್ಕೆ ನೂರರಷ್ಟು ಸಿದ್ಧನಿದ್ದೇನೆ ಮತ್ತು ವಿಶ್ವಕಪ್ ತಂಡದಲ್ಲಿ ಇರಲು ಅಗತ್ಯವಿರುವ ಎಲ್ಲವನ್ನೂ ನಾನು ಮಾಡುತ್ತೇನೆ ಎನ್ನುತ್ತಾರೆ.
'ನಾನು ರಸೆಲ್ ಅಥವಾ ಪೊಲಾರ್ಡ್ ಅಲ್ಲ'
ಕಾರ್ತಿಕ್ ಅವರು ಆಂಡ್ರೆ ರಸೆಲ್ ಅಥವಾ ಕೀರಾನ್ ಪೊಲಾರ್ಡ್ ಅವರಂತೆ ಪವರ್-ಹಿಟ್ ಮಾಡುವ ಬದಲು ನಿಖರತೆಯ ಮೇಲೆ ಕೇಂದ್ರೀಕರಿಸುವ ಮೂಲಕ ಆಟಗಾರನಾಗಿ ತಮ್ಮ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.
ತಾವು ಯಾವ ರೀತಿಯಲ್ಲಿ ಹಿಟ್ ಮಾಡಬೇಕು ಎಂಬುದನ್ನು ನಿರ್ಧರಿಸಲು ಬೌಲರ್ಗಳ ಮಾದರಿಗಳನ್ನು ವಿಶ್ಲೇಷಿಸುತ್ತಾರೆ. ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲು ಅಭ್ಯಾಸದ ಸಮಯದಲ್ಲಿ ಆ ಸನ್ನಿವೇಶಗಳನ್ನು ದೃಶ್ಯೀಕರಿಸುವುದಾಗಿ ಹೇಳುತ್ತಾರೆ. ಈ ದಿನಗಳಲ್ಲಿ ಆಟಗಾರನಾಗಿ, ನಿಮ್ಮ ಸಾಮರ್ಥ್ಯಗಳನ್ನು ನೀವು ಅರ್ಥಮಾಡಿಕೊಳ್ಳಬೇಕು. ಕೇವಲ ಚೆಂಡನ್ನು ಹೊಡೆದು ಅದಕ್ಕೆ ಸಿಕ್ಸರ್ ಗಳಿಸುವ ರಸೆಲ್ ಅಥವಾ ಪೊಲಾರ್ಡ್ ನಾನಲ್ಲ ಎಂದು ಕಾರ್ತಿಕ್ ಹೇಳಿದರು.
ಆದ್ದರಿಂದ, ಯಾವ ರೀತಿಯ ಎಸೆತಗಳನ್ನು ನಾನು ಬೌಂಡರಿಗೆ ಅಟ್ಟಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಬೌಲರ್ಗಳು ನನಗೆ ಬೌಲಿಂಗ್ ಮಾಡುವ ಒಂದು ನಿರ್ದಿಷ್ಟ ಮಾದರಿಯಿದೆ ಎಂಬುದನ್ನು ನಾನು ಅರಿತುಕೊಂಡೆ, ಆದ್ದರಿಂದ ನಾನು ಪರಿಹಾರವನ್ನು ಕಂಡುಕೊಳ್ಳಲು ಕೆಲಸ ಮಾಡಬೇಕಾಗಿದೆ. ಹೀಗಾಗಿ, ನಾನು ಅಭ್ಯಾಸ ಮಾಡುವಾಗ, ನಾನು ಅದನ್ನು ಪ್ರಯತ್ನಿಸುತ್ತೇನೆ ಮತ್ತು ಅರ್ಥಮಾಡಿಕೊಳ್ಳುತ್ತೇನೆ ಎನ್ನುತ್ತಾರೆ.
ನಾನು ಅದರಂತೆ ಕೆಲಸ ಮಾಡುತ್ತಿದ್ದೇನೆ ಮತ್ತು ಅದು ನನಗೆ ಸಹಾಯ ಮಾಡಿತು. ವಿಕೆಟ್ ಹಿಂಭಾಗದಲ್ಲಿ ಶಾಟ್ಗಳನ್ನು ಹೊಡೆಯುವುದನ್ನು ಕಲಿಯಲು ಮತ್ತು ರನ್ ಗಳಿಸುವುದು ಅದ್ಭುತವಾಗಿದೆ. ಫಿನಿಶರ್ ಆಗಿ ನಾನು ಆರ್ಸಿಬಿಗಾಗಿ ಏನು ಮಾಡುತ್ತಿದ್ದೇನೋ ಅದು ಸಂಪೂರ್ಣ ಆನಂದದಾಯಕವಾಗಿದೆ ಎಂದು ಹೇಳುತ್ತಾರೆ ದಿನೇಶ್ ಕಾರ್ತಿಕ್.
Advertisement