ಚಾಂಪಿಯನ್ಸ್ ಟ್ರೋಫಿ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮತ್ತೊಂದು ಶಾಕ್: ಟಿ20 ವಿಶ್ವಕಪ್‌ನಿಂದ ಹಿಂದೆ ಸರಿದ ಭಾರತ!

ಭಾರತೀಯ ಪುರುಷರ ಅಂಧ ಕ್ರಿಕೆಟ್ ತಂಡದ ನಾಯಕ ದುರ್ಗಾ ರಾವ್ ತೋಂಪಕಿ, ನಾವು ಉತ್ಸಾಹದಿಂದ ಆಡುತ್ತೇವೆ. ನಮ್ಮ ದೇಶವನ್ನು ಬಹಳ ಹೆಮ್ಮೆಯಿಂದ ಪ್ರತಿನಿಧಿಸುತ್ತೇವೆ. ನಾವು ಯಾವಾಗಲೂ ದೊಡ್ಡ ವೇದಿಕೆಯಲ್ಲಿ ಸ್ಪರ್ಧಿಸಲು ಎದುರು ನೋಡುತ್ತೇವೆ ಎಂದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ನವೆಂಬರ್ 22ರಿಂದ ಡಿಸೆಂಬರ್ 3ರವರೆಗೆ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಮುಂಬರುವ ನಾಲ್ಕನೇ ಟಿ20 ಅಂಧರ ವಿಶ್ವಕಪ್ ಕ್ರಿಕೆಟ್‌ನಿಂದ ಹಿಂದೆ ಸರಿಯಲು ಭಾರತೀಯ ಕ್ರಿಕೆಟ್ ಸಂಸ್ಥೆ (ಸಿಎಬಿಐ) ನಿರ್ಧರಿಸಿದೆ. ಭಾರತ ಸರ್ಕಾರದಿಂದ ಅನುಮೋದನೆ ಸಿಗದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಭಾರತೀಯ ಪುರುಷರ ಅಂಧ ಕ್ರಿಕೆಟ್ ತಂಡದ ನಾಯಕ ದುರ್ಗಾ ರಾವ್ ತೋಂಪಕಿ, ನಾವು ಉತ್ಸಾಹದಿಂದ ಆಡುತ್ತೇವೆ. ನಮ್ಮ ದೇಶವನ್ನು ಬಹಳ ಹೆಮ್ಮೆಯಿಂದ ಪ್ರತಿನಿಧಿಸುತ್ತೇವೆ. ನಾವು ಯಾವಾಗಲೂ ದೊಡ್ಡ ವೇದಿಕೆಯಲ್ಲಿ ಸ್ಪರ್ಧಿಸಲು ಎದುರು ನೋಡುತ್ತೇವೆ ಮತ್ತು ಈ ಅವಕಾಶವನ್ನು ಕಳೆದುಕೊಂಡಿರುವುದು ನಿರಾಶಾದಾಯಕವಾಗಿದೆ ಎಂದರು.

CABI ಹೊಸ ಪ್ರತಿಭೆಗಳನ್ನು ಉತ್ತೇಜಿಸಲು ಮತ್ತು ಅದರ ಆಟಗಾರರ ಕೌಶಲ್ಯಗಳನ್ನು ಹೆಚ್ಚಿಸುವತ್ತ ಗಮನಹರಿಸುವುದನ್ನು ಮುಂದುವರೆಸಿದೆ, ಇದರಿಂದಾಗಿ ತಂಡವು ಭವಿಷ್ಯದ ಸ್ಪರ್ಧೆಗಳಿಗೆ ಸಿದ್ಧವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಭಾರತದಲ್ಲಿ ನಡೆದ ಹಿಂದಿನ ಮೂರು ಆವೃತ್ತಿಗಳಲ್ಲಿ (2012, 2017 ಮತ್ತು 2022) ಅಂಧರ T20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿತ್ತು. ಭಾರತ ಮೊದಲ ಎರಡು ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ್ದರೆ 2022ರಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಚಾಂಪಿಯನ್​ ಆಗಿತ್ತು.

ಸಂಗ್ರಹ ಚಿತ್ರ
ಪಾಕಿಸ್ತಾನದಲ್ಲಿ ಟ್ರೋಫಿ ಟೂರ್ ಆರಂಭಿಸಿದ ICC; ಬಿಸಿಸಿಐ ಆಕ್ಷೇಪ ಹಿನ್ನೆಲೆ PoK ಪ್ರವೇಶಕ್ಕೆ ಬ್ರೇಕ್!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com